ಸಾಂದರ್ಭಿಕ ಚಿತ್ರ  
ದೇಶ

ಕರುವನ್ನೂರ್ ಬ್ಯಾಂಕ್ ಹಗರಣ: CPM ಬಳಿ 100 ಕೋಟಿ ರೂ ಬಹಿರಂಗಪಡಿಸದ ಸಂಪತ್ತು; ED ಆರೋಪ

ಕರುವನ್ನೂರು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ಪ್ರಕರಣ ಮಾಹಿತಿ ವರದಿಯಲ್ಲಿ ಹೆಸರು ಕಾಣಿಸಿಕೊಂಡಿರುವ ಸಿಪಿಎಂ ನಾಯಕರು ಸೇರಿದಂತೆ ಎಲ್ಲ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸುವಂತೆ ಹೈಕೋರ್ಟ್ ಅಪರಾಧ ವಿಭಾಗಕ್ಕೆ ನಿರ್ದೇಶನ ನೀಡಿದೆ.

ಕೊಚ್ಚಿ: ಕರುವನ್ನೂರು ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ತ್ರಿಶೂರ್ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಸಿಪಿಎಂ 100 ಕೋಟಿ ರೂಪಾಯಿಗಳಷ್ಟು ಬಹಿರಂಗಪಡಿಸದ ಸಂಪತ್ತನ್ನು ಸಂಗ್ರಹಿಸಿದೆ ಎಂದು ಪತ್ತೆಹಚ್ಚಿದೆ.

ಕರುವನ್ನೂರು ಹಗರಣದ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ನಿಧಿ ಸಂಗ್ರಹಿಸಲು ಬಹು ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ನಂತರ ತನಿಖಾ ಸಂಸ್ಥೆಗಳು ಮತ್ತು ಚುನಾವಣಾ ಆಯೋಗದಿಂದ ತನಿಖೆ ತಪ್ಪಿಸಲು ಮುಚ್ಚಲಾಯಿತು ಎಂದು ಇಡಿ ತಿಳಿಸಿದೆ.

ಠೇವಣಿಗಳ ಮೂಲವು ಸಂಬಂಧಪಟ್ಟವರ ಲೆವಿಗಳು, ಚುನಾವಣಾ ನಿಧಿ, ಕರುವನ್ನೂರು ಬ್ಯಾಂಕಿನಿಂದ ಅಕ್ರಮ ಸಾಲಗಳ ಫಲಾನುಭವಿಗಳಿಂದ ಕಮಿಷನ್ ಮತ್ತು ಸಾಲಗಾರರಿಂದ ಕಮಿಷನ್ ಸಂಗ್ರಹಿಸುವ ನಾಮನಿರ್ದೇಶಿತ ಕೊಡುಗೆಗಳನ್ನು ಒಳಗೊಂಡಿವೆ.

ಕರುವನ್ನೂರು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ಪ್ರಕರಣ ಮಾಹಿತಿ ವರದಿಯಲ್ಲಿ ಹೆಸರು ಕಾಣಿಸಿಕೊಂಡಿರುವ ಸಿಪಿಎಂ ನಾಯಕರು ಸೇರಿದಂತೆ ಎಲ್ಲ ವ್ಯಕ್ತಿಗಳ ವಿರುದ್ಧ ತನಿಖೆ ಆರಂಭಿಸುವಂತೆ ಹೈಕೋರ್ಟ್ ಅಪರಾಧ ವಿಭಾಗಕ್ಕೆ ನಿರ್ದೇಶನ ನೀಡಿದೆ.

ಈ ಬ್ಯಾಂಕ್ ಖಾತೆಗಳು, ಠೇವಣಿಗಳು ಮತ್ತು ಸ್ವತ್ತುಗಳು - ಸ್ಥಳೀಯ ಪಕ್ಷದ ಕಚೇರಿಗಳು ಸೇರಿದಂತೆ - ಸಿಪಿಎಂನ ಜಿಲ್ಲಾ, ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದಲ್ಲಿ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳಲ್ಲಿ ಘೋಷಿಸಲಾಗಿಲ್ಲ ಎಂದು ಇಡಿ ಹೇಳಿದೆ.

ಇದು ರಾಜಕೀಯ ಪಕ್ಷಗಳಿಂದ ಕಡ್ಡಾಯವಾಗಿ ಖಾತೆಗಳ ಘೋಷಣೆಯ ಕುರಿತು ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಾರ್ಚ್ 31, 2023 ರ ಹೊತ್ತಿಗೆ ಸಿಪಿಎಂನ ತ್ರಿಶೂರ್ ಜಿಲ್ಲಾ ಸಮಿತಿಯ ಬ್ಯಾಲೆನ್ಸ್ ಶೀಟ್‌ಗಳನ್ನು ಪರಿಶೀಲಿಸಿದಾಗ, ಸಿಪಿಎಂನ 17 ಪ್ರದೇಶ ಸಮಿತಿಗಳಿಗೆ ಸೇರಿದ 25 ಬ್ಯಾಂಕ್ ಖಾತೆಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಕಂಡುಬಂದಿದೆ.

ಈ ಖಾತೆಗಳು 1.73 ಕೋಟಿ ರೂಪಾಯಿ ಮತ್ತು ಸ್ಥಿರ ಠೇವಣಿಗಳು 63.98 ಲಕ್ಷ ರೂಪಾಯಿಗಳಾಗಿವೆ. ಇದಲ್ಲದೆ, ಕಳೆದ 10 ವರ್ಷಗಳಲ್ಲಿ ಈ ಬಹಿರಂಗಪಡಿಸದ ಖಾತೆಗಳಲ್ಲಿನ ಠೇವಣಿಗಳ ನಿಜವಾದ ಮೊತ್ತವು 100 ಕೋಟಿ ರೂಪಾಯಿಗಳನ್ನು ಮೀರುವ ನಿರೀಕ್ಷೆಯಿದೆ ಎಂದು ನಿನ್ನೆ ಸಲ್ಲಿಸಲಾದ ಕೊಚ್ಚಿ ವಲಯದ ಜಾರಿ ನಿರ್ದೇಶನಾಲಯದ ವರದಿ ತಿಳಿಸಿದೆ.

ಹೆಚ್ಚಿನ ತನಿಖೆ ನಡೆಯುತ್ತಿದೆ: ಇಡಿ

ಹಿರಿಯ ಸಿಪಿಎಂ ನಾಯಕರು ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆ ಅವರಿಂದ ಹಣ ವರ್ಗಾವಣೆಯಾಗಿದೆ ಎಂದು ಇಡಿ ಹೇಳಿದೆ. ಸಾಲದ ಅರ್ಜಿಗಳಲ್ಲಿ ನಕಲಿ ವಿಳಾಸಗಳನ್ನು ನೀಡುವ ಮೂಲಕ ಸದಸ್ಯತ್ವ ನೀಡಲಾಗಿದೆ ಎಂದು ಬ್ಯಾಂಕಿನ ಆಗಿನ ಕಾರ್ಯದರ್ಶಿ ಸುನಿಲ್ ಕುಮಾರ್ ಟಿ ಆರ್ ಇಡಿ ಮುಂದೆ ಹೇಳಿಕೆ ನೀಡಿದ್ದಾರೆ.

ಆಗಿನ ಸಿಪಿಎಂ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಎ ಸಿ ಮೊಯಿದೀನ್, ಪಕ್ಷದ ವೆಟ್ರಾನ್ ಪಲೋಲ್ಲಿ ಮುಹಮ್ಮದ್ ಕುಟ್ಟಿ ಮತ್ತು ಅಂದಿನ ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಪಿ ರಾಜೀವ್ ಸೇರಿದಂತೆ ಬ್ಯಾಂಕ್ ನಿರ್ದೇಶಕ ಮಂಡಳಿ ಸದಸ್ಯರು ಮತ್ತು ರಾಜಕೀಯ ನಾಯಕರ ಒತ್ತಡದಿಂದಾಗಿ ಸಾಲಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು. ಬ್ಯಾಂಕಿನ ದೈನಂದಿನ ವ್ಯವಹಾರಗಳನ್ನು ಸಿಪಿಎಂ ಪಕ್ಷದ ಉಪಸಮಿತಿ ನಿಯಂತ್ರಿಸುತ್ತಿದೆ ಎಂದು ಅವರು ಹೇಳಿದರು.

ಇಡಿ ಪ್ರಸ್ತುತ ಹೆಚ್ಚಿನ ತನಿಖೆ ನಡೆಸುತ್ತಿದೆ, ಕರುವನ್ನೂರ್ ಹಗರಣದಿಂದ ಉಂಟಾದ ಹಣ ವರ್ಗಾವಣೆಯ ಅಪರಾಧಕ್ಕೆ ಸಂಬಂಧಿಸಿದ ರಾಜಕೀಯ ನಾಯಕರು ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಸಮನ್ಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT