ಸ್ಯಾಮ್ಯುಯೆಲ್ ನಥಾನಿಯಲ್ 
ದೇಶ

ಪಹಲ್ಗಾಮ್ ಉಗ್ರ ದಾಳಿ: ಕಲ್ಮಾ ಓದಲು ವಿಫಲ; ಮಗಳ ಮುಂದೆ ಸ್ಯಾಮ್ಯುಯೆಲ್ ನಥಾನಿಯಲ್ ತಲೆಗೆ ಗುಂಡಿಕ್ಕಿದ ಉಗ್ರರು!

ಭಯೋತ್ಪಾದಕರು ಮೊದಲು ಸ್ಯಾಮ್ಯುಯೆಲ್ ನನ್ನು ಮೊಣಕಾಲುಗಳ ಮೇಲೆ ಕೂರಿಸಿದರು ಎಂದು ಅವರ ಸಹೋದರ ವಿಕಾಸ್ ಕುಮಾವತ್ ಹೇಳಿದ್ದಾರೆ.

ಇಂದೋರ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಾರೆ. ಬೈಸರನ್ ಕಣಿವೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಇಂದೋರ್‌ನ ಸುಶೀಲ್ ನಥಾನಿಯಲ್ ಕೂಡ ಸಾವನ್ನಪ್ಪಿದರು. ಅವರ ಮಗಳು ಆಕಾಂಕ್ಷಾ ಗಾಯಗೊಂಡಿದ್ದಾರೆ. ಅವರು ತಮ್ಮ ಪತ್ನಿ ಜೆನ್ನಿಫರ್ ಹುಟ್ಟುಹಬ್ಬವನ್ನು ಆಚರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದರು. ಭಯೋತ್ಪಾದಕರು ಮೊದಲು ಸುಶೀಲ್‌ನನ್ನು ಮೊಣಕಾಲುಗಳ ಮೇಲೆ ಕೂರಿಸಿ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಧ್ಯಪ್ರದೇಶದ ಅಲಿರಾಜ್‌ಪುರದ ಜೋಬಾಟ್‌ನ ನಿವಾಸಿ ಸುಶೀಲ್ ನಥಾನಿಯಲ್ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿದ ನಂತರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬ ಸದಸ್ಯರು ಪ್ರಧಾನಿಯಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಭಯೋತ್ಪಾದಕರನ್ನು ಹುಡುಕಿ ಹುಡುಕಿ ಕೊಲ್ಲಬೇಕು ಎಂದು ಹೇಳಿದ್ದಾರೆ.

ಭಯೋತ್ಪಾದಕರು ಮೊದಲು ಸ್ಯಾಮ್ಯುಯೆಲ್ ನನ್ನು ಮೊಣಕಾಲುಗಳ ಮೇಲೆ ಕೂರಿಸಿದರು ಎಂದು ಅವರ ಸಹೋದರ ವಿಕಾಸ್ ಕುಮಾವತ್ ಹೇಳಿದ್ದಾರೆ. ಅದಾದ ನಂತರ, ಅವರನ್ನು ಕಲ್ಮಾ ಪಠಿಸುವಂತೆ ಒತ್ತಾಯಿಸಲಾಯಿತು. ಅವನು ತನ್ನ ಧರ್ಮ ಕ್ರಿಶ್ಚಿಯನ್ ಎಂದು ಹೇಳಿದಾಗ, ಭಯೋತ್ಪಾದಕರು ಅವನಿಗೆ ಗುಂಡಿಕ್ಕಿ ಕೊಂದರು. ಮಾಹಿತಿಯ ಪ್ರಕಾರ, ಸುಶೀಲ್ ಅವರ ಮಗಳ ಮೇಲೂ ಗುಂಡು ಹಾರಿಸಲಾಗಿದ್ದು, ಅದು ಅವರ ಕಾಲಿಗೆ ತಗುಲಿದೆ. ಘಟನೆಗೂ ಮುನ್ನ, ಸುಶೀಲ್ ತನ್ನ ಹೆಂಡತಿಯನ್ನು ಬಚ್ಚಿಟ್ಟು ನಂತರ ಸ್ವತಃ ಭಯೋತ್ಪಾದಕರ ಮುಂದೆ ನಿಂತು ಮಾತನಾಡಿದ್ದರು.

ಸುಶೀಲ್ ನಥಾನಿಯಲ್ ಅವರ ಕುಟುಂಬ ಮೂಲತಃ ಮಧ್ಯಪ್ರದೇಶದ ಅಲಿರಾಜ್‌ಪುರದ ಜೋಬಾಟ್‌ನಿಂದ ಬಂದಿದೆ. ಆದಾಗ್ಯೂ, ಅವರು ಪ್ರಸ್ತುತ ಇಂದೋರ್‌ನ MR 10 ರ ಅಭಿನಂದನ್ ನಗರದಲ್ಲಿ ವಾಸಿಸುತ್ತಿದ್ದಾರೆ. ಸುಶೀಲ್ ಅವರನ್ನು ಅಲಿರಾಜ್‌ಪುರದಲ್ಲಿರುವ ಎಲ್‌ಐಸಿಯ ಉಪಗ್ರಹ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ನೇಮಿಸಲಾಗಿತ್ತು. ಸುಶೀಲ್ ನಾಲ್ಕು ದಿನಗಳ ಹಿಂದೆ ತಮ್ಮ ಪತ್ನಿ ಜೆನ್ನಿಫರ್ ಹುಟ್ಟುಹಬ್ಬವನ್ನು ತಮ್ಮ 21 ವರ್ಷದ ಮಗ ಆಸ್ಟನ್ ಮತ್ತು 30 ವರ್ಷದ ಮಗಳು ಆಕಾಂಕ್ಷಾ ಜೊತೆ ಆಚರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT