ಶೈಲೇಶ್ ಕಲಾಥಿಯಾ 
ದೇಶ

Pahalgam attack: ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ; ಉಗ್ರರ ಗುಂಡಿಗೆ ಬಲಿಯಾದ ಶೈಲೇಶ್ ಕಲಾಥಿಯಾ ಪತ್ನಿ ರೋಧನ!

ಇನ್ನೂ ಆಘಾತದಲ್ಲಿರುವ ಶೀತಲ್, ಸಿನಿಮಾಗಳಲ್ಲಿ ಮಾತ್ರ ಹೀಗೆ ನಡೆಯುವುದನ್ನು ನೋಡಿದ್ದೆ. ಆದರೆ, ಇದನ್ನು ನಿಜ ಜೀವನದಲ್ಲಿ ನೋಡಿದಾಗ ಸಾಕಷ್ಟು ದು:ಖವಾಯಿತು ಎಂದರು.

ಸೂರತ್: ಜಮ್ಮು ಮತ್ತು ಕಾಶ್ಮೀರದಲ್ಲಿ ಪಹಲ್ಗಾಮ್ ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದಾಗ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿಯೂ ಇರಲಿಲ್ಲ ಎಂದು ದಾಳಿಯಲ್ಲಿ ಬಲಿಯಾದ ಉತ್ತರ ಪ್ರದೇಶದ ಶೈಲೇಶ್ ಕಲಾಥಿಯಾ ಅವರ ಪತ್ನಿ ಶೀತಲ್ ಕಲಥಿಯಾ ಹೇಳಿದ್ದಾರೆ.

ಭೀಕರ ಘಟನೆ ಕುರಿತು ಸುದ್ದಿಗಾರರೊಂದಿಗೆ ಕಣ್ಣೀರಿಟ್ಟು ಮಾತನಾಡಿದ ಅವರು, ಮಿನಿ ಸ್ವಿಟ್ಜರ್ಲೆಂಡ್‌ನ ತುದಿಯನ್ನು ತಲುಪಿದಾಗ ಎರಡು ಬಾರಿ ಗುಂಡಿನ ಸದ್ದು ಕೇಳಿತು. ತಕ್ಷಣ ಅಲ್ಲಿದ್ದವರು ಓಡಲು ಶುರು ಮಾಡಿದರು. ನಮ್ಮನ್ನು ಸುತ್ತುವರೆದ ಉಗ್ರರು, ಮುಸ್ಲಿಂ ಪುರುಷರಿಂದ ಹಿಂದೂ ವ್ಯಕ್ತಿಗಳು ಬೇರೆಯಾಗಲು ಹೇಳಿದರು. ನಾವೆಲ್ಲಾ ಮೌನವಾಗಿದ್ದೆವು. ಅವರು ಹೋಗ್ತಾರೆ ಅಂದುಕೊಂಡಿದ್ದೇವು. ಆದರೆ, ಒಂದೇ ಒಂದು ಸೆಕೆಂಡ್ ನಲ್ಲಿ ಎಲ್ಲವೂ ಮುಗಿಯಿತು. ಅವರೆಲ್ಲರೂ ಸಾಯುವುದನ್ನು ಅವರು ನೋಡಿದರು. ನಾನು ಏನು ಮಾಡಲು ಸಾಧ್ಯವಾಗಿಲಿಲ್ಲ ಎಂದು ತಿಳಿಸಿದರು.

ಇನ್ನೂ ಆಘಾತದಲ್ಲಿರುವ ಶೀತಲ್, ಸಿನಿಮಾಗಳಲ್ಲಿ ಮಾತ್ರ ಹೀಗೆ ನಡೆಯುವುದನ್ನು ನೋಡಿದ್ದೆ. ಆದರೆ, ಇದನ್ನು ನಿಜ ಜೀವನದಲ್ಲಿ ನೋಡಿದಾಗ ಸಾಕಷ್ಟು ದು:ಖವಾಯಿತು ಎಂದರು.

ಅಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಅಂತಹ ಪ್ರದೇಶಗಳಲ್ಲಿ ಉಗ್ರರ ಅಪಾಯದ ಬಗ್ಗೆ ತಿಳಿದಿದ್ದರೆ, ಭದ್ರತಾ ಸಿಬ್ಬಂದಿ ಯಾರನ್ನೂ ಅಲ್ಲಿಗೆ ಹೋಗಲು ಬಿಡಬಾರದು ಎಂದು ಅವರು ಹೇಳಿದರು. "ನನ್ನ ತಂದೆ, ನನ್ನ ತಾಯಿ ಮತ್ತು ನನ್ನ ಸಹೋದರಿ ಸೇರಿದಂತೆ ನಾವು ನಾಲ್ವರು ಹೋಗಿದ್ದೇವೆ" ಎಂದು ಉಗ್ರರ ಗುಂಡಿಗೆ ಬಲಿಯಾದ ಮೃತರ ಪುತ್ರ ನಕ್ಷ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT