ಮಲ್ಲಿಕಾರ್ಜುನ ಖರ್ಗೆ 
ದೇಶ

ಬಿಹಾರ SIR ಕುರಿತು ಚರ್ಚೆಗೆ ಅವಕಾಶ ನೀಡಿ: ರಾಜ್ಯಸಭೆ ಉಪಸಭಾಪತಿಗೆ ಖರ್ಗೆ ಪತ್ರ

ಪತ್ರದಲ್ಲಿ ಸಭಾಪತಿಯ ಹಿಂದಿನ ರೂಲಿಂಗ್ ಅನ್ನು ಉಲ್ಲೇಖಿಸಿರುವ ಖರ್ಗೆ ಅವರು, SIR ಕುರಿತು ಚರ್ಚೆ ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಪ್ರಾಮುಖ್ಯತೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನವದೆಹಲಿ: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಸಭಾಪತಿಯ ಹಿಂದಿನ ರೂಲಿಂಗ್ ಅನ್ನು ಉಲ್ಲೇಖಿಸಿರುವ ಖರ್ಗೆ ಅವರು, SIR ಕುರಿತು ಚರ್ಚೆ ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಪ್ರಾಮುಖ್ಯತೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಉಪಸಭಾಪತಿಗೆ ಬರೆದ ಪತ್ರದಲ್ಲಿ, ಜುಲೈ 21, 2023 ರಂದು, ಆಗಿನ ರಾಜ್ಯಸಭೆಯ ಅಧ್ಯಕ್ಷರು "... ಈ ಸದನವು ಎಲ್ಲವನ್ನೂ ಒಂದೇ ನಿರ್ಬಂಧದೊಂದಿಗೆ ಚರ್ಚಿಸಲು ಅರ್ಹವಾಗಿದೆ..." ಎಂದು ರೂಲಿಂಗ್ ನೀಡಿದ್ದರು ಎಂದು ಖರ್ಗೆ ಹೇಳಿದ್ದಾರೆ.

"ಸಭಾಪತಿಯು ನಿರಂತರ ಮುಂದುವರಿಯುವ ಪ್ರಕ್ರಿಯೆ ಎಂಬುದನ್ನು ನೀವು ನಿಸ್ಸಂದೇಹವಾಗಿ ಪ್ರಶಂಸಿಸುತ್ತೀರಿ. ನಿಮ್ಮ ಕೆಲವು ನಿರ್ಧಾರಗಳನ್ನು ಬೆಂಬಲಿಸಲು ಕಳೆದ ಹಲವು ವರ್ಷಗಳಿಂದ ಸಭಾಪತಿಗಳು ನೀಡಿದ ರೂಲಿಂಗ್ ಅನ್ನು ನೀವೇ ಉಲ್ಲೇಖಿಸಿದ್ದೀರಿ. ನಮ್ಮ ಪ್ರಜಾಪ್ರಭುತ್ವದಲ್ಲಿ ಮೂಲಭೂತ ಪ್ರಾಮುಖ್ಯತೆಯನ್ನು ಹೊಂದಿರುವ ಮತದಾರರ ಪಟ್ಟಿಗಳ ಪರಿಷ್ಕರಣೆಯ ವಿಷಯವನ್ನು ಚರ್ಚಿಸಲು ರಾಜ್ಯಸಭೆಗೆ ಅರ್ಹತೆ ಇದೆ ಎಂಬುದು ಸಭಾಪತಿಗಳ ಈ ರೂಲಿಂಗ್ ನಿಂದ ಸ್ಪಷ್ಟವಾಗಿದೆ" ಎಂದು ಖರ್ಗೆ ಉಪಸಭಾಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆಯನ್ನು ಚುನಾವಣಾ ಆಯೋಗವು ಮೊದಲು ಬಿಹಾರದಲ್ಲಿ ಕೈಗೊಳ್ಳುತ್ತಿದೆ ಮತ್ತು ನಂತರ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರ ರಾಜ್ಯಗಳಲ್ಲಿ ಕೈಗೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.

ಪ್ರಸಕ್ತ ಅಧಿವೇಶನದ ಮೊದಲ ದಿನದಿಂದಲೇ ವಿರೋಧ ಪಕ್ಷದ ಸಂಸದರು ಸದನದಲ್ಲಿ ತುರ್ತು ಚರ್ಚೆಗೆ ಪದೇ ಪದೇ ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

"ಆದ್ದರಿಂದ, ನನ್ನ ಪರವಾಗಿ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಪರವಾಗಿ, ಕೋಟ್ಯಂತರ ಮತದಾರರಿಗೆ, ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಿಗೆ ಸೇರಿದವರಿಗೆ ಅತ್ಯಂತ ಕಳವಳಕಾರಿಯಾದ ಈ ವಿಷಯದ ಬಗ್ಗೆ ಚರ್ಚೆಗೆ ತಕ್ಷಣ ಅವಕಾಶ ನೀಡುವಂತೆ ವಿನಂತಿಸಲು ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ" ಎಂದು ಖರ್ಗೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT