ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿಯಲ್ಲಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋದ ದೃಶ್ಯ 
ದೇಶ

ಉತ್ತರಕಾಶಿ: ಪ್ರಕೃತಿ ವಿಕೋಪಕ್ಕೆ ಸಿಲುಕಿರುವವರನ್ನು ಸ್ಥಳಾಂತರಿಸಲು 4 ಹೆಲಿಕಾಪ್ಟರ್‌ ನಿಯೋಜನೆ; 49 ಮಂದಿ ನಾಪತ್ತೆ

ಅಧಿಕೃತ ಮಾಹಿತಿಯ ಪ್ರಕಾರ, ಮಂಗಳವಾರ ಸಂಭವಿಸಿದ ಭೂ ಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಸಂಪರ್ಕ ಕಡಿತಗೊಂಡಿರುವ ವಿಪತ್ತು ಪೀಡಿತ ಧರಾಲಿ ಪ್ರದೇಶದ ಕೆಲವು ಭಾಗಗಳಿಂದ 729 ಜನರನ್ನು ಸ್ಥಳಾಂತರಿಸಲಾಗಿದೆ.

ಉತ್ತರಕಾಶಿ: ಈ ವಾರದ ಆರಂಭದಲ್ಲಿ ಉತ್ತರಾಖಂಡ ರಾಜ್ಯದ ಉತ್ತರಕಾಶಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಲ್ಲಿ ಹಲವಾರು ಜೀವಗಳು ಬಲಿಯಾಗಿ, ಅಪಾರ ಹಾನಿ ಸಂಭವಿಸಿದ ನಂತರ ಅಲ್ಲಿ ಸಿಲುಕಿಕೊಂಡಿರುವ ಜನರನ್ನು ವಿಮಾನದ ಮೂಲಕ ಸಾಗಿಸಲು ನಾಲ್ಕು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಮಂಗಳವಾರ ಸಂಭವಿಸಿದ ಭೂ ಕುಸಿತ ಮತ್ತು ಹಠಾತ್ ಪ್ರವಾಹದ ನಂತರ ಸಂಪರ್ಕ ಕಡಿತಗೊಂಡಿರುವ ವಿಪತ್ತು ಪೀಡಿತ ಧರಾಲಿ ಪ್ರದೇಶದ ಕೆಲವು ಭಾಗಗಳಿಂದ 729 ಜನರನ್ನು ಸ್ಥಳಾಂತರಿಸಲಾಗಿದೆ.

ವಿಪತ್ತಿನಲ್ಲಿ ಐವರು ಮೃತಪಟ್ಟಿದ್ದು 49 ಜನರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಜನರನ್ನು ರಕ್ಷಿಸಲು ಉತ್ತರಾಖಂಡ ನಾಗರಿಕ ವಿಮಾನಯಾನ ಪ್ರಾಧಿಕಾರದ ನಾಲ್ಕು ಹೆಲಿಕಾಪ್ಟರ್‌ಗಳು ಇಂದು ಐದನೇ ದಿನದಂದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಪರಿಹಾರ ಶಿಬಿರಕ್ಕೆ ಜನರೇಟರ್ ನ್ನು ಸಾಗಿಸುವ ಚಿನೂಕ್ ಹೆಲಿಕಾಪ್ಟರ್ ಇಂದು ಬೆಳಗ್ಗೆ ಜಾಲಿಗ್ರಾಂಟ್ ವಿಮಾನ ನಿಲ್ದಾಣದಿಂದ ಹೊರಟಿತು. ಧರಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಹಠಾತ್ ಪ್ರವಾಹದಿಂದ ವ್ಯತ್ಯಯವುಂಟಾಯಿತು.

ಪ್ರವಾಹ ಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಸುಧಾರಿಸಲು ಗಂಗ್ನಾನಿ ಬಳಿಯ ಲಿಮ್ಚಿಗಡ್‌ನಲ್ಲಿ ಬೈಲಿ ಸೇತುವೆಯನ್ನು ಯುದ್ಧೋಪಾದಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರ ನಿರ್ಮಾಣ ಕಾರ್ಯವು ರಾತ್ರಿಯಿಡೀ ನಡೆದಿದ್ದು, ಮುಂದಿನ 24 ಗಂಟೆಗಳಲ್ಲಿ ಅದು ಸಿದ್ಧವಾಗಲಿದೆ.

ಧಾರಾಲಿಯಲ್ಲಿ ಹಠಾತ್ ಪ್ರವಾಹದಿಂದ ಹಾನಿಗೊಳಗಾದ ಸ್ಥಳದಲ್ಲಿ ಬಿದ್ದಿರುವ ಟನ್‌ಗಟ್ಟಲೆ ಅವಶೇಷಗಳ ಮೂಲಕ ಕಾಣೆಯಾದವರನ್ನು ಹುಡುಕಲು ಅಗತ್ಯವಾದ ಸುಧಾರಿತ ಉಪಕರಣಗಳನ್ನು ಸಾಗಿಸುವ ಪ್ರಯತ್ನಗಳಿಗೆ ಗಂಗೋತ್ರಿ ಹೆದ್ದಾರಿಯಲ್ಲಿ ಹಲವಾರು ಹಂತಗಳಲ್ಲಿ ಅಡಚಣೆ ಉಂಟಾಗಿದ್ದು, ಹಲವು ಕಡೆ ಬಿರುಕು ಮೂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಲು ಶಿಕ್ಷೆಗೆ ಗುರಿಯಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಹಸ್ತಾಂತರಿಸಿ: ಭಾರತಕ್ಕೆ ಬಾಂಗ್ಲಾದೇಶ ಆಗ್ರಹ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ರದ್ದು ಮಾಡಿದ ಹೈಕೋರ್ಟ್!

Delhi blast: ಪ್ರಮುಖ ಆರೋಪಿಯ ಸಹಚರನನ್ನು ಬಂಧಿಸಿದ NIA

Delhi blast: ಆಸ್ಪತ್ರೆಯಲ್ಲಿ ಮತ್ತೆ ಇಬ್ಬರು ಸಾವು; ಸಾವಿನ ಸಂಖ್ಯೆ 15ಕ್ಕೆ ಏರಿಕೆ

'ವಿದೇಶದಲ್ಲಿ ವಾಸ, 20 ಕೋಟಿ ರೂ ಆದಾಯ': Piracy ಮಾಸ್ಟರ್ ಮೈಂಡ್ Ravi immadi ಸಿಕ್ಕಿಬಿದ್ದಿದ್ದೇ ರೋಚಕ; ಪತ್ನಿಯೇ ತೋಡಿದ್ದಳು ಗುಂಡಿ!

SCROLL FOR NEXT