ಸಿಎಂ ನಿತೀಶ್ ಕುಮಾರ್ 
ದೇಶ

Bihar: ಮುಸ್ಲಿಂ ‘topi’; ಹಿಂದೊಮ್ಮೆ ಮೋದಿ ಟೀಕಿಸಿದ್ದ ನಿತೀಶ್ ಕುಮಾರ್ ಈಗ ಮಾಡಿದ್ದೇನು? Video ನೋಡಿ.....

ಕೊನೆಗೆ ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಜಮಾ ಖಾನ್ ಅವರ ತಲೆಯ ಮೇಲೆ ಇರಿಸಿದರು.

ಪಾಟ್ನಾ: 12 ವರ್ಷಗಳ ಹಿಂದೆ ಮುಸ್ಲಿಂ ಟೋಫಿ ಧರಿಸಲು ನಿರಾಕರಿಸಿದ್ದ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ, ತಾವು ಕೂಡಾ ಮುಸ್ಲಿಂ ಟೋಫಿ ಧರಿಸಲು ನಿರಾಕರಿಸಿದ್ದಾರೆ.

ಬಿಹಾರ ರಾಜ್ಯ ಮದರಸಾ ಶಿಕ್ಷಣ ಮಂಡಳಿಯ ಕಾರ್ಯಕ್ರಮವೊಂದರಲ್ಲಿ ನಿತೀಶ್ ಕುಮಾರ್ ಅವರಿಗೆ ಮುಸ್ಲಿಮರು ಸಾಮಾನ್ಯವಾಗಿ ಧರಿಸುವ ಟೋಫಿ ನೀಡಲಾಯಿತು. ಆದರೆ ಅದನ್ನು ಸ್ವೀಕರಿಸದ ನಿತೀಶ್ ಕುಮಾರ್, ನಗು ನಗುತ್ತಾಲೇ ಅದನ್ನು ಎರಡೂ ಕೈಗಳಿಂದ ಹಿಂದಕ್ಕೆ ತಳ್ಳಿದರು.

ಕೊನೆಗೆ ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಜಮಾ ಖಾನ್ ಅವರ ತಲೆಯ ಮೇಲೆ ಇರಿಸಿದರು. ಸುದ್ದಿಸಂಸ್ಥೆ ANI ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

12 ವರ್ಷಗಳ ಹಿಂದೆ ನರೇಂದ್ರ ಮೋದಿ ಇನ್ನೂ ಪ್ರಧಾನಿಯಾಗದಿದ್ದಾಗ ಅವರನ್ನು ನಿತೀಶ್ ಕುಮಾರ್ ಗೇಲಿ ಮಾಡಿದ್ದರು. ಇದು ಕೋಮು ರಾಜಕೀಯ ಎಂದು ವಾಗ್ದಾಳಿ ನಡೆಸಿದ್ದರು. ಇದೀಗ ಅವರೇ ಮುಸ್ಲಿಂ ಟೋಫಿ ಹಾಕಿಸಿಕೊಳ್ಳಲು ನಿರಾಕರಿಸಿರುವುದು ಬದಲಾದ ರಾಜಕೀಯಕ್ಕೆ ತಕ್ಕಂತೆ ಅವರ ಬದಲಾವಣೆಯನ್ನು ಗುರುತಿಸುತ್ತದೆ.

2013ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಹಿಂದೂಗಳು ತಿಲಕವನ್ನು ಮುಸ್ಲಿಂರು ಟೋಫಿ ಧರಿಸಬೇಕು ಎಂದು ಒತ್ತಾಯಿಸಿದ್ದರು.

2017 ರ ಹೊತ್ತಿಗೆ, ಮೋದಿ ಪ್ರಧಾನಿಯಾದ ಮೂರು ವರ್ಷಗಳ ನಂತರ, ನಿತೀಶ್ ಮತ್ತೆ ಎನ್ ಡಿಎಗೆ ಮರಳಿದ್ದರು. ಈ ನಡುವೆ 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಗೆದ್ದಿದ್ದರು.

2020 ರ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಗೆದ್ದ ನಂತರ 2023 ರಲ್ಲಿ ಮತ್ತೆ ಎನ್ ಡಿಎ ತೊರೆದಿದ್ದರು. ನಂತರ ಕಳೆದ ವರ್ಷ ಮರಳಿ ಬಿಜೆಪಿ ಜೊತೆಗೆ ಸರ್ಕಾರ ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ಒಟ್ಟಾಗಿ ಹೋರಾಡುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT