ಮುನೀರ್, ರಾಜನಾಥ್ ಸಿಂಗ್ ಸಾಂದರ್ಭಿಕ ಚಿತ್ರ 
ದೇಶ

Confession: ಭಾರತದ 'ಫೆರಾರಿ ಕಾರಿಗೆ ಪಾಕ್‌ ಡಂಪ್ ಟ್ರಕ್' ಗುದ್ದಿದ್ದರೆ ಏನಾಗುತ್ತದೆ?; ಮುನೀರ್ ವಿಲಕ್ಷಣ ಹೇಳಿಕೆಗೆ ರಾಜನಾಥ್ ಸಿಂಗ್ ಲೇವಡಿ

ಎರಡು ದೇಶಗಳು ಒಂದೇ ಅವಧಿಯಲ್ಲಿ ಸ್ವಾತಂತ್ರ್ಯ ಗಳಿಸಿದ್ದು, ಒಂದು ದೇಶವು ಕಠಿಣ ಪರಿಶ್ರಮ, ಸುಭದ್ರ ನೀತಿಗಳು ಮತ್ತು ದೂರದೃಷ್ಟಿಯಿಂದ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶ ಡಂಪರ್ ಸ್ಥಿತಿಯಲ್ಲಿದೆ

ನವದೆಹಲಿ: ಭಾರತವನ್ನು ಐಷಾರಾಮಿ ಫೆರಾರಿ ಕಾರಿಗೆ ಮತ್ತು ತನ್ನ ಸ್ವಂತ ದೇಶ ಪಾಕಿಸ್ತಾನವನ್ನು ಡಂಪ್ ಟ್ರಕ್ ನೊಂದಿಗೆ ಹೋಲಿಸಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ನ ವಿಲಕ್ಷಣವನ್ನು ಪ್ರಯತ್ನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಲೇವಡಿ ಮಾಡಿದ್ದಾರೆ. ಈ ಹೇಳಿಕೆಯನ್ನು ಪಾಕಿಸ್ತಾನದ ವಿಫಲತೆಯ ತಪ್ಪೊಪ್ಪಿಗೆ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಎರಡು ದೇಶಗಳು ಒಂದೇ ಅವಧಿಯಲ್ಲಿ ಸ್ವಾತಂತ್ರ್ಯ ಗಳಿಸಿದ್ದು, ಒಂದು ದೇಶವು ಕಠಿಣ ಪರಿಶ್ರಮ, ಸುಭದ್ರ ನೀತಿಗಳು ಮತ್ತು ದೂರದೃಷ್ಟಿಯಿಂದ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶ ಡಂಪರ್ ಸ್ಥಿತಿಯಲ್ಲಿದೆ. ಅದು ಅವರ ಸ್ವಂತ ವೈಫಲ್ಯವಾಗಿದೆ ಎಂದು ಹೇಳಿದ್ದಾರೆ.

ಅಸಿಮ್ ಮುನೀರ್ ಅವರ ಈ ಹೇಳಿಕೆಯನ್ನು ತಪ್ಪೊಪ್ಪಿಗೆಯಂತೆ ನೋಡುತ್ತೇನೆ ಎಂದು ಹೇಳಿದರು.

ಈ ತಿಂಗಳ ಆರಂಭದಲ್ಲಿ ಅಸಿಮ್ ಮುನೀರ್ ನೀಡಿದ್ದ ಹೇಳಿಕೆಗಳಿಗೆ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದರು. ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮುನೀರ್, ಭಾರತವು ಫೆರಾರಿಯಂತಹ ಹೆದ್ದಾರಿಯಲ್ಲಿ ಬರುತ್ತಿರುವ ಮರ್ಸಿಡಿಸ್ ನಂತೆ ಹೊಳೆಯುತ್ತಿದೆ. ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್ ಆಗಿದ್ದೇವೆ. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು.

ಮುನೀರ್ ಅವರ ಹೇಳಿಕೆ ಪಾಕಿಸ್ತಾನದ ಮನಸ್ಥಿತಿಯೊಂದಿಗೆ ಆಳವಾದ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ. "ಪಾಕಿಸ್ತಾನದ ಸೇನೆಯ ಮುಖ್ಯಸ್ಥರು, ಗೊತ್ತಿದ್ದೋ ಅಥವಾ ತಿಳಿಯದೆಯೋ, ದರೋಡೆಕೋರ ಮನಸ್ಥಿತಿಯತ್ತ ಬೆರಳು ತೋರಿಸಿದ್ದಾರೆ. ಪಾಕಿಸ್ತಾನವು ಹುಟ್ಟಿನಿಂದಲೇ ಅದಕ್ಕೆ ಬಲಿಯಾಗಿದೆ. ನಾವು ಪಾಕಿಸ್ತಾನಿ ಸೇನೆಯ ಈ ಭ್ರಮೆಯನ್ನು ಮುರಿಯಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ಅಸೀಮ್ ಮನೀರ್ ಕಳೆದ ತಿಂಗಳು ಅಮೆರಿಕ ಭೇಟಿ ವೇಳೆಯಲ್ಲಿ ಪರಮಾಣು ಬೆದರಿಕೆ ಸೇರಿದಂತೆ ಅನೇಕ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಭಾರತದ ವಿರುದ್ಧ ಸಾಕಷ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT