ವಿಪಕ್ಷಗಳ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ 
ದೇಶ

Vice-President Polls: ಅದು 'ಸುಪ್ರೀಂ ಕೋರ್ಟ್ ತೀರ್ಪು, ನನ್ನದಲ್ಲ'; ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಅಭ್ಯರ್ಥಿ ಸುದರ್ಶನ್ ರೆಡ್ಡಿ ತಿರುಗೇಟು!

ಪ್ರಜಾಪ್ರಭುತ್ವದಲ್ಲಿ ಸಂಸತ್ತಿನಲ್ಲಿ ಅಡಚಣೆಗಳು ಅತ್ಯಗತ್ಯ. ಆದರೆ ಅವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಬಾರದು ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಆರ್ಥಿಕ ಕೊರತೆಯಿತ್ತು. ಆದರೆ ಈಗ ಪ್ರಜಾಪ್ರಭುತ್ವ ಸಂಕಷ್ಟದ ಪರಿಸ್ಥಿತಿಯಲ್ಲಿದೆ.

ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದ್ದು, ಸಂವಿಧಾನವೂ ಸವಾಲು ಎದುರಿಸುತ್ತಿದೆ ಎಂದು ಹೇಳಿರುವ ಉಪ ರಾಷ್ಟ್ರಪತಿ ಸ್ಥಾನದ ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ, ಅದನ್ನು ರಕ್ಷಿಸುವ ಪ್ರತಿಜ್ಞೆ ಮಾಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ರೆಡ್ಡಿ, ತಮ್ಮ ಉಮೇದುವಾರಿಕೆ ಹೇಗೆ ಬಂದಿತು, ಸಂವಿಧಾನದ ಪೀಠಿಕೆಯಲ್ಲಿನ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳ ಮೇಲಿನ ಚರ್ಚೆಯಿಂದ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕ್ಸಲಿಸಂ ಆರೋಪದವರೆಗೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಸಂಸತ್ತಿನಲ್ಲಿ ಅಡಚಣೆಗಳು ಅತ್ಯಗತ್ಯ. ಆದರೆ ಅವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಬಾರದು ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಆರ್ಥಿಕ ಕೊರತೆಯಿತ್ತು. ಆದರೆ ಈಗ ಪ್ರಜಾಪ್ರಭುತ್ವ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಭಾರತ ಸಾಂವಿಧಾನಿಕ ಪ್ರಜಾಪ್ರಭುತ್ವವಾಗಿ ಮುಂದುವರಿದರೂ ಅದು ಸಂಕಷ್ಟದಲ್ಲಿದೆ ಎಂದು ಪ್ರತಿಪಾದಿಸಿದರು. ಸಂವಿಧಾನವು ದಾಳಿಗೆ ಒಳಗಾಗುತ್ತಿದೆಯೇ ಎಂಬುದರ ಮೇಲಿನ ಚರ್ಚೆಯನ್ನು ಸ್ವಾಗತಿಸಿದರು.

ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳ ನಡುವಿನ ಘರ್ಷಣೆ ಕಡಿಮೆ ಮತ್ತು ವಿಚಾರಗಳ ನಡುವಿನ ಘರ್ಷಣೆ ಹೆಚ್ಚುಎಂದ ಅವರು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಸಂಬಂಧಗಳು ಉತ್ತಮವಾಗಲಿ ಎಂದು ಹಾರೈಸಿದರು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ತನ್ನ ಪ್ರಯಾಣ ಮುಂದುವರಿಯುತ್ತದೆ. ಸಂವಿಧಾನ ರಕ್ಷಿಸುವ ಅವಕಾಶ ದೊರೆತರೆ ಅದು ಅದರಲ್ಲಿ ಅಂತಿಮವಾಗುತ್ತದೆ ಎಂದು ಗುವಾಹಟಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರು ಹೇಳಿದರು.

ಪ್ತಿಪಕ್ಷಗಳು ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಗೌರವದ ಸಂಗತಿಯಾಗಿದೆ. ಇದು ವೈವಿಧ್ಯತೆ, ಸರ್ವಾನುಮತದ ಆಯ್ಕೆ, ಮತದಾನದ ಬಲದ ವಿಷಯವನ್ನು ಪ್ರತಿನಿಧಿಸುತ್ತದೆ. ವಿಶ್ಲೇಷಣೆ ಮಾಡಿದರೆ, ಅವರು ಜನಸಂಖ್ಯೆಯ ಶೇಕಡಾ 63-64 ಕ್ಕಿಂತ ಹೆಚ್ಚು ಪ್ರತಿನಿಧಿಸುತ್ತಾರೆ. ಇನ್ನೇನು ಗೌರವ ಬೇಕು ಎಂದು ಅವರು ಹೇಳಿದರು.

ಅದು ಸುಪ್ರೀಂಕೋರ್ಟ್ ತೀರ್ಪು, ನನ್ನದಲ್ಲ:

ಸಲ್ವಾ ಜುಡಂ ತೀರ್ಪಿನ ಕುರಿತು ಅಮಿತ್ ಶಾ ಟೀಕೆ ವಿರುದ್ಧ ವಾಗ್ದಾಳಿ ನಡೆಸಿದ ರೆಡ್ಡಿ, "ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕನ ಪ್ರಾಣ, ಸ್ವಾತಂತ್ರ್ಯ ಮತ್ತು ಆಸ್ತಿಯನ್ನು ರಕ್ಷಿಸುವುದು ಅವರ ಸಾಂವಿಧಾನಿಕ ಕರ್ತವ್ಯ ಮತ್ತು ಬಾಧ್ಯತೆಯಾಗಿದ್ದು, ಗೃಹ ಸಚಿವರೊಂದಿಗೆ ನೇರವಾಗಿ ಈ ಕುರಿತು ಮಾತನಾಡಲು ಬಯಸುವುದಿಲ್ಲ ಎರಡನೇಯದಾಗಿ ನಾನು ತೀರ್ಪು ಬರೆದಿದ್ದೇನೆ. ತೀರ್ಪು ನನ್ನದಲ್ಲ, ತೀರ್ಪು ಸುಪ್ರೀಂ ಕೋರ್ಟ್‌ನದು ಎಂದು ಹೇಳಿದರು.

ಅಮಿತ್ ಶಾ ತೀರ್ಪು ಓದಲಿ:

40 ಪುಟಗಳವರೆಗಿನ ತೀರ್ಪನ್ನು ಶಾ ಓದಲಿ ಎಂದು ಹಾರೈಸುತ್ತೇನೆ. ಅವರು ತೀರ್ಪನ್ನು ಓದಿದ್ದರೆ, ಬಹುಶಃ ಅವರು ಆ ಕಾಮೆಂಟ್ ಮಾಡುತ್ತಿರಲಿಲ್ಲ. ನಾನು ಹೇಳುವುದು ಇಷ್ಟೇ ಬಿಡಿ... ಚರ್ಚೆಯಲ್ಲಿ ಗೌರವ ಇರಬೇಕು ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT