ಪ್ರಾತಿನಿಧಿಕ ಚಿತ್ರ 
ದೇಶ

ಆಸ್ಪತ್ರೆ ರೌಂಡ್ಸ್ ವೇಳೆ ಹೃದಯಾಘಾತದಿಂದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಕೊನೆಯುಸಿರು!

ಸವಿತಾ ವೈದ್ಯಕೀಯ ಕಾಲೇಜಿನ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ. ಗ್ರಾಡ್ಲಿನ್ ರಾಯ್ ಬುಧವಾರ ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ಚೆನ್ನೈ: ಆಸ್ಪತ್ರೆಯಲ್ಲಿ ರೌಂಡ್ಸ್ ವೇಳೆಯೇ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವಿಗೀಡಾಗಿರುವ ಧಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.

ಸವಿತಾ ವೈದ್ಯಕೀಯ ಕಾಲೇಜಿನ ಕನ್ಸಲ್ಟೆಂಟ್ ಕಾರ್ಡಿಯಾಕ್ ಸರ್ಜನ್ ಡಾ. ಗ್ರಾಡ್ಲಿನ್ ರಾಯ್ ಬುಧವಾರ ಆಸ್ಪತ್ರೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ಹೈದರಾಬಾದ್ ಮೂಲದ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಮತ್ತು ಡಾ. ರಾಯ್ ಅವರ ಸಹೋದ್ಯೋಗಿಗಳು ಅವರನ್ನು ಉಳಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ ಎಂದು ಹೇಳಿದರು.

'ಸಹೋದ್ಯೋಗಿಗಳು ಧೈರ್ಯದಿಂದ ಹೋರಾಡಿದರು. ಸಿಪಿಆರ್, ಸ್ಟೆಂಟಿಂಗ್‌ನೊಂದಿಗೆ ತುರ್ತು ಆಂಜಿಯೋಪ್ಲ್ಯಾಸ್ಟಿ, ಇಂಟ್ರಾ-ಮಹಾಪಧಮನಿಯ ಬಲೂನ್ ಪಂಪ್, ECMO ಕೂಡ ಮಾಡಿದರು. ಆದರೆ, ಎಡ ಮುಖ್ಯ ಅಪಧಮನಿಯು ಶೇ 100ರಷ್ಟು ಬ್ಲಾಕ್ ಆಗಿದ್ದರಿಂದಾಗಿ ಭಾರಿ ಹೃದಯ ಸ್ತಂಭನದಿಂದ ಅವರು ಸಾವಿಗೀಡಾಗಿದ್ದಾರೆ' ಎಂದು ಡಾ. ಸುಧೀರ್ ಕುಮಾರ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಡಾ. ರಾಯ್ ಅವರಿಗೆ ಪತ್ನಿ ಮತ್ತು ಚಿಕ್ಕ ಮಗ ಇದ್ದಾರೆ.

ಡಾ. ರಾಯ್ ಅವರ ಸಾವು ಮಾತ್ರವಲ್ಲ, 30 ಮತ್ತು 40ರ ಹರೆಯದ ಯುವ ವೈದ್ಯರೇ ಹಠಾತ್ ಹೃದಯಾಘಾತದಿಂದ ಬಳಲುತ್ತಿರುವ ಆತಂಕಕಾರಿ ಪ್ರವೃತ್ತಿ ಇದೆ ಎಂದು ವೈದ್ಯರು ಗಮನಸೆಳೆದರು.

ದೀರ್ಘಾವಧಿಯ ಕೆಲಸದ ಸಮಯವು ಅಂತಹ ಸಾವುಗಳಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವೈದ್ಯರು ಸಾಮಾನ್ಯವಾಗಿ ದಿನಕ್ಕೆ 12-18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ, ಕೆಲವೊಮ್ಮೆ ಒಂದೇ ಪಾಳಿಯಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.

ತೀವ್ರವಾದ ಒತ್ತಡವೂ ಇದೆ. ಜೀವನ್ಮರಣ ನಿರ್ಧಾರಗಳ ನಿರಂತರ ಒತ್ತಡ, ರೋಗಿಯ ಹೆಚ್ಚಿನ ನಿರೀಕ್ಷೆಗಳು ಮತ್ತು ವೈದ್ಯಕೀಯ-ಕಾನೂನು ಕಾಳಜಿಗಳು ಇದಕ್ಕೆ ಕಾರಣವಾಗಿವೆ. ಅನಾರೋಗ್ಯಕರ ಜೀವನಶೈಲಿ, ಅನಿಯಮಿತ ಊಟ, ದೈಹಿಕ ವ್ಯಾಯಾಮದ ಕೊರತೆ ಮತ್ತು ನಿರ್ಲಕ್ಷ್ಯದ ಆರೋಗ್ಯ ತಪಾಸಣೆಗಳು ಇತರ ಕಾರಣಗಳಾಗಿವೆ. ಈ ವೃತ್ತಿಯ ಮಾನಸಿಕ ಒತ್ತಡ, ಅದರಲ್ಲೂ ಬರ್ನೌಟ್, ಖಿನ್ನತೆ ಮತ್ತು ಆತಂಕವನ್ನು ಸಹ ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ವಿರೋಚಿತ ಸೋಲು; ಸೆಮಿಸ್‌ಗಾಗಿ ಕಿವೀಸ್ ಜೊತೆ ಸೆಣೆಸಾಟ!

ಮುಸ್ಲಿಂ ಯುವಕರನ್ನು ಮದುವೆಯಾದರೆ ಅಂತಹ ಮಗಳ ಕಾಲು ಮುರಿಯಿರಿ: ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ವಾಲ್ಮೀಕಿ ಸಮುದಾಯದ ವಿರುದ್ಧ ಅಶ್ಲೀಲ ಅವಹೇಳನ: ರಮೇಶ್ ಕತ್ತಿಗೆ ಸಂಕಷ್ಟ; ಅಟ್ರಾಸಿಟಿ ಪ್ರಕರಣ ದಾಖಲು!

Flood Relief: ಕರ್ನಾಟಕ, ಮಹಾರಾಷ್ಟ್ರಕ್ಕೆ 1,950 ಕೋಟಿ ರೂ ಬಿಡುಗಡೆಗೆ ಕೇಂದ್ರ ಸರ್ಕಾರ ಅನುಮೋದನೆ!

News headlines 19-10-2025 | ಖರ್ಗೆ ತವರಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; ಮತಗಟ್ಟೆ ಬಳಿ ಜಾರಕಿಹೊಳಿ- ಸವದಿ ಬಣಗಳ ನಡುವೆ ಹೊಡೆದಾಟ; DK Shivakumar- Kiran Majumdar ನಡುವೆ ನಿಲ್ಲದ ವಾಕ್ಸಮರ

SCROLL FOR NEXT