ಶಾರದಾ ಭವಾನಿ ದೇವಸ್ಥಾನ 
ದೇಶ

ಕೊನೆಗೂ ಫಲಿಸಿದ ಕಾಶ್ಮೀರಿ ಪಂಡಿತರ ಬೇಡಿಕೆ: 30 ವರ್ಷಗಳ ಬಳಿಕ ಬುಡ್ಗಾಮ್‌ನಲ್ಲಿ ಶಾರದಾ ಭವಾನಿ ದೇವಾಲಯ ಮತ್ತೆ ಓಪನ್!

ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇಂದು ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯ ಮತ್ತೆ ಪುನರಾರಂಭವಾಗಿದ್ದು ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯವೂ ಈ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿತು.

ಶ್ರೀನಗರ: ಮೂರು ದಶಕಗಳಿಗೂ ಹೆಚ್ಚು ಕಾಲದ ನಂತರ ಇಂದು ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯ ಮತ್ತೆ ಪುನರಾರಂಭವಾಗಿದ್ದು ಕಾಶ್ಮೀರಿ ಪಂಡಿತ ಸಮುದಾಯ ಮತ್ತು ಸ್ಥಳೀಯ ಮುಸ್ಲಿಂ ಸಮುದಾಯವೂ ಈ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿತು. ಮಧ್ಯ ಕಾಶ್ಮೀರ ಜಿಲ್ಲೆಯ ಇಚ್‌ಕೂಟ್ ಗ್ರಾಮದಲ್ಲಿ ನಡೆದ ಈ ಸಮಾರಂಭದಲ್ಲಿ, ಮುಹೂರ್ತದ ಬಳಿಕ ಪ್ರಾಣ ಪ್ರತಿಷ್ಠೆ ಸಹ ನಡೆಯಿತು. 1990ರಲ್ಲಿ ಭಯೋತ್ಪಾದನೆ ಪ್ರಾರಂಭವಾದ ನಂತರ ತಮ್ಮ ಮನೆಗಳನ್ನು ಬಿಟ್ಟು ಓಡಿ ಬಂದಿದ್ದ ಕಾಶ್ಮೀರಿ ಪಂಡಿತ ಕುಟುಂಬಗಳ ಗುಂಪು ಮೊದಲ ಬಾರಿಗೆ ತಮ್ಮ ಪೂರ್ವಜರ ಸ್ಥಳಕ್ಕೆ ಮರಳಿತ್ತು.

ಬುಡ್ಗಾಮ್ ಮೂಲದ ಶಾರದಾ ಸ್ಥಾಪನಾ ಸಮುದಾಯದ ಅಧ್ಯಕ್ಷ ಸುನಿಲ್ ಕುಮಾರ್ ಭಟ್, ಇದು ಪಾಕಿಸ್ತಾನದಲ್ಲಿರುವ ಶಾರದಾ ಮಾತಾ ದೇವಾಲಯದ ಒಂದು ಶಾಖೆ ಎಂದು ನಾವು ಹೇಳಬಹುದು. ನಾವು ಬಹಳ ಸಮಯದಿಂದ ಈ ದೇವಾಲಯವನ್ನು ಮತ್ತೆ ತೆರೆಯಲು ಬಯಸಿದ್ದೆವು. ಸ್ಥಳೀಯ ಮುಸ್ಲಿಮರು ಸಹ ಅದನ್ನೇ ಬಯಸಿದ್ದರು. ಮತ್ತೆ ದೇವಾಲಯವನ್ನು ಪುನಃಸ್ಥಾಪಿಸಲು ನಮ್ಮನ್ನು ಕೇಳುತ್ತಿದ್ದರು. ಪಂಡಿತ ಸಮುದಾಯವು 35 ವರ್ಷಗಳ ನಂತರ ದೇವಾಲಯವನ್ನು ಮತ್ತೆ ತೆರೆದಿದೆ ಎಂದು ಹೇಳಿದರು. ಇದು ವಾರ್ಷಿಕ ಕಾರ್ಯಕ್ರಮವಾಗಲಿದೆ ಎಂದು ನಾವು ಭಾವಿಸುತ್ತೇವೆ. ಸಮುದಾಯದ ಸದಸ್ಯರು ಶೀಘ್ರದಲ್ಲೇ ಕಾಶ್ಮೀರಕ್ಕೆ ಮರಳಲಿ ಎಂದು ನಾವು ಮಾತಾ ರಾಣಿಯನ್ನು ಪ್ರಾರ್ಥಿಸುತ್ತೇವೆ ಎಂದರು.

ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಕಾಶ್ಮೀರಿ ಪಂಡಿತರು ದೇವಾಲಯವನ್ನು ಪುನರ್ನಿರ್ಮಿಸಿ ಹೊಸ ದೇವಾಲಯ ನಿರ್ಮಾಣಕ್ಕಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ ಎಂದು ಭಟ್ ಹೇಳಿದರು. ರಾಣಾ ದೇವಾಲಯವು ಶಿಥಿಲಗೊಂಡಿದೆ. ನಾವು ಅದನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ಸ್ಥಳದ ಶುಚಿಗೊಳಿಸುವಿಕೆ ಮತ್ತು ನವೀಕರಣದ ಸಮಯದಲ್ಲಿ ನಾವು ಕಂಡುಕೊಂಡ ಶಿವಲಿಂಗವನ್ನು ನಾವು ಅಲ್ಲಿ ಸ್ಥಾಪಿಸಿದ್ದೇವೆ. ಪುನಃ ಉದ್ಘಾಟನೆ ಸಮಾರಂಭವು ಕಣಿವೆಯ ಪ್ರಸಿದ್ಧ ಮಿಶ್ರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ಮುಸ್ಲಿಮರು ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಸ್ಥಳೀಯ ಸಮುದಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಭಟ್ ಹೇಳಿದರು. ಅವರ ಬೆಂಬಲ ಅದ್ಭುತವಾಗಿದೆ ಎಂದರು.

ನಾವು ಇಲ್ಲಿಗೆ ಬಂದಾಗ, ನಾವು ಕೇವಲ ನಾಲ್ಕು ಜನರಿದ್ದೆವು. ಇಂದು ಇಡೀ ಗ್ರಾಮ ನಮ್ಮೊಂದಿಗಿದೆ. ಇದು ಸ್ಥಳೀಯ ಸಮುದಾಯದ ಬೆಂಬಲವನ್ನು ತೋರಿಸುತ್ತದೆ. ಪಂಡಿತ ಸಮುದಾಯವು ತಮ್ಮ ಬೇರುಗಳಿಗೆ ಮರಳಿದ್ದಕ್ಕಾಗಿ ಹೃತ್ಪೂರ್ವಕವಾಗಿ ಸ್ವಾಗತಿಸಲ್ಪಟ್ಟಿದೆ ಎಂದು ಸ್ಥಳೀಯ ಹಿರಿಯ ಮುಸ್ಲಿಂ ವ್ಯಕ್ತಿಯೊಬ್ಬರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಬೆಳಗಾವಿಯಲ್ಲಿ ಎಂಇಎಸ್, ಕೊಲ್ಹಾಪುರದಲ್ಲಿ ಶಿವಸೇನೆ ಪುಂಡಾಟಿಕೆ; ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರ ಬಂದ್!

ತಾಪಮಾನದಲ್ಲಿ ಮತ್ತಷ್ಟು ಕುಸಿತ: ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಳ, ವಾಯು ಗುಣಮಟ್ಟದಲ್ಲೂ ಬದಲಾವಣೆ

ಮಧ್ಯಪ್ರದೇಶ: ಕೋಟಿ ಕೋಟಿ ಬಹುಮಾನ ಹೊಂದಿದ್ದ 10 ನಕ್ಸಲರು ಶಸ್ತ್ರಾಸ್ತ್ರ ಸಹಿತ ಶರಣಾಗತಿ!

SCROLL FOR NEXT