ಮನೋಜ್ ಜಾರಂಗೆ 
ದೇಶ

ಮರಾಠ ಮೀಸಲಾತಿ ಹೋರಾಟ: ನಾಳೆಯಿಂದ ನೀರನ್ನೂ ಕುಡಿಯುವುದಿಲ್ಲ; ಜಾರಂಗೆ ಎಚ್ಚರಿಕೆ

ಈ ಮಧ್ಯೆ, ಮಹಾರಾಷ್ಟ್ರದ ಕೆಲವು ಬಿಜೆಪಿ ಸಚಿವರು ಮರಾಠ ಸಮುದಾಯಕ್ಕೆ ಅಸ್ತಿತ್ವದಲ್ಲಿರುವ EWS ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.

ಮುಂಬೈ: ಮುಂಬೈನ ಆಜಾದ್ ಮೈದಾನದಲ್ಲಿ ಮರಾಠಾ ಮೀಸಲಾತಿಗಿ ಆಗ್ರಹಿಸಿ ಮನೋಜ್ ಜಾರಂಗೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆ ಸಾಂವಿಧಾನಿಕವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಮಧ್ಯೆ, ಮಹಾರಾಷ್ಟ್ರದ ಕೆಲವು ಬಿಜೆಪಿ ಸಚಿವರು ಮರಾಠ ಸಮುದಾಯಕ್ಕೆ ಅಸ್ತಿತ್ವದಲ್ಲಿರುವ EWS ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.

ಮರಾಠರಿಗೆ ಶೇಕಡಾ 10 ರಷ್ಟು ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ ಮತ್ತು ಎಲ್ಲಾ ಮರಾಠರನ್ನು(ಕುಂಬಿಸ್) ಇತರ ಹಿಂದುಳಿದ ವರ್ಗಗಳ ಕೋಟಾದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಂಬೈಯಿಂದ ಕದಲುವುದಿಲ್ಲ ಎಂದು ಜಾರಂಗೆ ಹೇಳಿದ್ದು, "ಸರ್ಕಾರ 58 ಲಕ್ಷ ಮರಾಠರನ್ನು ಕುಂಬಿಸ್ ಎಂದು ದಾಖಲಿಸಿದೆ" ಎಂದಿದ್ದಾರೆ.

"ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ನಾಳೆಯಿಂದ ನಾನು ನೀರು ಸಹ ಕುಡಿಯುವುದಿಲ್ಲ ಮತ್ತು ಕೋಟಾ ಬೇಡಿಕೆ ಈಡೇರುವವರೆಗೆ ನಾನು ಮುಂಬೈಯಿಂದ ಹಿಂತಿರುಗುವುದಿಲ್ಲ. ಏನೇ ಆದರೂ ನಾವು ಒಬಿಸಿ ವರ್ಗದ ಅಡಿಯಲ್ಲಿ ಮರಾಠಾ ಮೀಸಲಾತಿಯನ್ನು ಪಡೆದೇ ಪಡೆಯುತ್ತೇವೆ" ಎಂದು ಜಾರಂಗೆ ಹೇಳಿದ್ದಾರೆ.

ಏತನ್ಮಧ್ಯೆ, ಮಹಾರಾಷ್ಟ್ರದ ಇಬ್ಬರೂ ಬಿಜೆಪಿ ಸಚಿವರಾದ ಚಂದ್ರಕಾಂತ್ ಪಾಟೀಲ್ ಮತ್ತು ನಿತೇಶ್ ರಾಣೆಯವರು, ಮರಾಠಾ ಸಮುದಾಯವನ್ನು ಒಬಿಸಿ ಎಂದು ವರ್ಗೀಕರಿಸುವ ಬದಲು ಅಸ್ತಿತ್ವದಲ್ಲಿರುವ ಇಡಬ್ಲ್ಯೂಎಸ್ ಕೋಟಾದಡಿ ಮೀಸಲಾತಿ ನೀಡಬೇಕು ಎಂದು ಹೇಳಿದ್ದಾರೆ.

ಪಾಟೀಲ್ ಮತ್ತು ರಾಣೆ ಇಬ್ಬರೂ ಮರಾಠಾ ಸಮುದಾಯಕ್ಕೆ ಸೇರಿದವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

Puri Jagannath Temple: ಒಡಿಶಾ ಅಲ್ಲದೇ ಇತರ ಆರು ರಾಜ್ಯಗಳಲ್ಲಿ ಎಕರೆಗಟ್ಟಲೇ ಜಮೀನು! ಒಟ್ಟು ಎಷ್ಟಿದೆ ಗೊತ್ತಾ?

SCROLL FOR NEXT