ರೇಣುಕಾ ಚೌಧರಿ 
ದೇಶ

ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಪ್ರಶ್ನಿಸಿದ್ದಕ್ಕೆ 'ಬೌ ಬೌ' ಎಂದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ!

ಇದು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಗೆ ಕಾರಣವಾಯಿತು. ಬಹಮಿಯನ್ ಬ್ಯಾಂಡ್ ಬಹಾ ಮೆನ್‌ನ ಜನಪ್ರಿಯ ಹಾಡಿನ 'ಹೂ ಲೆಟ್ ದಿ ಡಾಗ್ಸ್ ಔಟ್'ಗೆ ಸಂಸದೆಯ 'ಬೌಬೌ' ಅನ್ನು ರೀಮಿಕ್ಸ್ ಮಾಡಲಾಯಿತು.

ನವದೆಹಲಿ: ನಾಯಿಯನ್ನು ಸಂಸತ್ತಿಗೆ ಕರೆತಂದ ವಿಚಾರವಾಗಿ ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಆಡಳಿತ ಪಕ್ಷದ ಕೆಲವು ಸದಸ್ಯರು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ, 'ಬೌ ಬೌ' ಎಂದಿದ್ದಾರೆ.

ಈ ಚುರುಕಾದ ಉತ್ತರವು ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಗೆ ಕಾರಣವಾಯಿತು. ಬಹಮಿಯನ್ ಬ್ಯಾಂಡ್ ಬಹಾ ಮೆನ್‌ನ ಜನಪ್ರಿಯ ಹಾಡಿನ 'ಹೂ ಲೆಟ್ ದಿ ಡಾಗ್ಸ್ ಔಟ್'ಗೆ ಸಂಸದೆಯ 'ಬೌಬೌ' ಅನ್ನು ರೀಮಿಕ್ಸ್ ಮಾಡಲಾಯಿತು.

ಹಕ್ಕುಚ್ಯುತಿ ಮಂಡಿಸುವ ವರದಿಗಳ ಕುರಿತು ಕೇಳಿದ ಪ್ರಶ್ನೆಗೆ ಸುದ್ದಿಸಂಸ್ಥೆ ಪಿಟಿಐಗೆ ಉತ್ತರಿಸಿದ ಚೌಧರಿ, ''ಬೌ ಬೌ' ನಾನು ಇನ್ನೇನು ಹೇಳಬೇಕು'. ಅದು ಬಂದಾಗ ನಾವು ನೋಡುತ್ತೇವೆ. ಈಗ ಸಮಸ್ಯೆ ಏನು. ಅದು ಬಂದಾಗ, ನಾನು ಸೂಕ್ತ ಉತ್ತರವನ್ನು ನೀಡುತ್ತೇನೆ ಎಂದರು.

ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್ತಿನ ಆವರಣಕ್ಕೆ ತಮ್ಮ ಕಾರಿನಲ್ಲಿ ನಾಯಿಯನ್ನು ಕರೆತಂದಿದ್ದಕ್ಕಾಗಿ ರೇಣುಕಾ ಚೌಧರಿ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, 'ನಿಜವಾಗಿ ಕಚ್ಚುವವರು ಸಂಸತ್ತಿನ ಒಳಗೇ ಕುಳಿತಿದ್ದಾರೆ. ಅಲ್ಲಿ ಏನಾದರೂ ಕಾನೂನು ಇದೆಯೇ? ನಾನು ಕಾರಿನಲ್ಲಿ ಹೋಗುತ್ತಿದ್ದಾಗ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿತ್ತು. ಈ ನಾಯಿಮರಿ ಅಲ್ಲಿ ರಸ್ತೆಯಲ್ಲಿ ಅಲೆದಾಡುತ್ತಿತ್ತು. ಅದಕ್ಕೆ ಡಿಕ್ಕಿಯಾಗಿರಬಹುದೆಂದು ಭಾವಿಸಿದ್ದೆ. ಬಳಿಕ ಅದನ್ನು ಎತ್ತಿಕೊಂಡು ಕಾರಿನಲ್ಲಿ ಕೂರಿಸಿ ಸಂಸತ್ತಿಗೆ ಬಂದೆ. ನಾಯಿಯನ್ನು ವಾಪಸ್ ಕಳುಹಿಸಿದೆ' ಎಂದು ಹೇಳಿದ್ದಾರೆ.

'ಕಾರು ಹೋಯಿತು, ನಾಯಿಯೂ ಅದರಲ್ಲಿಯೇ ಹೋಯಿತು. ಅಷ್ಟು ಮಾತ್ರಕ್ಕೆ ಚರ್ಚೆಯ ಅಗತ್ಯವೇನಿತ್ತು?. ಕಚ್ಚುವವರು ಸಂಸತ್ತಿನಲ್ಲಿಯೇ ಕುಳಿತಿದ್ದಾರೆ, ನಾಯಿಗಳು ಕಚ್ಚುವುದಿಲ್ಲ. ಅವರೇ ಸರ್ಕಾರವನ್ನು ನಡೆಸುತ್ತಿದ್ದಾರೆ. ಅವರ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ. ಅದು ಬೀದಿ ನಾಯಿಯಾಗಿದ್ದು, ಅದನ್ನು ತಾನು ರಕ್ಷಿಸಿ ಪಶುವೈದ್ಯರ ಬಳಿಗೆ ಕರೆದೊಯ್ಯುತ್ತಿರುವುದಾಗಿ ಅವರು ಹೇಳಿದರು.

ಚರ್ಚೆ ಹೆಚ್ಚಾಗುತ್ತಿದ್ದಂತೆ, ಅವರ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ, ಸಾಕುಪ್ರಾಣಿಗಳನ್ನು ಹೊರಗೆ ಬಿಡಲಾಗುವುದಿಲ್ಲ ಆದರೆ 'ಒಳಗೆ ಬಿಡಲಾಗುತ್ತದೆ' ಎಂದು ಸಂಸತ್ ಭವನವನ್ನು ತೋರಿಸುತ್ತಾ ಹೇಳಿದರು.

ಈ ಘಟನೆಯು ವಾಗ್ವಾದಕ್ಕೆ ಕಾರಣವಾಯಿತು. ಅವರು ನಾಟಕವಾಡುತ್ತಿದ್ದಾರೆ ಎಂದು ಕೆಲವು ಬಿಜೆಪಿ ಸದಸ್ಯರು ಆರೋಪಿಸಿದರು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸರ್ಕಾರಕ್ಕೆ ಪ್ರಾಣಿಗಳು ಇಷ್ಟವಿಲ್ಲ ಎಂದ ಚೌಧರಿ, ಆಡಳಿತ ಪಕ್ಷದ ಸಂಸದರು ಎತ್ತಿದ ಆಕ್ಷೇಪಣೆಗಳನ್ನು ಪ್ರಶ್ನಿಸಿದ್ದರು. 'ನಾನು ನಾಯಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಯಾವ ಕಾನೂನು ಹೇಳುತ್ತದೆ' ಎಂದು ಅವರು ಕೇಳಿದರು.

ಬಿಜೆಪಿ ಸಂಸದ ಮತ್ತು ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, 'ರಾಹುಲ್ ಗಾಂಧಿ ಮತ್ತು ರೇಣುಕಾ ಚೌಧರಿ ಅವರ ಹೇಳಿಕೆಯಿಂದ ಸಂಸತ್ತಿನ ಗೌರವ ಮತ್ತು ಘನತೆಗೆ ಧಕ್ಕೆಯಾಗಿದೆ' ಎಂದು ಹೇಳಿದರು.

ಇಬ್ಬರೂ 'ಆರ್'ಗಳು 'ಸಂಸದರ ಜವಾಬ್ದಾರಿ'ಯಲ್ಲಿಯೂ 'ಆರ್' ಇದೆ ಎಂಬುದನ್ನು ನೆನಪಿನಲ್ಲಿಡಬೇಕು. ತಮ್ಮ ಹೇಳಿಕೆಗಳ ಮೂಲಕ, ರಾಹುಲ್ ಮತ್ತು ಚೌಧರಿ ಇಬ್ಬರೂ ಕಾಂಗ್ರೆಸ್ ಸದಸ್ಯರು ಸೇರಿದಂತೆ ಎಲ್ಲ ಸಂಸದರನ್ನು ಹಾಗೂ ಸಂಸತ್ತಿನಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತಿಲ್ಲ: ದೆಹಲಿಯಲ್ಲಿ ಡಿ.ಕೆ ಶಿವಕುಮಾರ್

Video: 'ಭಾರತ ಛಿದ್ರ ಛಿದ್ರ ಆದ್ರೇನೆ ಬಾಂಗ್ಲಾದೇಶದಲ್ಲಿ ಶಾಂತಿ'; ಮಾಜಿ ಸೇನಾ ಮುಖ್ಯಸ್ಥನ ಪ್ರಚೋದನಾ ಹೇಳಿಕೆ

ಸಂಚಾರ್ ಸಾಥಿ ಆ್ಯಪ್ ನಿಂದ Snooping ಅಸಾಧ್ಯ; ಪ್ರೀ-ಇನ್ಸ್ಟಾಲ್ ಕಡ್ಡಾಯ ಆದೇಶ ವಾಪಸ್: ಸಚಿವ ಸಿಂಧಿಯಾ; Video

ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ; 29 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ

Anantapur: ಶಾಸಕನ ರಾಸಲೀಲೆ Video ವೈರಲ್; ಶಿಕ್ಷಕಿ ಜೊತೆಗಿನ ಖಾಸಗಿ ಕ್ಷಣಗಳ ವಾಟ್ಸಪ್ ನಲ್ಲಿ ಹರಿಬಿಟ್ಟ MLA!

SCROLL FOR NEXT