ದೇಶ

ರೀಲ್ಸ್ ಮಾಡಲು ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ; ತಲೆ ತುಂಡಾಗಿ 'ಪಿಕೆಆರ್ ಬ್ಲಾಗರ್' ಸಾವು, Video!

ಗುಜರಾತ್‌ನ ಸೂರತ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಯೊಬ್ಬರು ರೀಲ್ ಚಿತ್ರೀಕರಣ ಮಾಡುವಾಗ ದುರಂತವಾಗಿ ಸಾವನ್ನಪ್ಪಿದರು. 'ಪಿಕೆಆರ್ ಬ್ಲಾಗರ್' ಎಂದು ಕರೆಯಲ್ಪಡುವ ಪ್ರಿನ್ಸ್ ಪಟೇಲ್...

ಗುಜರಾತ್‌ನ ಸೂರತ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಯೊಬ್ಬರು ರೀಲ್ ಚಿತ್ರೀಕರಣ ಮಾಡುವಾಗ ದುರಂತವಾಗಿ ಸಾವನ್ನಪ್ಪಿದರು. 'ಪಿಕೆಆರ್ ಬ್ಲಾಗರ್' ಎಂದು ಕರೆಯಲ್ಪಡುವ ಪ್ರಿನ್ಸ್ ಪಟೇಲ್, ಗಂಟೆಗೆ 140 ಕಿ.ಮೀ ವೇಗದಲ್ಲಿ ತಮ್ಮ ಕೆಟಿಎಂ ಬೈಕ್‌ನಲ್ಲಿ ರೀಲ್‌ಗಾಗಿ ಸವಾರಿ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಬೈಕ್ ಸ್ಕಿಡ್ ಆಗಿತ್ತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಪ್ರಿನ್ಸ್ ತಲೆ ದೇಹದಿಂದ ಬೇರ್ಪಟಿದೆ.

ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದೆ. ಪ್ರಿನ್ಸ್ ಗ್ರೇಟ್ ಲೈನರ್ ಸೇತುವೆ ಇಳಿಯುವಾಗ ಅತಿ ವೇಗದಲ್ಲಿ ಚಾಲನೆ ಮಾಡುತ್ತಿರುವುದು ಕಾಣಿಸುತ್ತದೆ. ಅವರ ಅತಿ ವೇಗದಿಂದಾಗಿ ಬೈಕ್‌ನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದರು. ಅವರ ಬೈಕ್ ಸುಮಾರು ನೂರು ಮೀಟರ್‌ಗಳವರೆಗೆ ವಿಭಜಕದ ಉದ್ದಕ್ಕೂ ಸ್ಕಿಡ್ ಆಯಿತು. ಬೈಕ್‌ನಿಂದ ಬಿದ್ದ ಪ್ರಿನ್ಸ್ ತಲೆ ಕಟ್ ಆಗಿ ಮೃತಪಟ್ಟಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ಅಪಘಾತದ ಸಮಯದಲ್ಲಿ ಪ್ರಿನ್ಸ್ ಹೆಲ್ಮೆಟ್ ಧರಿಸಿರಲಿಲ್ಲ. ಪ್ರಿನ್ಸ್ ಕುಟುಂಬದ ಬಗ್ಗೆ ಹೇಳುವುದಾದರೆ, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಿದ್ದು, ಹಾಲು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಿನ್ಸ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಹದಿಹರೆಯದವರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ಅವರು ಹೈಸ್ಪೀಡ್ ಬೈಕಿಂಗ್‌ನ ವೀಡಿಯೊಗಳನ್ನು ಮಾಡಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಈ ಕೆಟಿಎಂ ಬೈಕನ್ನು ಖರೀದಿಸಿದರು.

ಪ್ರಿನ್ಸ್ ತಮ್ಮ ಬೈಕನ್ನು ಲೈಲಾ ಎಂದು ಕರೆಯುತ್ತಿದ್ದನು. ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು. ಕೇವಲ ನಾಲ್ಕು ದಿನಗಳ ಹಿಂದೆ, ಪ್ರಿನ್ಸ್ ತಮ್ಮ ಸಾವಿನ ಬಗ್ಗೆ ಪೋಸ್ಟ್ ಹಂಚಿಕೊಂಡರು. ತಮ್ಮನ್ನು ತಮ್ಮ ಬೈಕಿನ ಪ್ರೇಮಿ ಲೈಲಾ ಎಂದು ಕರೆದುಕೊಂಡರು. ಈ ವೀಡಿಯೊದಲ್ಲಿ ಪ್ರಿನ್ಸ್ ತಮ್ಮ ಮರಣದ ನಂತರ, ಸ್ವರ್ಗದಲ್ಲಿಯೂ ಸಹ ತಮ್ಮ ಬೈಕನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ