ಪುರಿ ಜಗನ್ನಾಥ ದೇವಾಲಯ 
ದೇಶ

Puri Jagannath Temple: ಒಡಿಶಾ ಅಲ್ಲದೇ ಇತರ ಆರು ರಾಜ್ಯಗಳಲ್ಲಿ ಎಕರೆಗಟ್ಟಲೇ ಜಮೀನು! ಒಟ್ಟು ಎಷ್ಟಿದೆ ಗೊತ್ತಾ?

ವಿಧಾನಸಭೆಯಲ್ಲಿ ಬಿಜೆಡಿ ಶಾಸಕ ಸುದರ್ಶನ್ ಹರಿಪಾಲ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಹರಿಚಂದನ್, ಒಡಿಶಾ ಮಾತ್ರವಲ್ಲದೇ ಇತರ ಆರು ರಾಜ್ಯಗಳಲ್ಲಿ ಸುಮಾರು 400 ಹೆಕ್ಟೇರ್ ಭೂಮಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಪುರಿ: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಜಗನ್ನಾಥ ದೇವಾಲಯವು 60, 426 ಎಕರೆ ಭೂಮಿಯನ್ನು ಹೊಂದಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಶನಿವಾರ ವಿಧಾನಸಭೆಯಲ್ಲಿ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಡಿ ಶಾಸಕ ಸುದರ್ಶನ್ ಹರಿಪಾಲ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಹರಿಚಂದನ್, ಒಡಿಶಾ ಮಾತ್ರವಲ್ಲದೇ ಇತರ ಆರು ರಾಜ್ಯಗಳಲ್ಲಿ ಸುಮಾರು 400 ಹೆಕ್ಟೇರ್ ಭೂಮಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

1956 ರ ಜಗನ್ನಾಥ ದೇವಾಲಯ ಕಾಯ್ದೆಯ ಪ್ರಕಾರ, 12 ನೇ ಶತಮಾನದ ಪುರಿ ದೇವಾಲಯವನ್ನು ಕಾನೂನು ಇಲಾಖೆಯು ನಿರ್ವಹಿಸುತ್ತದೆ.

ಆರು ಜಿಲ್ಲೆಗಳಲ್ಲಿ ಜಮೀನು: ಒಡಿಶಾದ 24 ಜಿಲ್ಲೆಗಳಲ್ಲಿ ಜಗನ್ನಾಥ ದೇವರ ಹೆಸರಿನಲ್ಲಿ 60,426.943 ಎಕರೆ ಭೂಮಿ ಇದ್ದರೆ, ಆರು ರಾಜ್ಯಗಳಲ್ಲಿ 395.252 ಎಕರೆ ದೇವಾಲಯ ಭೂಮಿಯನ್ನು ಪತ್ತೆಹಚ್ಚಲಾಗಿದೆ. ಪಶ್ಚಿಮ ಬಂಗಾಳ (322.930 ಎಕರೆ), ಮಹಾರಾಷ್ಟ್ರ (28.21 ಎಕರೆ), ಮಧ್ಯಪ್ರದೇಶ (25.11 ಎಕರೆ), ಆಂಧ್ರಪ್ರದೇಶ (17.02 ಎಕರೆ), ಛತ್ತೀಸ್‌ಗಢ (1.7 ಎಕರೆ) ಮತ್ತು ಬಿಹಾರ (0.27 ಎಕರೆ) ದೇವಾಲಯದ ಭೂಮಿಯಿದೆ. 38,061.792 ಎಕರೆಗಳ ಪರಿಷ್ಕೃತ ಭೂ ದಾಖಲೆಗಳು ಪ್ರಸ್ತುತ ಪುರಿಯ ಜಗನ್ನಾಥ ದೇವಾಲಯ ಆಡಳಿತ (SJTA)ಬಳಿ ಇವೆ ಎಂದು ಸಚಿವರು ಹೇಳಿದರು.

ಪರಿಶೀಲನೆ ವೇಳೆ ದೇವಾಲಯದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಹಲವಾರು ಪ್ರಕರಣಗಳಿವೆ.

ರಾಜ್ಯದ ಏಳು ಜಿಲ್ಲೆಗಳಲ್ಲಿ 169.86167 ಎಕರೆ ಒತ್ತುವರಿ ಭೂಮಿ ತೆರವುಗೊಳಿಸಲು ಜಗನ್ನಾಥ ದೇವಾಲಯ ಕಾಯ್ದೆಯಡಿಯಲ್ಲಿ ಒಟ್ಟು 974 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ದೇವಾಲಯದ ಆಸ್ತಿಯನ್ನು ಸುರಕ್ಷಿತವಾಗಿರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ವಿಧಾನಸಭೆಗೆ ಭರವಸೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

'ಜನ ಸಾಮಾನ್ಯರಿಗಾಗಿ ಸುಪ್ರೀಂಕೋರ್ಟ್' : ಬಲವಾದ ಸಂದೇಶ ರವಾನಿಸಿದ CJI ಸೂರ್ಯಕಾಂತ್!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

ಬೆಂಗಳೂರಿನಲ್ಲಿ 2,215 ಕೋಟಿ ರೂ. ಮೊತ್ತದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಪುಟ ಅನುಮೋದನೆ!

SCROLL FOR NEXT