ಮೂರನೇ ಆರೋಪಿ ಹಿಲಾಲ್ ಅಹ್ಮದ್ 
ದೇಶ

ಪಾಕ್ ಜೊತೆಗೆ ನಂಟು: ಅರುಣಾಚಲ ಪ್ರದೇಶದಲ್ಲಿ ಮೂವರು ಕಾಶ್ಮೀರ ನಿವಾಸಿಗಳ ಬಂಧನ!

ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ 26 ವರ್ಷದ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಗುವಾಹಟಿ/ನವದೆಹಲಿ: ಪಾಕಿಸ್ತಾನ ಜೊತೆಗೆ ನಂಟು ಹೊಂದಿದ ಆರೋಪದ ಮೇರೆಗೆ ಅರುಣಾಚಲ ಪ್ರದೇಶದಲ್ಲಿ ಮೂವರು ಕಾಶ್ಮೀರದ ನಿವಾಸಿಗಳನ್ನು ಬಂಧಿಸಲಾಗಿದೆ.

ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ 26 ವರ್ಷದ ವ್ಯಕ್ತಿಯನ್ನು ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವೇ ವಾರಗಳಲ್ಲಿ ನಡೆದ ಮೂರನೇ ಬಂಧನ ಇದಾಗಿದೆ.

ಜಿಲ್ಲೆಯ ಆಲೋ ಪಟ್ಟಣದಲ್ಲಿ ವಾಸವಾಗಿದ್ದ ಆರೋಪಿ ಹಿಲಾಲ್ ಅಹ್ಮದ್ ನನ್ನು ಶುಕ್ರವಾರ ರಾತ್ರಿ ಹಿಮಾಲಯ ಗಡಿ ರಾಜ್ಯದ ಪೊಲೀಸರು ಬಂಧಿಸಿದ್ದಾರೆ. ಈತ ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎನ್ನಲಾಗಿದೆ.

ಇದೇ ಪ್ರದೇಶದಲ್ಲಿ ಸೈನಿಕರ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಿದ್ದಕ್ಕಾಗಿ ಮೊದಲ ಆರೋಪಿ ನಜೀರ್ ಅಹ್ಮದ್ ಮಲಿಕ್ ನನ್ನು ನವೆಂಬರ್ 22 ರಂದು ಬಂಧಿಸಲಾಗಿತ್ತು. ಈತ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ನಿವಾಸಿ ಎಂಬುದು ತಿಳಿದುಬಂದಿದೆ.

ತದನಂತರ, ಎರಡನೇ ಆರೋಪಿ, ಕುಪ್ವಾರದ ನಿವಾಸಿಯೂ ಆಗಿರುವ ಸಬೀರ್ ಅಹ್ಮದ್ ಮಿರ್‌ನನ್ನು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಿಂದ ಬಂಧಿಸಲಾಗಿತ್ತು.

ಮೂವರು ಆರೋಪಿಗಳು ಜಮ್ಮು ಮತ್ತು ಕಾಶ್ಮೀರದಿಂದ 3,000 ಕಿಮೀ ದೂರದಲ್ಲಿರುವ ಅರುಣಾಚಲ ಪ್ರದೇಶದಲ್ಲಿ ವಾಸಿಸುವ ಮೂಲಕ ಪಾಕಿಸ್ತಾನದಲ್ಲಿರುವ ತಮ್ಮ ಹ್ಯಾಂಡ್ಲರ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Vote chori" ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ನುಸುಳುಕೋರರನ್ನು ರಕ್ಷಿಸುವ ಪ್ರಯತ್ನ ಎಂದ ಬಿಜೆಪಿ!

ಹಬ್ಬದಂದು ಯಹೂದಿಗಳ ಮೇಲೆ ಮತ್ತೆ ದಾಳಿ: ಸಿಡ್ನಿಯಲ್ಲಿ ಗುಂಡಿಕ್ಕಿ 10 ಮಂದಿ ಹತ್ಯೆ!

ನಟಿ Shilpa Shetty ಒಡೆತನದ ಪಬ್ ನಲ್ಲಿ ಹೈಡ್ರಾಮಾ: ಸಿಬ್ಬಂದಿ ಮೇಲೆ ಉದ್ಯಮಿ ಹಲ್ಲೆ, Video

ಸಿಲಿಕಾನ್ ಸಿಟಿ ಗಢಗಢ: ಚಳಿಗೆ ತತ್ತರಿಸಿದ ಬೆಂಗಳೂರು, 9 ವರ್ಷಗಳಲ್ಲೇ ಡಿಸೆಂಬರ್ ನಲ್ಲಿ ಅತ್ಯಂತ ಕನಿಷ್ಠ ತಾಪಮಾನ!

ಇದೇ ಮೊದಲು, ಪಾಕ್ ನ ಎರಡು ವಿವಿಗಳಲ್ಲಿ 'ಸಂಸ್ಕೃತ ಕೋರ್ಸ್' ಆರಂಭ! ಮುಂದೆ ಭಗವದ್ಗೀತೆ, ಮಹಾಭಾರತ ಕಲಿಸಲು ಪ್ಲಾನ್

SCROLL FOR NEXT