ನಿತಿನ್ ನಬಿನ್ online desk
ದೇಶ

ಬಿಜೆಪಿಗೆ ಬಿಹಾರದ ಸಚಿವ ಹೊಸ ರಾಷ್ಟ್ರೀಯ ಕಾರ್ಯಾಧ್ಯಕ್ಷ; ಇವರೇನಾ ಮುಂದಿನ ರಾಷ್ಟ್ರಾಧ್ಯಕ್ಷ?

ನಡ್ಡಾ ಅವರ ಉಮೇದುವಾರಿಕೆಗೆ ಯಾವುದೇ ವಿರೋಧವಿಲ್ಲದ ಕಾರಣ, 2020 ರ ಜನವರಿಯಲ್ಲಿ ಅವರನ್ನು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಔಪಚಾರಿಕವಾಗಿ ಘೋಷಿಸಲಾಗಿತ್ತು.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಮಂಡಳಿಯು ಭಾನುವಾರ ನಿತಿನ್ ನಬಿನ್ ಅವರನ್ನು ಪಕ್ಷದ ಹೊಸ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಪ್ರಸ್ತುತ ಅಧ್ಯಕ್ಷರಾದ ಜೆಪಿ ನಡ್ಡಾ ಅವರ ಅವಧಿ 2024 ರಲ್ಲಿ ಕೊನೆಗೊಂಡಿತ್ತು ಆದರೆ 2024 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವಧಿಯನ್ನು ವಿಸ್ತರಿಸಲಾಗಿತ್ತು.

ಬಿಹಾರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ನಬಿನ್ ಅವರ ನೇಮಕ ತಕ್ಷಣವೇ ಜಾರಿಗೆ ಬಂದಿದೆ ಎಂದು ಪಕ್ಷ ತಿಳಿಸಿದೆ. ಅಧ್ಯಕ್ಷರ ಚುನಾವಣೆ ನಿಗದಿಯಾಗುವ ಮೊದಲು ಪಕ್ಷವು ಹೊಸ ಪೂರ್ಣಾವಧಿ ಅಧ್ಯಕ್ಷರನ್ನು ಘೋಷಿಸದ ಹೊರತು, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಚುನಾವಣೆಗೆ ಸಜ್ಜಾಗುತ್ತಿರುವಾಗ ಪಕ್ಷವನ್ನು ಮುನ್ನಡೆಸುವ ಕಾರ್ಯವನ್ನು ನಬಿನ್ ಹೊಂದಿರುತ್ತಾರೆ.

ಉಮೇದುವಾರಿಕೆಗೆ ಯಾವುದೇ ವಿರೋಧವಿಲ್ಲದ ಕಾರಣ, 2020 ರ ಜನವರಿಯಲ್ಲಿ ನಡ್ಡಾ ಅವರನ್ನು ಹೊಸ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಔಪಚಾರಿಕವಾಗಿ ಘೋಷಿಸಲಾಗಿತ್ತು.

ಜನವರಿ 2024 ರಲ್ಲಿ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕೇಂದ್ರ ಆರೋಗ್ಯ ಸಚಿವರೂ ಆಗಿರುವ ನಡ್ಡಾ ಅವರಿಗೆ ಸಾರ್ವತ್ರಿಕ ಚುನಾವಣೆಗಳು ಮುಗಿಯುವವರೆಗೆ ವಿಸ್ತರಣೆ ನೀಡಲು ನಿರ್ಧರಿಸಲಾಯಿತು.

ಪಕ್ಷದ ಸಂವಿಧಾನದ ಪ್ರಕಾರ, ಅಧ್ಯಕ್ಷರ ಅವಧಿ ತಲಾ 3 ವರ್ಷಗಳಾಗಿದ್ದು, ಸತತ ಎರಡು ಅವಧಿಗಳಿಗೆ ಇರಬಹುದಾಗಿದೆ. ರಾಷ್ಟ್ರೀಯ ಮಂಡಳಿ ಮತ್ತು ರಾಜ್ಯ ಮಂಡಳಿಗಳ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಕನಿಷ್ಠ 50% ರಾಜ್ಯಗಳಲ್ಲಿ ಮಂಡಲ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಮತ್ತು ಸಾಂಸ್ಥಿಕ ಚುನಾವಣೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಉಮೇದುವಾರಿಕೆಗೆ ಪ್ರಸ್ತಾವನೆಯನ್ನು ರಾಜ್ಯಗಳು ಮತ್ತು ಸಂಸದೀಯ ಪಕ್ಷವು ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟಿ-20 ವಿಶ್ವಕಪ್ 2026: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸದಿರಲು ICC ಮುಂದೆ ಮೂರು ಬೇಡಿಕೆ ಇಟ್ಟ ಪಾಕಿಸ್ತಾನ!

'ಬಯಸಿದರೆ ಮೋದಿ ರಾಜಕೀಯ ಜೀವನ ನಾಶಗೊಳಿಸಬಲ್ಲೆ': ಟ್ರಂಪ್ ಹೇಳಿಕೆ ವೀಡಿಯೋ ಮತ್ತೆ ವೈರಲ್, ಚರ್ಚೆ ಶುರು

'ಖಾಲಿ ಟ್ರಂಕ್ ಸರ್ಕಾರ': ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

ಕರಾಳ ಭಾನುವಾರ: ಪ್ರತ್ಯೇಕ ಅಪಘಾತದಲ್ಲಿ ನಿನ್ನೆ ಒಂದೇ ದಿನ ಆರು ಮಂದಿ ದುರ್ಮರಣ!

Weekly Horoscope: ವಾರ ಭವಿಷ್ಯ- ದ್ವಾದಶ ರಾಶಿಗಳ ಫಲಾಫಲ

SCROLL FOR NEXT