ಅರಣ್ಯಾಧಿಕಾರಿ ಮೇಲೆ ಕಾಡು ಹಂದಿ ದಾಳಿ Wild Boar Mauls Forest Officer
ದೇಶ

ಅರಣ್ಯಾಧಿಕಾರಿ ಮೇಲೆ ಕಾಡು ಹಂದಿ ದಾಳಿ, ಒಂದೂವರೆ ನಿಮಿಷ ಭೀಕರ ಕಾಳಗ.. ಮುಂದೇನಾಯ್ತು? Video

ಕಾಡು ಹಂದಿ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮೇಲೆಯೇ ಹಂದಿ ಭೀಕರವಾಗಿ ದಾಳಿ ಮಾಡಿದೆ. ಅರಣ್ಯ ಅಧಿಕಾರಿ ಶುಭಂ ಪ್ರತಾಪ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಖನೌ: ಕಾಡು ಹಂದಿ ಅರಣ್ಯಾಧಿಕಾರಿ ಮೇಲೆ ದಾಳಿ ಮಾಡಿರುವ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಬದೌನ್‌ನ ಉಜಾನಿ ಪ್ರದೇಶದ ಸಿರ್ಸೌಲಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಕಾಡು ಹಂದಿ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮೇಲೆಯೇ ಹಂದಿ ಭೀಕರವಾಗಿ ದಾಳಿ ಮಾಡಿದೆ.

ಅರಣ್ಯ ಅಧಿಕಾರಿ ಶುಭಂ ಪ್ರತಾಪ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅದು ಹೇಗೋ ಇತರೆ ಸಿಬ್ಬಂದಿ ಕಾಡುಹಂದಿಯ ದಾಳಿಯಿಂದ ಅವರನ್ನು ರಕ್ಷಿಸಿ ಹೊರಕ್ಕೆ ಕರೆತಂದಿದ್ದಾರೆ. ಪ್ರಸ್ತುತ ಶುಭಂ ಪ್ರತಾಪ್ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಉನ್ನತ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

ಇಲ್ಲಿನ ಸಿರ್ಸೌಲಿ ಗ್ರಾಮಕ್ಕೆ ನುಗ್ಗಿದ್ದ ಕಾಡುಹಂದಿ ಸಾಕಷ್ಟು ಉಪಟಳ ನೀಡಿತ್ತು. ಹಲವು ಗ್ರಾಮಸ್ಥರ ಮೇಲೆ ಹಂದಿ ದಾಳಿ ಮಾಡಿತ್ತು. ಹೀಗಾಗಿ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಅದರಂತೆ ಗುರುವಾರ ಕಾಡು ಹಂದಿಯ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ರೂಪಿಸಿದ್ದರು. ನಾಲ್ಕು ಸದಸ್ಯರ ಅರಣ್ಯ ಇಲಾಖೆ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ಪ್ರದೇಶಕ್ಕೆ ಆಗಮಿಸಿತು. ತಂಡದೊಂದಿಗೆ ನಾಲ್ಕರಿಂದ ಆರು ಸ್ಥಳೀಯ ಗ್ರಾಮಸ್ಥರು ಸಹ ಇದ್ದರು.

ಈ ವೇಳೆ ಕಾಡುಹಂದಿ ಪೊದೆಯೊಳಗಿರುವುದನ್ನು ಕಂಡ ಸಿಬ್ಬಂದಿ ಅದನ್ನು ಬಲೆಯ ಮೂಲಕ ಹಿಡಿಯಲೆತ್ನಿಸಿದ್ದಾರೆ. ಈ ವೇಳೆ ಕಾಡುಹಂದಿ ಇದ್ದಕ್ಕಿದ್ದಂತೆ ಅರಣ್ಯ ಅಧಿಕಾರಿ ಶುಭಂ ಪ್ರತಾಪ್ ಮೇಲೆ ದಾಳಿ ಮಾಡಿದೆ. ದಾಳಿ ಎಷ್ಟು ಹಠಾತ್ತನೆಯಾಗಿತ್ತೆಂದರೆ ಅವರಿಗೆ ಚೇತರಿಸಿಕೊಳ್ಳಲು ಸಮಯವೇ ಇರಲಿಲ್ಲ. ಈ ಘಟನೆ ಸ್ಥಳದಲ್ಲಿ ಭಯಭೀತತೆಯನ್ನು ಉಂಟುಮಾಡಿತು. ಇತರೆ ಅರಣ್ಯ ಅಧಿಕಾರಿಗಳು ಕೂಗುತ್ತಾ ಮತ್ತು ಕೋಲುಗಳನ್ನು ಬಳಸಿ ಹಂದಿಯ ಮೇಲೆ ದಾಳಿ ಮಾಡಿದರು.

ಒಂದೆಡೆ ತನ್ನ ಮೇಲೆ ಸಿಬ್ಬಂದಿ ಬಡಿಗೆಗಳಿಂದ ಬಡಿಯುತ್ತಿದ್ದರೂ ಜಗ್ಗದ ಕಾಡುಬಂದಿ ಪ್ರತಾಪ್ ಮೇಲೆ ದಾಳಿ ಮುಂದುವರೆಸಿತ್ತು. ಸುಮಾರು ಒಂದೂವರೆ ನಿಮಿಷಗಳ ಕಾಲ ಕಾಡುಹಂದಿ ದಾಳಿ ಮುಂದುವರೆಸಿತ್ತು. ಈ ವೇಳೆ ಸಿಬ್ಬಂದಿಯೊಬ್ಬರ ಹೊಡೆತಕ್ಕೆ ಕಾಡುಹಂದಿ ತನ್ನ ಗಮನ ಬೇರೆಡೆ ತಿರುಗಿಸಿದಾಗ ಕೂಡಲೇ ಸಿಬ್ಬಂದಿ ಪ್ರತಾಪ್ ಅವರನ್ನು ಎಳೆದುಕೊಂಡರು. ಅಷ್ಟು ಹೊತ್ತಿಗಾಗಲೇ ಪ್ರತಾಪ್ ಗೆ ತೀವ್ರ ಗಾಯಗಳಾಗಿದ್ದವು.

ಹತ್ತಾರು ಗ್ರಾಮಗಳ ಮೇಲೆ ದಾಳಿ, ಅಪಾರ ಬೆಳೆ ನಾಶ

ಅಂದಹಾಗೆ ಉಜ್ಜೈನಿ ಅಭಿವೃದ್ಧಿ ಬ್ಲಾಕ್‌ನ ಸುಮಾರು 12 ಹಳ್ಳಿಗಳ ಹತ್ತು ಸಾವಿರಕ್ಕೂ ಹೆಚ್ಚು ರೈತರು ಕಾಡುಹಂದಿಗಳ ಕಾಟದಿಂದ ತೊಂದರೆಗೀಡಾಗಿದ್ದಾರೆ. ಕಾಡುಹಂದಿಗಳು ಬೆಳೆಗಳು ಮತ್ತು ತೋಟಗಾರಿಕೆಗೆ ಗಮನಾರ್ಹ ಹಾನಿಯನ್ನುಂಟುಮಾಡಿದ್ದು, ರೈತರು ಕಂಗಾಲಾಗಿದ್ದಾರೆ.

ಈ ಪ್ರದೇಶದ ಹಳ್ಳಿಗಳಲ್ಲಿ ಅಬ್ದುಲ್ಲಾಗಂಜ್, ಸಿರ್ಸೌಲಿ, ಅಲ್ಲಾಹಪುರ್ ಭೋಗಿ, ಮಿರ್ಜಾಪುರ್, ದುದೇನಗರ, ಜಮ್ರೋಲಿ, ಬಿಹಾರ್ ಹರಿಶ್ಚಂದ್ರ, ವಸಂತನಗರ, ಹಾಗೆಯೇ ಗಂಗಾ ನದಿಯ ದಡದಲ್ಲಿರುವ ಹಳ್ಳಿಗಳು, ನಾನಖೇಡ, ಪಿಪ್ರೌಲ್ ಪುಖ್ತಾ, ಚಂದನ್‌ಪುರ್, ನರಸೈನಾ ಮತ್ತು ಸಹಸ್ವಾನ್ ಮತ್ತು ಕದರೋಕ್‌ನ ಹಲವಾರು ಹಳ್ಳಿಗಳು ಸೇರಿವೆ.

ಕಾಡುಹಂದಿಗಳು ವರ್ಷಗಳಿಂದ ಈ ಗ್ರಾಮಗಳಲ್ಲಿ ಬೆಳೆಗಳು ಮತ್ತು ತೋಟಗಾರಿಕೆಗೆ ಗಮನಾರ್ಹ ಹಾನಿಯನ್ನುಂಟುಮಾಡಿವೆ. ಆಲೂಗಡ್ಡೆ ಮತ್ತು ಗೋಧಿ ಬೆಳೆಗಳು ಹೊಲಗಳಲ್ಲಿ ಹುಲುಸಾಗಿ ಬೆಳೆಯುತ್ತಿವೆ. ರೈತರು ಇಳುವರಿ ಚೆನ್ನಾಗಿ ಬರುತ್ತದೆ ಮತ್ತು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಆಶಿಸಿದ್ದರು. ಆದರೆ ಹಂದಿಗಳು ತಮ್ಮ ಶ್ರಮವನ್ನು ಹಾಳುಮಾಡಿವೆ.

ಎಕರೆಗೆ 20 ರಿಂದ 25 ಕ್ವಿಂಟಾಲ್ ಇಳುವರಿ ಬರುತ್ತಿತ್ತು, ಆದರೆ ಕಾಡು ಹಂದಿಗಳು ಅವರ ಎಲ್ಲಾ ಪ್ರಯತ್ನಗಳನ್ನು ಹಾಳುಮಾಡಿವೆ. ಪರಿಣಾಮವಾಗಿ, ಅವರು ಗಮನಾರ್ಹ ನಷ್ಟವನ್ನು ಅನುಭವಿಸುತ್ತಾರೆ. ಇಡೀ ಪ್ರದೇಶವು ಕಾಡು ಹಂದಿಗಳಿಂದ ಬೆದರಿಕೆಗೆ ಒಳಗಾಗಿದೆ ಮತ್ತು ಸರ್ಕಾರ ಮತ್ತು ಆಡಳಿತವು ಅವುಗಳನ್ನು ನಿರ್ಮೂಲನೆ ಮಾಡಲು ಗಂಭೀರ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದರು. ಇಲ್ಲದಿದ್ದರೆ, ರೈತರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ರೈತರು ತಮ್ಮ ಬೆಳೆಗಳನ್ನು ಕಾಯುವಾಗ ದಾಳಿಯ ಭಯದಲ್ಲಿ ಬದುಕುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯಂತಹ ಸಂಘಟಿತ ಅಪರಾಧ ಜಾಲಗಳ ಮೇಲೆ '360 ಡಿಗ್ರಿ ದಾಳಿ': ಅಮಿತ್ ಶಾ

'ಕಠಿಣ ಶಿಕ್ಷೆಯಾಗಲಿ.. ಇಂತಹುದನ್ನು ಭಾರತ ನಿರ್ಲಕ್ಷಿಸಲ್ಲ': ಹಿಂದೂಗಳ ಹತ್ಯೆ ಕುರಿತು ಬಾಂಗ್ಲಾದೇಶಕ್ಕೆ ಖಡಕ್ ಎಚ್ಚರಿಕೆ!

ನಮ್ಮ ಸಾಧನೆಗಳ ಕ್ರೆಡಿಟ್ ತೆಗೆದುಕೊಳ್ಳುವ ಮೂಲಕ ವೈಷ್ಣವ್ ಕರ್ನಾಟಕದ ಯಶಸ್ಸನ್ನು ಕದಿಯುತ್ತಿದ್ದಾರೆ: ಸಿದ್ದರಾಮಯ್ಯ

ಅಮೆರಿಕ-ಚೀನಾ ನಡುವೆ ಹೊಸ ಸಮರ; ಯುಎಸ್ ನ 20 ರಕ್ಷಣಾ ಸಂಸ್ಥೆಗಳಿಗೆ ನಿರ್ಬಂಧ!

Vijay Hazare Trophy: ಫೀಲ್ಡಿಂಗ್ ವೇಳೆ KKR ಸ್ಟಾರ್ ಗೆ ಗಂಭೀರ ಗಾಯ; ಆಸ್ಪತ್ರೆಗೆ ದೌಡು.. ಆಗಿದ್ದೇನು?

SCROLL FOR NEXT