ಸ್ಟಾರ್ಟಪ್ ಗಳಿಗೆ ವಿಶೇಷ ಅನುದಾನ ಯೋಜನೆ 
ದೇಶ

Union Budget 2025: ಸ್ಟಾರ್ಟಪ್ ಗಳಿಗೆ 10 ಸಾವಿರ ಕೋಟಿ ರೂ ನಿಧಿ ಯೋಜನೆ

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಜನವರಿ 16, 2016 ರಂದು ಸ್ಟಾರ್ಟ್‌ಅಪ್ ಇಂಡಿಯಾಕ್ಕಾಗಿ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು.

ನವದೆಹಲಿ: ಉದಯೋನ್ಮುಖ ನವ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮತ್ತೊಂದು ಸುತ್ತಿನ ಸ್ಟಾರ್ಟ್‌ಅಪ್‌ಗಳಿಗೆ ನಿಧಿಗಳ ಯೋಜನೆ ಘೋಷಿಸಿದ್ದಾರೆ.

ಸರ್ಕಾರವು ಸ್ಟಾರ್ಟ್‌ಅಪ್‌ಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವತ್ತ ಗಮನಹರಿಸುತ್ತಿರುವುದರಿಂದ ಈ ಘೋಷಣೆ ಮಹತ್ವದ್ದಾಗಿದೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿದೆ. ಜನವರಿ 16, 2016 ರಂದು ಸ್ಟಾರ್ಟ್‌ಅಪ್ ಇಂಡಿಯಾಕ್ಕಾಗಿ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಲಾಗಿತ್ತು.

ಇದೀಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಟಾರ್ಟಪ್ ಗಳಿಗೆ 10 ಸಾವಿರ ಕೋಟಿ ರೂ.ಗಳ ನಿಧಿ ಯೋಜನೆ ಘೋಷಿಸಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಬಜೆಟ್ ಮಂಡನೆಯಲ್ಲಿ ನವ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸಲು ನಿರ್ಮಲಾ ಸೀತಾರಾಮನ್ ಈ ಯೋಜನೆ ಘೋಷಣೆ ಮಾಡಿದರು. 10,000 ಕೋಟಿ ರೂಪಾಯಿಗಳ ಹೊಸ ಮತ್ತು ವಿಸ್ತೃತ ವ್ಯಾಪ್ತಿಯನ್ನು ಹೊಂದಿರುವ ಹೊಸ ನಿಧಿಗಳ ನಿಧಿ (FoF) ಅನ್ನು ಸ್ಥಾಪಿಸುವುದಾಗಿ ಘೋಷಿಸಿದರು.

10,000 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಸರ್ಕಾರ ಘೋಷಿಸಿದ ಆರಂಭಿಕ FoF, 91,000 ಕೋಟಿ ರೂಪಾಯಿಗಳ ಬದ್ಧತೆಯನ್ನು ವೇಗವರ್ಧಿಸುವಲ್ಲಿ ಯಶಸ್ವಿಯಾಯಿತು ಎಂದು ಸಚಿವೆ ನಿರ್ಮಲಾ ಹೇಳಿದರು.

5 ಲಕ್ಷ ಎಸ್‌ಸಿ/ಎಸ್‌ಟಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಯನ್ನು ಕೇಂದ್ರೀಕರಿಸಿ, ಡೀಪ್‌ಟೆಕ್ ವಲಯಕ್ಕೆ ಎಫ್‌ಒಎಫ್ ಸ್ಥಾಪಿಸಲಾಗುತ್ತದೆ. ದೇಶದಲ್ಲಿ ಮುಂದಿನ ಪೀಳಿಗೆಯ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಇದನ್ನು ಮಾಡಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ, ಕೇಂದ್ರವು ಐಐಟಿ ಮತ್ತು ಐಐಎಸ್‌ಸಿಯಲ್ಲಿ ತಾಂತ್ರಿಕ ಸಂಶೋಧನೆಗಾಗಿ 10,000 ಫೆಲೋಶಿಪ್‌ಗಳನ್ನು ಒದಗಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ

“AIF ಗಳಿಗಾಗಿ ನಿಧಿಗಳ ನಿಧಿಗೆ 10,000 ಕೋಟಿ ರೂಪಾಯಿಗಳ ಬದ್ಧತೆಯನ್ನು ನವೀಕರಿಸುವುದು ಭಾರತೀಯ ನವೋದ್ಯಮ ಮತ್ತು ಹೂಡಿಕೆ ಪರಿಸರ ವ್ಯವಸ್ಥೆಗೆ ಮಹತ್ವದ ಹೆಜ್ಜೆಯಾಗಿದೆ. ಆರಂಭಿಕ 10,000 ಕೋಟಿ ರೂಪಾಯಿಗಳ ಬದ್ಧತೆಯು 91,000 ಕೋಟಿ ರೂ ಹೂಡಿಕೆಗಳನ್ನು ವೇಗವರ್ಧಿಸಿತು ಮತ್ತು ಈ ಹೊಸ ಹೂಡಿಕೆಯು ಹೆಚ್ಚುವರಿಯಾಗಿ 1 ಲಕ್ಷದಿಂದ 1.5 ಲಕ್ಷ ಕೋಟಿ ರೂ ಬಂಡವಾಳವನ್ನು ಆಕರ್ಷಿಸುತ್ತದೆ ಎಂದು ನಾನು ಸಂಪೂರ್ಣವಾಗಿ ನಿರೀಕ್ಷಿಸುತ್ತೇನೆ,” ಎಂದು ಅರ್ಥ್ ವೆಂಚರ್ ಫಂಡ್ಸ್‌ನ ವ್ಯವಸ್ಥಾಪಕ ಪಾಲುದಾರ ಅನಿರುದ್ಧ್ ದಮಾನಿ ಹೇಳಿದ್ದಾರೆ.

ಅಂದಹಾಗೆ ಡಿಪಿಐಐಟಿ ಮೇಲ್ವಿಚಾರಣಾ ಸಂಸ್ಥೆಯಾಗಿದ್ದು, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಐಡಿಬಿಐ) ಎಫ್‌ಎಫ್‌ಎಸ್‌ಗೆ ಕಾರ್ಯಾಚರಣಾ ಸಂಸ್ಥೆಯಾಗಿದೆ. ಯೋಜನೆಯ ಪ್ರಗತಿ ಮತ್ತು ನಿಧಿಯ ಲಭ್ಯತೆಯ ಆಧಾರದ ಮೇಲೆ 14 ಮತ್ತು 15 ನೇ ಹಣಕಾಸು ಆಯೋಗದ ಚಕ್ರಗಳಲ್ಲಿ ಒಟ್ಟು 10,000 ಕೋಟಿ ರೂ.ಗಳನ್ನು ಒದಗಿಸಲು ಯೋಜಿಸಲಾಗಿತ್ತು.

ಇದು ಆರಂಭಿಕ ಹಂತ, ಬೀಜ ಹಂತ ಮತ್ತು ಬೆಳವಣಿಗೆಯ ಹಂತದಲ್ಲಿ ನವೋದ್ಯಮಗಳಿಗೆ ಬಂಡವಾಳ ಲಭ್ಯವಾಗುವಂತೆ ಮಾಡುವುದಲ್ಲದೆ, ದೇಶೀಯ ಬಂಡವಾಳವನ್ನು ಸಂಗ್ರಹಿಸಲು ಅನುಕೂಲವಾಗುವಂತೆ, ವಿದೇಶಿ ಬಂಡವಾಳದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸ್ವದೇಶಿ ಮತ್ತು ಹೊಸ ಸಾಹಸೋದ್ಯಮ ಬಂಡವಾಳ ನಿಧಿಗಳನ್ನು ಪ್ರೋತ್ಸಾಹಿಸುವ ವಿಷಯದಲ್ಲಿ ವೇಗವರ್ಧಕ ಪಾತ್ರವನ್ನು ವಹಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT