ಅಂಗನವಾಡಿ (ಸಂಗ್ರಹ ಚಿತ್ರ) 
ದೇಶ

'ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು': ಅಂಗನವಾಡಿ ಬಾಲಕನ ಬೇಡಿಕೆಗೆ ಉತ್ತರಿಸಿದ ಸಚಿವೆ!

ನೆರೆಯ ಕೇರಳದಲ್ಲಿ ಈ ಘಟನೆ ನಡೆದಿದ್ದು, ಥ್ರಾಜುಲ್ ಎಸ್ ಶಂಕರ್ (Thrajul S Sankar) ಬಾಲಕ ತನ್ನ ತಾಯಿಗೆ 'ಅಂಗನವಾಡಿಯಲ್ಲಿ ಉಪ್ಮಾ ಬದಲು ಬಿರಿಯಾನಿ (Biryani) ಮತ್ತು ಚಿಕನ್ ಫ್ರೈ ಬೇಕು' (chicken fry) ಎಂದು ಕೇಳಿದ್ದಾನೆ.

ತಿರುವನಂತಪುರಂ: ಅಂಗವಾಡಿಯಲ್ಲಿ ತಿನ್ನಲು ಉಪ್ಪಿಟ್ಟು ಕೊಟ್ಟಿದ್ದಕ್ಕೆ ನನಗೆ ಉಪ್ಪಿಟ್ಟು ಬೇಡ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡಿ ಎಂದು ಪುಟ್ಟ ಬಾಲಕ ಕೇಳಿರುವ ವಿಡಿಯೋ ವೈರಲ್ ಆಗುತ್ತಿದೆ.

ನೆರೆಯ ಕೇರಳದಲ್ಲಿ ಈ ಘಟನೆ ನಡೆದಿದ್ದು, ಥ್ರಾಜುಲ್ ಎಸ್ ಶಂಕರ್ (Thrajul S Sankar) ಬಾಲಕ ತನ್ನ ತಾಯಿಗೆ 'ಅಂಗನವಾಡಿಯಲ್ಲಿ ಉಪ್ಮಾ ಬದಲು ಬಿರಿಯಾನಿ (Biryani) ಮತ್ತು ಚಿಕನ್ ಫ್ರೈ ಬೇಕು' (chicken fry) ಎಂದು ಕೇಳಿದ್ದಾನೆ. ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಈ ಬಗ್ಗೆ ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಇಷ್ಟಕ್ಕೂ ವಿಡಿಯೋದಲ್ಲೇನಿದೆ?

ವೈರಲ್ ವಿಡಿಯೋದಲ್ಲಿ, ಕ್ಯಾಪ್ ಧರಿಸಿರುವ ಶಂಕು, "ನನಗೆ ಅಂಗನವಾಡಿಯಲ್ಲಿ ಉಪ್ಮಾ ಬದಲಿಗೆ ಬಿರಿಯಾನಿ ಮತ್ತು 'ಪೊರಿಚಾ ಕೋಜಿ' (ಚಿಕನ್ ಫ್ರೈ) ಬೇಕು" ಎಂದು ಹೇಳುತ್ತಿದ್ದಾನೆ. ಈ ಬಾಲಕನ ವಿನಂತಿಯು ಎಷ್ಟು ಗಮನ ಸೆಳೆಯಿತು ಎಂದರೆ ಕೆಲವರು ಅವರಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ಕಳಿಸಲು ಸಹ ಮುಂದಾಗಿದ್ದಾರೆ.

ಅಂಗನವಾಡಿ ಮೆನು ಚೇಂಜ್?

ಬಾಲಕ ಈ ವಿಡಿಯೋ ವೈರಲ್ ಆಗುತ್ತಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ವೀಣಾ ಜಾರ್ಜ್, 'ಮಕ್ಕಳ ಪೋಷಣೆಯನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳು ಈಗಾಗಲೇ ವಿವಿಧ ಆಹಾರ ಪದಾರ್ಥಗಳನ್ನು ಒದಗಿಸುತ್ತಿವೆ. ಅದಾಗ್ಯೂ ಈ ಸರ್ಕಾರದ ಅಡಿಯಲ್ಲಿ ಅಂಗನವಾಡಿಗಳ ಮೂಲಕ ಮೊಟ್ಟೆ ಮತ್ತು ಹಾಲು ನೀಡುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯದಲ್ಲಿ ಸ್ಥಳೀಯ ಸಂಸ್ಥೆಗಳು ಅಂಗನವಾಡಿಗಳಲ್ಲಿ ವಿವಿಧ ಆಹಾರಗಳನ್ನು ಒದಗಿಸುತ್ತಿವೆ ಎಂದು ಹೇಳಿದ್ದಾರೆ.

ಅಲ್ಲದೆ ಶಂಕು ಅವರ ಸಲಹೆಯನ್ನು ಆಧರಿಸಿ ಅಂಗನವಾಡಿ ಮೆನುವನ್ನು ಪರಿಷ್ಕರಿಸಲು ಸರ್ಕಾರ ಪರಿಗಣಿಸುತ್ತದೆ ಎಂದೂ ವೀಣಾ ಜಾರ್ಜ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT