ಅಕ್ರಮ ವಲಸಿಗರ ಗಡಿಪಾರು online desk
ದೇಶ

ಅಮೆರಿಕಾದಿಂದ ಗಡಿಪಾರು: 104 ಭಾರತೀಯರನ್ನು ದಾರಿ ತಪ್ಪಿಸಿದ್ದರ ಹಿಂದೆ ಹಲವು ಸಾಮಾನ್ಯ ಅಂಶಗಳು; ಈ ವಿಷಯಗಳ ಬಗ್ಗೆ ಇರಲಿ ಎಚ್ಚರ!

"ಏಜೆಂಟ್ ನನಗೆ ಸುಗಮ ಮಾರ್ಗದ ಬಗ್ಗೆ ಪದೇ ಪದೇ ಭರವಸೆ ನೀಡಿದರು. ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ ಎಂದು ತಿಳಿದಿದ್ದರಿಂದ, ಯುಎಸ್ ಚುನಾವಣಾ ಫಲಿತಾಂಶಗಳಿಗೆ ಮುಂಚಿತವಾಗಿ ನನ್ನನ್ನು ಕಳುಹಿಸಲು ನಾನು ಏಜೆಂಟ್ ಅವರನ್ನು ಕೇಳಿದ್ದೆ" ಎಂದು ಮಂದೀಪ್ ವಿವರಿಸಿದ್ದಾರೆ.

ಅಮೆರಿಕದಿಂದ ಗಡೀಪಾರು ಮಾಡಲಾದ 104 ಅಕ್ರಮ ವಲಸಿಗರು ತಮಗೆ ಈ ಪರಿಸ್ಥಿತಿ ಉಂಟಾಗಿದ್ದಕ್ಕೆ ಕಾರಣವಾದ ಸಾಮಾನ್ಯ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಗಡಿಪಾರಾದವರ ಪೈಕಿ ಹೆಚ್ಚಿನವರು ಈ ವರ್ಷದ ಜನವರಿಯಲ್ಲಿ ಅಮೆರಿಕವನ್ನು ಪ್ರವೇಶಿಸಿದರು ಮತ್ತು ದುಬೈನಲ್ಲಿ ಟ್ರಾವೆಲ್ ಏಜೆಂಟ್‌ಗಳು ನಿರ್ವಹಿಸುವ 'ಡಂಕಿ ರೂಟ್ (Dunki Route) ಮೂಲಕ ಕಳುಹಿಸಲ್ಪಟ್ಟಿದ್ದಾರೆ. ಈ ಏಜೆಂಟ್‌ಗಳನ್ನು ದೆಹಲಿ ಮತ್ತು ಯುಕೆಯಲ್ಲಿರುವ ಕೆಲವರು ಸೇರಿದಂತೆ ಭಾರತದ ಸ್ಥಳೀಯ ಉಪ-ಏಜೆಂಟ್‌ಗಳ ಮೂಲಕ ಸಂಪರ್ಕಿಸಲಾಗಿತ್ತು.

ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅಮೆರಿಕದ ವಿಶೇಷ ಮಿಲಿಟರಿ ವಿಮಾನದಲ್ಲಿ ಕೈಕೋಳ ಹಾಕಿ ಬಂದ ಗಡೀಪಾರು ಮಾಡಿದವರನ್ನು ವಿಚಾರಣೆ ನಡೆಸಿದ್ದಾರೆ. ಹಿಂದಿರುಗಿದವರು ತಮ್ಮ ಸಂಕಷ್ಟದ ವಿವರಗಳನ್ನು ಹಂಚಿಕೊಂಡಿದ್ದು ದೊಡ್ಡ ಮೊತ್ತದ ಹಣವನ್ನು ತಮ್ಮಿಂದ ಪಡೆದ ಏಜೆಂಟರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಬೈ ಮೂಲದ ಏಜೆಂಟ್ ಗಳು, ಮೆಕ್ಸಿಕೋ ಗಡಿ, ಡಂಕಿ ರೂಟ್ ಗಡಿಪಾರಾದವರು ಎದುರಿಸಿದ ಪರಿಸ್ಥಿತಿಗೆ ಕಾರಣವಾದ ಸಾಮಾನ್ಯ ಅಂಶವಾಗಿದೆ.

ಡಂಕಿ ರೂಟ್ ಎನ್ನುವುದೇಕೆ?

ಬಾಲಿವುಡ್ ನಟ ಶಾರೂಖ್ ಖಾನ್ ನಟನೆಯ ಡಂಕಿ ಎನ್ನುವ ಸಿನಿಮಾದಲ್ಲಿ ಜನರು ಅಮೇರಿಕ, ಕೆನಡಾಗಳಿಗೆ ವೀಸಾ ಪಡೆಯದೇ ಪಾಸ್ ಪೋರ್ಟ್ ಇಲ್ಲದೇ ಅಕ್ರಮ ವಲಸೆ ಹೋಗುವುದನ್ನು ತೋರಿಸಲಾಗಿದೆ. ಈ ರೀತಿ ದಾರಿ ತಪ್ಪಿಸುವ ಏಜೆಂಟ್ ಗಳ ಮೂಲಕ ಅಕ್ರಮವಾಗಿ ಮತ್ತೊಂದು ದೇಶಕ್ಕೆ ತೆರಳುವ ಮಾರ್ಗವನ್ನು ಡಂಕಿ ರೂಟ್ ಎಂದು ಹೇಳುತ್ತಾರೆ.

ಈ ರೀತಿ ಡಂಕಿ ರೂಟ್ ಮೂಲಕ ಅಮೇರಿಕಾಗೆ ತೆರಳಿ ಅಲ್ಲಿಂದ "ಗಡೀಪಾರು ಮಾಡಲಾದ ಕೆಲವರು ದೆಹಲಿ ಮತ್ತು ಯುಕೆಯಲ್ಲಿರುವ ಏಜೆಂಟ್‌ಗಳ ಮೂಲಕ ಹೋಗಿದ್ದಾರೆ ಎಂದು ಹೇಳಿದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರಲ್ಲಿ, ತರಣ್ ತರಣ್ ಜಿಲ್ಲೆಯ ಚೋಹ್ಲಾ ಸಾಹಿಬ್‌ನ 29 ವರ್ಷದ ಮಂದೀಪ್ ಸಿಂಗ್ ಎರಡೂವರೆ ವರ್ಷಗಳ ಹಿಂದೆ ಸ್ಪೇನ್‌ಗೆ ತೆರಳಿದ್ದರು. ಅವರು ಅಲ್ಲಿ ಚೆನ್ನಾಗಿದ್ದರೂ, ಅವರು ಅಮೆರಿಕಕ್ಕೆ ಹೋಗಲು ನಿರ್ಧರಿಸಿದರು.

ಅವರು ಸ್ಪೇನ್ ಪ್ರವೇಶವನ್ನು ಸುಗಮಗೊಳಿಸಿದ ಮತ್ತು ಅಮೆರಿಕ ತಲುಪಲು 1 ಕೋಟಿ ರೂ. ಪಾವತಿಸಿದ ಅದೇ ಏಜೆಂಟರನ್ನು ಸಂಪರ್ಕಿಸಿದರು. ಅವರು ಮೊದಲು ಸೆರ್ಬಿಯಾಕ್ಕೆ ವೀಸಾ ಪಡೆದು ದುಬೈಗೆ ಪ್ರಯಾಣ ಬೆಳೆಸಿದರು ಮತ್ತು ನಂತರ ಅರ್ಮೇನಿಯಾ ಮೂಲಕ ಸೆರ್ಬಿಯಾಕ್ಕೆ ಹಾರಿದರು. ಅಲ್ಲಿಂದ ಅವರು ಮೆಕ್ಸಿಕೋದ ಟಿಜುವಾನಾ ತಲುಪಿದರು.

"ಏಜೆಂಟ್ ನನಗೆ ಸುಗಮ ಮಾರ್ಗದ ಬಗ್ಗೆ ಪದೇ ಪದೇ ಭರವಸೆ ನೀಡಿದರು. ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ ಎಂದು ತಿಳಿದಿದ್ದರಿಂದ, ಯುಎಸ್ ಚುನಾವಣಾ ಫಲಿತಾಂಶಗಳಿಗೆ ಮುಂಚಿತವಾಗಿ ನನ್ನನ್ನು ಕಳುಹಿಸಲು ನಾನು ಏಜೆಂಟ್ ಅವರನ್ನು ಕೇಳಿದ್ದೆ" ಎಂದು ಮಂದೀಪ್ ವಿವರಿಸಿದ್ದಾರೆ.

ಕಾಡಿನ ಮೂಲಕ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ನಡೆದು ಬಂದ ನಂತರ, ಯುಎಸ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾದೆವು ಆದರೆ ಶೀಘ್ರದಲ್ಲೇ ಗಡಿ ಗಸ್ತು ಅಧಿಕಾರಿಗಳು ನಮ್ಮನ್ನು ಬಂಧಿಸಿದರು ಎಂದು ಗಡಿಪಾರಾದವರು ತಾವು ಎದುರಿಸಿದ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಹರಿಯಾಣದ ಕರ್ನಾಲ್‌ನ ಕಲ್ರೋನ್ ಗ್ರಾಮದ ಆಕಾಶ್ (20) ಅವರ ಕುಟುಂಬಸ್ಥರು ಭೂಮಿಯನ್ನು ಮಾರಾಟ ಮಾಡಿದ ನಂತರ 72 ಲಕ್ಷ ರೂ. ಪಾವತಿಸಿ, ಮೋಸ ಹೋಗಿದ್ದಾರೆ. ಜನವರಿ 26 ರಂದು ಆಕಾಶ್ ಮೆಕ್ಸಿಕೋ ಗಡಿಯ ಮೂಲಕ ಅಮೆರಿಕ ಪ್ರವೇಶಿಸಿದ್ದರು, ಗಡಿ ಗಸ್ತು ಪಡೆಯಿಂದ ಬಂಧಿಸಲ್ಪಟ್ಟರು.

8 ನೇ ತರಗತಿಯವರೆಗೆ ಓದಿದ್ದ ಕುರುಕ್ಷೇತ್ರದ ಇಸ್ಮಾಯಿಲಾಬಾದ್‌ನ ಖುಷ್‌ಪ್ರೀತ್ ಸಿಂಗ್ (18) ಅದೇ ಮಾರ್ಗದ ಮೂಲಕ ಅಮೇರಿಕಾ ಪ್ರವೇಶಿಸಲು 45 ಲಕ್ಷ ರೂ. ಪಾವತಿಸಿ ಮೋಸ ಹೋಗಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಅಂಬಾಲಾದ ಜಿತೇಶ್ ಕುಮಾರ್ ಜನವರಿ 19 ರಂದು ಅಮೆರಿಕಕ್ಕೆ ಪ್ರವೇಶಿಸಿ ಬಂಧನಕ್ಕೆ ಒಳಗಾಗಿದ್ದರು ಅವರೂ ಸಹ 45 ಲಕ್ಷ ರೂ. ಪಾವತಿಸಿದ್ದರು ಮತ್ತು ಅಮೆರಿಕ ತಲುಪಲು ಆರು ತಿಂಗಳುಗಳನ್ನು ತೆಗೆದುಕೊಂಡರು ಎಂದು ತಿಳಿದುಬಂದಿದೆ.

ಈ ಪ್ರಕರಣಗಳು ಗಡೀಪಾರುಗಳು ಅಂತರರಾಷ್ಟ್ರೀಯ ಏಜೆಂಟ್‌ಗಳ ಮೂಲಕ ಕಾರ್ಯನಿರ್ವಹಿಸುವ ಅಕ್ರಮ ವಲಸೆ ಮಾರ್ಗಗಳ ಬೆಳೆಯುತ್ತಿರುವ ಜಾಲವನ್ನು ಎತ್ತಿ ತೋರಿಸುತ್ತವೆ, ವಲಸಿಗರು ತಮ್ಮ ಜೀವಗಳನ್ನು ಪಣಕ್ಕಿಟ್ಟು ಅಮೇರಿಕಾಗೆ ತೆರಳಿದ್ದು, ಅವರ ಕುಟುಂಬಗಳು ತಮ್ಮ ಪ್ರಯಾಣಕ್ಕೆ ಹಣಕಾಸು ಒದಗಿಸಲು ಆಸ್ತಿಯನ್ನು ಮಾರಾಟ ಮಾಡಿದ ಉದಾಹರಣೆಗಳು ಈಗ ಬಹಿರಂಗವಾಗುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT