ಅಲೀಘರ್ ಮುಸ್ಲಿಂ ವಿವಿ- ಗೋವುಗಳು (ಸಾಂಕೇತಿಕ ಚಿತ್ರ) online desk
ದೇಶ

Aligarh Muslim University: ಭಾನುವಾರದ ಊಟದಲ್ಲಿ "ಗೋಮಾಂಸ" ಬಿರಿಯಾನಿ; ವಿವಾದ!

ಸರ್ ಶಾ ಸುಲೈಮಾನ್ ಹಾಲ್‌ನ ವಿದ್ಯಾರ್ಥಿಗಳು ಈ ನೋಟಿಸ್ ನ್ನು ಕಂಡುಕೊಂಡ ನಂತರ ವಿವಾದ ಭುಗಿಲೆದ್ದಿತು, ಈ ನೊಟೀಸ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ನವದೆಹಲಿ: ಅಲೀಘಡ ಮುಸ್ಲಿಂ ವಿಶ್ವವಿದ್ಯಾಲಯದ ಭಾನುವಾರದ ಊಟದ ಮೆನು ವಿವಾದದ ಕಿಡಿ ಹೊತ್ತಿಸಿದೆ. ಸರ್ ಶಾ ಸುಲೇಮಾನ್ ಹಾಲ್ ನಲ್ಲಿ ಭಾನುವಾರದ ಊಟದಲ್ಲಿ ಬೀಫ್ ಬಿರಿಯಾನಿ ವಿತರಿಸುವಂತೆ ಸೂಚಿಸಲಾಗಿರುವ ನೊಟೀಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಇಬ್ಬರು "ಅಧಿಕೃತ" ವ್ಯಕ್ತಿಗಳು ಹೊರಡಿಸಿದ್ದಾರೆಂದು ಹೇಳಲಾದ ನೋಟಿಸ್‌ನಲ್ಲಿ, "ಭಾನುವಾರದ ಊಟದ ಮೆನುವನ್ನು ಬದಲಾಯಿಸಲಾಗಿದೆ ಮತ್ತು ಬೇಡಿಕೆಯ ಮೇರೆಗೆ ಚಿಕನ್ ಬಿರಿಯಾನಿಯ ಬದಲಿಗೆ ಬೀಫ್ ಬಿರಿಯಾನಿ ನೀಡಲಾಗುವುದು" ಎಂದು ಬರೆಯಲಾಗಿದೆ.

ಈ ನೋಟಿಸ್ ಬಗ್ಗೆ ವಿಶ್ವವಿದ್ಯಾನಿಲಯದಲ್ಲಿ ಗದ್ದಲ ಉಂಟಾದ ನಂತರ, ಎಎಂಯು (AMU) ಆಡಳಿತವು ಅದರಲ್ಲಿ "ಟೈಪಿಂಗ್ ದೋಷ" ಇದೆ ಎಂದು ಸ್ಪಷ್ಟಪಡಿಸಿತು ಮತ್ತು ಹೊಣೆಗಾರರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಭರವಸೆ ನೀಡಿತು.

ಸರ್ ಶಾ ಸುಲೈಮಾನ್ ಹಾಲ್‌ನ ವಿದ್ಯಾರ್ಥಿಗಳು ಈ ನೋಟಿಸ್ ನ್ನು ಕಂಡುಕೊಂಡ ನಂತರ ವಿವಾದ ಭುಗಿಲೆದ್ದಿತು, ಈ ನೊಟೀಸ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಆರಂಭದಲ್ಲಿ, AMU ಆಡಳಿತ ಹೇಳಿಕೆ ನೀಡುವುದರಿಂದ ತಪ್ಪಿಸಿಕೊಂಡಿತ್ತು. ಆದಾಗ್ಯೂ, ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ, ಪ್ರತಿಕ್ರಿಯೆ ನೀಡಿದ್ದು, "ಉದ್ದೇಶಪೂರ್ವಕವಲ್ಲದ ತಪ್ಪು" ಎಂದು ಕರೆದಿದೆ.

"ಈ ವಿಷಯವನ್ನು ನಮ್ಮ ಗಮನಕ್ಕೆ ತರಲಾಯಿತು. ನೋಟಿಸ್ ಆಹಾರ ಮೆನುಗೆ ಸಂಬಂಧಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದಾಗ್ಯೂ, ಅದರಲ್ಲಿ ಸ್ಪಷ್ಟವಾದ ಟೈಪಿಂಗ್ ದೋಷವಿದೆ. ನೋಟಿಸ್‌ನಲ್ಲಿ ಯಾವುದೇ ಅಧಿಕೃತ ಸಹಿಗಳಿಲ್ಲದ ಕಾರಣ ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಲಾಯಿತು, ಇದು ಅದರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ."

"ನಮ್ಮ ಪ್ರಾಧ್ಯಾಪಕರು (ನೋಟಿಸ್ ನೀಡಿದ್ದಕ್ಕಾಗಿ) ಜವಾಬ್ದಾರರಾಗಿರುವ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಶೋ-ಕಾಸ್ ನೋಟಿಸ್ ನೀಡಿದ್ದಾರೆ. ವಿಶ್ವವಿದ್ಯಾಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ" ಎಂದು ಅವರು ಹೇಳಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕಿ ಮತ್ತು AMU ಹಳೆಯ ವಿದ್ಯಾರ್ಥಿ ನಿಶಿತ್ ಶರ್ಮಾ ವಿಶ್ವವಿದ್ಯಾಲಯವು ಈ ವಿಷಯವನ್ನು ನಿರ್ವಹಿಸಿದ ರೀತಿಯನ್ನು ಟೀಕಿಸಿದರು.

"ಇದರಲ್ಲಿ ಆಡಳಿತದ ಪಾತ್ರ ನಾಚಿಕೆಗೇಡಿನದು. ಸರ್ ಶಾ ಸುಲೈಮಾನ್ ಹಾಲ್‌ನಲ್ಲಿ ಚಿಕನ್ ಬಿರಿಯಾನಿಯ ಬದಲಿಗೆ ಗೋಮಾಂಸ ಬಿರಿಯಾನಿ ನೀಡಲಾಗುವುದು ಎಂದು ತಿಳಿಸುವ ಸೂಚನೆಯನ್ನು ಪ್ರಸಾರ ಮಾಡಲಾಯಿತು. ಈ ಸೂಚನೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ ಮತ್ತು ಅದು ಹಿರಿಯ ಆಹಾರ ಸಮಿತಿ ಸದಸ್ಯರ ಜವಾಬ್ದಾರಿಯಾಗಿದೆ. ಇಂತಹ ಕ್ರಮಗಳು ಆಡಳಿತವು ತೀವ್ರಗಾಮಿ ಅಂಶಗಳನ್ನು ಪ್ರೋತ್ಸಾಹಿಸುತ್ತಿದೆ ಮತ್ತು ವಿದ್ಯಾರ್ಥಿಗಳ ದುಷ್ಕೃತ್ಯವನ್ನು ಮುಚ್ಚಿಹಾಕುತ್ತಿದೆ ಎಂದು ಸೂಚಿಸುತ್ತದೆ" ಎಂದು ಶರ್ಮಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ