ರಾಹುಲ್ ಗಾಂಧಿ 
ದೇಶ

ಇದು ನಿಮ್ಮ ಸಂವಿಧಾನ ಆದರೆ, ನೀವೀಗ ಎಲ್ಲಿಗೆ ಹೋದರೂ ವ್ಯವಸ್ಥೆ ನಿಮ್ಮನ್ನು ತುಳಿಯುತ್ತದೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರ ಜೊತೆ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ ಮತ್ತು ಪಕ್ಷದ ಇತರ ಮುಖಂಡರು ಇದ್ದರು.

ರಾಯಬರೇಲಿ: ಸಂವಿಧಾನ ರಚನೆಗೆ ದಲಿತರು ನೀಡಿದ ಕೊಡುಗೆಯನ್ನು ಶ್ಲಾಘಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಇದು ನಿಮ್ಮ ಸಿದ್ಧಾಂತ, ಆದರೆ ನೀವು ಈಗ ಎಲ್ಲಿಗೆ ಹೋದರೂ ನೀವು ವ್ಯವಸ್ಥೆಯಿಂದ ತುಳಿತಕ್ಕೊಳಗಾಗಿದ್ದೀರಿ' ಎಂದು ಹೇಳಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ರಾಯಬರೇಲಿ ಸಂಸದ ಇಲ್ಲಿನ ಬರ್ಗಡ್ ಚೌರಾಹಾ ಬಳಿಯ 'ಮೂಲ ಭಾರತಿ' ಹಾಸ್ಟೆಲ್‌ನ ದಲಿತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ರಾಹುಲ್ ಗಾಂಧಿ ಅವರ ಜೊತೆ ಕಾಂಗ್ರೆಸ್ ಅಮೇಥಿ ಸಂಸದ ಕಿಶೋರಿ ಲಾಲ್ ಶರ್ಮಾ ಮತ್ತು ಪಕ್ಷದ ಇತರ ಮುಖಂಡರು ಇದ್ದರು.

'ದೊಡ್ಡ 500' ಸಂಸ್ಥೆಗಳ ಭಾಗವಾಗಿರುವ ಕೆಲವು ಉನ್ನತ ಖಾಸಗಿ ಕಂಪನಿಗಳನ್ನು ಹೆಸರಿಸಿದ ರಾಹುಲ್, ಅದರಲ್ಲಿ ಎಷ್ಟು ದಲಿತರು ಆ ಕಂಪನಿಗಳ ಚುಕ್ಕಾಣಿ ಹಿಡಿದಿದ್ದಾರೆ ಎಂದು ಯುವಕರನ್ನು ಪ್ರಶ್ನಿಸಿದರು. ಆಗ ಓರ್ವ ವಿದ್ಯಾರ್ಥಿ 'ಯಾರೂ ಇಲ್ಲ' ಎಂದು ಪ್ರತಿಕ್ರಿಯಿಸಿದಾಗ, 'ಏಕೆ' ಎಂದು ರಾಹುಲ್ ಗಾಂಧಿ ಅತನನ್ನು ಪ್ರಶ್ನಿಸಿದರು. ಆಗ ಮತ್ತೊಬ್ಬ ವಿದ್ಯಾರ್ಥಿ, ‘ನಮಗೆ ಸೂಕ್ತ ಸೌಲಭ್ಯಗಳಿಲ್ಲದ ಕಾರಣ’ ಎಂದು ಉತ್ತರಿಸಿದರು.

ಅದನ್ನು ಒಪ್ಪಿಕೊಳ್ಳದ ರಾಹುಲ್ ಗಾಂಧಿ, ಡಾ. ಬಿಆರ್ ಅಂಬೇಡ್ಕರ್ ಜಿ ಕೂಡ ಯಾವುದೇ ಸೌಲಭ್ಯವನ್ನು ಹೊಂದಿರಲಿಲ್ಲ. ಅವರು ತಮ್ಮ ಪ್ರಯತ್ನದಲ್ಲಿ ಏಕಾಂಗಿಯಾಗಿದ್ದರೂ ಕೂಡ ಅವರು ದೇಶದ ರಾಜಕೀಯವನ್ನು ಅಲ್ಲಾಡಿಸಿದರು' ಎಂದರು.

'ಇಡೀ ವ್ಯವಸ್ಥೆಯು ನಿಮ್ಮ ವಿರುದ್ಧವಾಗಿದೆ ಮತ್ತು ನೀವು ಏಳಿಗೆ ಕಾಣುವುದನ್ನು ಅದು ಬಯಸುವುದಿಲ್ಲ. ಈ ವ್ಯವಸ್ಥೆಯು ಪ್ರತಿದಿನ ನಿಮ್ಮ ಮೇಲೆ ದಾಳಿ ಮಾಡುತ್ತದೆ ಮತ್ತು ಅರ್ಧದಷ್ಟು ಸಮಯ ಅದು ನಿಮ್ಮ ಮೇಲೆ ಹೇಗೆ ದಾಳಿ ಮಾಡಿತು ಎಂಬುದು ಕೂಡ ನಿಮಗೆ ತಿಳಿದಿರುವುದಿಲ್ಲ' ಎಂದು ಹೇಳಿದರು.

'ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರು ಇಲ್ಲದಿದ್ದರೆ, ಸಂವಿಧಾನ ಬರುತ್ತಿರಲಿಲ್ಲ ಎಂದು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಇದು ನಿಮ್ಮ ಸಿದ್ಧಾಂತ, ಇದು ನಿಮ್ಮ ಸಂವಿಧಾನ ಆದರೆ ನೀವು ಈಗ ಎಲ್ಲಿಗೆ ಹೋದರೂ ವ್ಯವಸ್ಥೆಯಿಂದ ತುಳಿತಕ್ಕೊಳಗಾಗಿದ್ದೀರಿ' ಎಂದು ರಾಹುಲ್ ತಿಳಿಸಿದರು.

ರಾಹುಲ್ ಗಾಂಧಿಯವರು ಇಂದಿನಿಂದ ತಮ್ಮ ಸಂಸದೀಯ ಕ್ಷೇತ್ರಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT