ಏನೂ ಮಾಡದೇ ಕೋಳಿ ಕಾಳಗ ಗೆದ್ದ ಹುಂಜ 
ದೇಶ

Video: 'ನಾಲ್ವರ ಜಗಳ, 5ನೇಯವನಿಗೆ ಲಾಭ'; ಏನೂ ಮಾಡದೆ 25 ಲಕ್ಷ ರೂ 'ಕೋಳಿ ಕಾಳಗ' ಗೆದ್ದ 'ಹುಂಜ'!

ಕೋಳಿ ಕಾಳಗದಲ್ಲಿ ಕೋಳಿಯೊಂದು ಯಾವುದೇ ಕೋಳಿಗಳೊಂದಿಗೆ ಸೆಣಸದೇ ಇದ್ದರೂ ಜಯಶಾಲಿಯಾಗಿದೆ.

ಭೀಮವರಂ: ಸಂಕ್ರಾಂತಿ ಹಬ್ಬದ ನಿಮಿತ್ತ ಆಂಧ್ರ ಪ್ರದೇಶದ ಭೀಮವರಂ ಜಿಲ್ಲೆಯಲ್ಲಿ ನಡೆದ ಕೋಳಿ ಕಾಳಗದಲ್ಲಿ ಹುಂಜವೊಂದು ಅಚ್ಚರಿ ರೀತಿಯಲ್ಲಿ ಏನೂ ಮಾಡದೇ ಪಂದ್ಯ ಗೆದ್ದಿದೆ.

ಹೌದು.. ಸಾಮಾನ್ಯವಾಗಿ ಸ್ಪರ್ಧೆ ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರ ಸೆಣಸಬೇಕು... ಅದು ಮನುಷ್ಯರ ನಡುವೆ ಇರಲಿ.. ಪ್ರಾಣಿಗಳ ನಡುವೆ ಇರಲಿ.. ಅಥವಾ ಅಂತಿಮವಾಗಿ ಪಕ್ಷಿಗಳ ನಡುವೆಯೇ ಇರಲಿ. ಇಲ್ಲೊಂದು ವಿಚಿತ್ರ ಕೋಳಿ ಕಾಳಗದಲ್ಲಿ ಕೋಳಿಯೊಂದು ಯಾವುದೇ ಕೋಳಿಗಳೊಂದಿಗೆ ಸೆಣಸದೇ ಇದ್ದರೂ ಜಯಶಾಲಿಯಾಗಿದೆ.

ಅಚ್ಚರಿಯಾದರೂ ಇದು ಸತ್ಯ.. ಆಂಧ್ರ ಪ್ರದೇಶದ ಭೀಮವರಂ ಜಿಲ್ಲೆಯಲ್ಲಿ ನಡೆದ ಕೋಳಿ ಸ್ಪರ್ಧೆಯಲ್ಲಿ ಅದೃಷ್ಟಶಾಲಿ ಕೋಳಿಯೊಂದು ಯಾವುದೇ ಸ್ಪರ್ಧೆ ಇಲ್ಲದೇ ಪಂದ್ಯ ಜಯಿಸಿದೆ.

ಈ ವಿಶೇಷ ಪಂದ್ಯದಲ್ಲಿ ಒಟ್ಟು ಐದು ಕೋಳಿಗಳು ಏಕಕಾಲಕ್ಕೆ ಕಾಳಗಕ್ಕೆ ಇಳಿದಿದ್ದವು. ಒಂದು ದೊಡ್ಡ ವೃತ್ತ ಬರೆದು ಅದರೊಳಗೆ ಐದು ಕೋಳಿಗಳನ್ನು ಏಕಕಾಲದಲ್ಲಿ ಕಾಳಗಕ್ಕೆ ಬಿಡಲಾಗಿತ್ತು. ಈ ಪೈಕಿ 4 ಕೋಳಿಗಳು ಪರಸ್ಪರ ಕಾದಾಡಿವೆ. ಒಂದಾದ ಬಳಿಕ ಒಂದು ಪ್ರಾಣ ಬಿಟ್ಟಿದ್ದು, ಮತ್ತೊಂದು ಬದಿಯಲ್ಲಿ ಏನೂ ಮಾಡದೇ ನಿಂತಿದ್ದ ಕೋಳಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ಮೊದಲಿಗೆ ಎರಡು ಕೋಳಿಗಳು ಜಗಳವಾಡಿದವು, ಆದರೆ ಒಂದು ಗೆದ್ದಿತು. ನಂತರ, ಇನ್ನೂ ಎರಡು ಕೋಳಿಗಳು ಸ್ಪರ್ಧಿಸಿದವು, ಆದರೆ ಒಂದು ಓಡಿಹೋಯಿತು. ಇನ್ನು ಮೂರು ಕೋಳಿಗಳು ಮಾತ್ರ ಉಳಿದವು. ಉಳಿದ ಮೂರು ಕೋಳಿಗಳೂ ಕೂಡ ಪರಸ್ಪರ ಕಾದಾಡಿಕೊಂಡು ಪರಸ್ಪರ ಕತ್ತಿಗೆ ಬಲಿಯಾಗಿವೆ. ಆ ಮೂಲಕ ಅಂತಿಮವಾಗಿ ಏನೂ ಮಾಡದೇ ಮೌನವಾಗಿ ನಿಂತಿದ್ದ ಕೋಳಿ ಈ ಪಂದ್ಯ ಗೆದ್ದಿದೆ.

ಬರೊಬ್ಬರಿ 25 ಲಕ್ಷ ರೂ ಬಹುಮಾನ

ಇನ್ನು ಈ ಪಂದ್ಯದಲ್ಲಿ ಗೆದ್ದ ಕೋಳಿಗೆ ಬರೊಬ್ಬರಿ 25ಲಕ್ಷರೂ ಬಹುಮಾನ ನೀಡಲಾಯಿತು ಎಂದು ಹೇಳಲಾಗಿದೆ. ಇದಲ್ಲದೇ ಈ ಪಂದ್ಯ ನೋಡಲು ಬಂದ ಪ್ರೇಕ್ಷಕರೂ ಕೂಡ ಪರಸ್ಪರ ಬೆಟ್ಟಿಂಗ್ ನಡೆಸಿದ್ದು, ಇದೊಂದು ಪಂದ್ಯವೇ ಸುಮಾರು 3 ಕೋಟಿ ರೂಗಳ ಬೆಟ್ಟಿಂಗ್ ಗೆ ವೇದಿಕೆಯಾಗಿತ್ತು ಎನ್ನಲಾಗಿದೆ.

1.25 ಕೋಟಿ ರೂ ಗೆದ್ದ ಕೋಳಿ

ಮತ್ತೊಂದು ಪಂದ್ಯದಲ್ಲಿ ಇದೇ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೇಪಲ್ಲಿ ಗೂಡಂನಲ್ಲಿ ಮತ್ತೊಂದು ವಿಶೇಷ ಕೋಳಿ ಕಾಳಗ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯದಲ್ಲಿ ಗುಡಿವಾಡ ಪ್ರಭಾಕರ್ ಅವರ ಕೋಳಿ ರಸಂಗಿ ರತ್ತಯ್ಯ ಅವರ ಕೋಳಿಯನ್ನು ಸೋಲಿಸಿ ಬರೊಬ್ಬರಿ 1.25 ಕೋಟಿ ರೂ ಬಹುಮಾನ ಗೆದ್ದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT