ಆರ್ ಜಿ ಕರ್ ಪ್ರಕರಣದ ಅಪರಾಧಿ online desk
ದೇಶ

RG Kar rape-murder case: ಶಿಕ್ಷೆ ಪ್ರಮಾಣ ಪ್ರಕಟ; ಪ್ರಶ್ನೆಗಳಿಗೆ ಉತ್ತರಿಸಲಾಗದೇ ಮನೆಯೊಳಗೇ ಉಳಿದ ಅಪರಾಧಿಯ ತಾಯಿ!

ಶಿಕ್ಷೆಯ ಪ್ರಮಾಣದ ಬಗ್ಗೆ ವರದಿಗಾರರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮನೆಯ ಬಾಗಿಲನ್ನು ಒಳಗಡೆಯಿಂದ ಬಂದ್ ಮಾಡಿಕೊಂಡಿದ್ದಾರೆ.

ನವದೆಹಲಿ: ಆರ್ ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸುತ್ತಿದ್ದಂತೆಯೇ ಅಪರಾಧಿಯ ತಾಯಿ ಮನೆಯ ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಿಕ್ಷೆಯ ಪ್ರಮಾಣದ ಬಗ್ಗೆ ವರದಿಗಾರರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮನೆಯ ಬಾಗಿಲನ್ನು ಒಳಗಡೆಯಿಂದ ಬಂದ್ ಮಾಡಿಕೊಂಡಿದ್ದಾರೆ.

ಇದಕ್ಕೂ ಮುನ್ನ, ಕೋಲ್ಕತ್ತಾದಲ್ಲಿರುವ ತಮ್ಮ ಸಾಧಾರಣ ನಿವಾಸದ ಮುಂದೆ ಮಾಧ್ಯಮದ ಸದಸ್ಯರು ಜಮಾಯಿಸಲು ಪ್ರಾರಂಭಿಸಿದಾಗ, 75 ವರ್ಷದ ಮಹಿಳೆ ಎಲ್ಲದರ ಬಗ್ಗೆಯೂ ನಾಚಿಕೆಪಡುತ್ತಾಳೆ ಮತ್ತು ತಮ್ಮನ್ನು ಒಂಟಿಯಾಗಿ ಬಿಡುವಂತೆ ಹೇಳಿದರು.

ಇದಕ್ಕೂ ಮುನ್ನ, ಕೋಲ್ಕತ್ತಾದಲ್ಲಿರುವ ತಮ್ಮ ನಿವಾಸದ ಮುಂದೆ ಮಾಧ್ಯಮದ ಸದಸ್ಯರು ಜಮಾಯಿಸಲು ಪ್ರಾರಂಭಿಸಿದಾಗ, 75 ವರ್ಷದ ಮಹಿಳೆ ತಮ್ಮನ್ನು ಒಂಟಿಯಾಗಿ ಬಿಡುವಂತೆ ಹೇಳಿದರು.

ರಾಯ್ ಅವರ ತಾಯಿ ಮಾಲತಿ ಭಾನುವಾರ, ಮೂವರು ಹೆಣ್ಣುಮಕ್ಕಳ ತಾಯಿಯಾಗಿ, ಮೃತ ವೈದ್ಯರ ಪೋಷಕರ ನೋವನ್ನು ಅನುಭವಿಸಬಲ್ಲೆ ಮತ್ತು ಮಗನಿಗೆ ಯಾವುದೇ ಶಿಕ್ಷೆ ವಿಧಿಸಿದರೂ ಅದನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

"ನ್ಯಾಯಾಲಯ ಆತನನ್ನು ಗಲ್ಲಿಗೇರಿಸಲು ನಿರ್ಧರಿಸಿದರೆ, ಆತನ ಅಪರಾಧ ಕಾನೂನಿನ ದೃಷ್ಟಿಯಲ್ಲಿ ಸಾಬೀತಾಗಿರುವುದರಿಂದ ನನ್ನ ಯಾವುದೇ ಆಕ್ಷೇಪಣೆ ಇಲ್ಲ. ನಾನು ಒಬ್ಬಂಟಿಯಾಗಿ ಅಳುತ್ತೇನೆ ಆದರೆ ಅದನ್ನು ವಿಧಿಯ ವಿಪರ್ಯಾಸವೆಂದು, ವಿಧಿಯ ಇಚ್ಛಾನುಸಾರವಾಗಿ ಸ್ವೀಕರಿಸುತ್ತೇನೆ" ಎಂದು ಅಪರಾಧಿಯ ತಾಯಿ ಹೇಳಿದ್ದರು.

ಸೋಮವಾರ, ನ್ಯಾಯಾಧೀಶರು ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ನಿಮಿಷಗಳ ನಂತರ, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಅಪರಾಧಿಯ ತಾಯಿ, "ನಾನು ಏನನ್ನೂ ಹೇಳಲು ಬಯಸುವುದಿಲ್ಲ. ನನಗೆ ಎಲ್ಲದಕ್ಕೂ ನಾಚಿಕೆಯಾಗುತ್ತಿದೆ. ನೀವು ದಯವಿಟ್ಟು ಹೊರಟು ಹೋಗಿ." ಎಂದಷ್ಟೇ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT