ಲಖನೌ ಮಾವು ಮೇಳ 
ದೇಶ

Lucknow Mango Festival: ಪ್ರದರ್ಶನಕ್ಕೆ ಇರಿಸಿದ್ದ ಮಾವುಗಳನ್ನೇ ಹೊತ್ತೊಯ್ದ ಜನ, ಆಯೋಜಕರೇ ಬೇಸ್ತು! Video

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ, ಮಾವು ಮೇಳ ಆಯೋಜಿಸಲಾಗಿತ್ತು. ಮೂರು ದಿನಗಳಿಂದೆ ಆರಂಭವಾಗಿದ್ದ ಮೇಳಕ್ಕೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಚಾಲನೆ ನೀಡಿದ್ದರು.

ಲಖನೌ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಉದ್ಘಾಟಿಸಿದ್ದ ಮಾವುಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನೇ ಜನ ಹೊತ್ತೊಯ್ದಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಅವಧ್ ಶಿಲ್ಪಗ್ರಾಮದಲ್ಲಿ, ಮಾವು ಮೇಳ ಆಯೋಜಿಸಲಾಗಿತ್ತು. ಮೂರು ದಿನಗಳಿಂದೆ ಆರಂಭವಾಗಿದ್ದ ಮೇಳಕ್ಕೆ ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಚಾಲನೆ ನೀಡಿದ್ದರು.

ಈ ವಿಶೇಷ ಮಾವುಮೇಳಕ್ಕೆ ಉತ್ತರ ಪ್ರದೇಶ ಮಾತ್ರವಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ಮಾವು ಬೆಳೆಗಾರರು ತಮ್ಮ ಮಾವುಗಳನ್ನು ತಂದಿದ್ದರು.

ಈ ಪೈಕಿ ಪ್ರದರ್ಶನ ಕೇಂದ್ರದಲ್ಲಿ ಸುಮಾರು 80ಕ್ಕೂ ವಿವಿಧ ತಳಿಯ ಮಾವುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪ್ರದರ್ಶನದಲ್ಲಿ ನೂರಾರು ಟನ್ ಮಾವು ಮಾರಾಟ ಕೂಡ ಮಾಡಲಾಗಿತ್ತು.

ಆದರೆ ಮಾವು ಮೇಳದ ಅಂತಿಮ ದಿನದಂದು ಯಾರೂ ಊಹಿಸಲಾಗದ ಘಟನೆ ನಡೆದಿದ್ದು ಮೇಳದ ಅಂತಿಮ ದಿನ ಯಥೇಚ್ಛ ಜನ ಮೇಳಕ್ಕೆ ಆಗಮಿಸಿದ್ದಾರೆ.

ಈ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಅವರನ್ನು ನಿರ್ವಹಿಸುವಾಗಲೇ ಪ್ರದರ್ಶನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದ್ದ ಮಾವಿನ ಹಣ್ಣುಗಳನ್ನು ಜನ ಹೊತ್ತೊಯ್ದಿದ್ದಾರೆ.

ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಕೈ ಸಿಕ್ಕ ಕವರ್, ಚೀಲಗಳನ್ನುಉಪಯೋಗಿಸಿಕೊಂಡು ಕೈಗೆ ಸಿಕ್ಕಷ್ಟು ಹಣ್ಣುಗಳನ್ನು ಚೀಲದೊಳಗೆ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಲಾತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಕಳೆದ 3 ದಿನಗಳಿಂದ ಯಾವುದೇ ತಡೆ ಇಲ್ಲದೇ ನಡೆದಿದ್ದ ಮಾವು ಮೇಳ ಅಂತಿಮ ದಿನದಂದು ವ್ಯಾಪಕ ಅಸ್ತವ್ಯಸ್ಥಕ್ಕೆ ಕಾರಣವಾಗಿತ್ತು. ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಕೆಲವರು ಮಾವಿನ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಆರಂಭಿಸಿದರು. ಬಳಿಕ ಇಲ್ಲಿದ್ದ ಇತರರೂ ಕೂಡ ಅದೇ ಮಾರ್ಗವನ್ನು ಹಿಡಿದರು. ಜನರ ಈ ನಡೆ ಮಾವುಮೇಳದ ಆಯೋಜಕರನ್ನೇ ಬೆಚ್ಚಿ ಬೀಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಜವಹರಲಾಲ್ ನೆಹರೂ ಅವರ ಏಕಪಕ್ಷೀಯ ಕದನ ವಿರಾಮ PoK ಸೃಷ್ಟಿಗೆ ಕಾರಣವಾಯಿತು': ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಅನ್ನಭಾಗ್ಯ ಯೋಜನೆ; ಹೆಚ್ಚುವರಿ 5 ಕೆ.ಜಿ ಅಕ್ಕಿ ಬದಲು ಇಂದಿರಾ ಕಿಟ್ ನೀಡಲು ಸರ್ಕಾರ ಮುಂದು..!

'ಶ್ರೀಮಂತಿಕೆ- ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣ ನೀಡಿ ಸಮೀಕ್ಷೆಯಿಂದ ಹೊರಗುಳಿಯುವುದು ಉದ್ದಟತನದ ಪರಮಾವಧಿ'

Shakthi Scheme Record-'ಶಕ್ತಿ ಯೋಜನೆ'ಗೆ ಸಿಕ್ಕಿತು ವಿಶ್ವ ಮನ್ನಣೆ: ಲಂಡನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ

ಬೆಂಗಳೂರು: ಪ್ರೀತಿಸಲು ನಿರಾಕರಣೆ; ಪರೀಕ್ಷೆ ಬರೆದು ಮನೆಗೆ ವಾಪಾಸಾಗುತ್ತಿದ್ದ ವಿದ್ಯಾರ್ಥಿನಿ ಕತ್ತು ಕೊಯ್ದು ಕೊಲೆ

SCROLL FOR NEXT