ದೆಹಲಿ ಸಿಎಂ ರೇಖಾ ಗುಪ್ತಾ 
ದೇಶ

ಮುಖ್ಯಮಂತ್ರಿ ನಿವಾಸ ನವೀಕರಣ ಟೆಂಡರ್ ರದ್ದುಗೊಳಿಸಿದ ದೆಹಲಿ ಸರ್ಕಾರ

ಸಿಎಂ ರೇಖಾ ಗುಪ್ತಾ ಅವರಿಗೆ ಲೋಕೋಪಯೋಗಿ ಇಲಾಖೆಯಿಂದ ರಾಜ್ ನಿವಾಸ್ ಮಾರ್ಗದಲ್ಲಿ ಎರಡು ಬಂಗಲೆಗಳನ್ನು ಮಂಜೂರು ಮಾಡಲಾಗಿತ್ತು.

ನವದೆಹಲಿ: ಆಡಳಿತಾತ್ಮಕ ಕಾರಣಗಳಿಂದಾಗಿ ದೆಹಲಿ ಸರ್ಕಾರ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದ ನವೀಕರಣಕ್ಕಾಗಿ ಕರೆಯಲಾಗಿದ್ದ ಟೆಂಡರ್ ಅನ್ನು ರದ್ದುಗೊಳಿಸಿದೆ ಎಂದು ಬುಧವಾರ ಮೂಲಗಳು ತಿಳಿಸಿವೆ.

ಸಿಎಂ ರೇಖಾ ಗುಪ್ತಾ ಅವರಿಗೆ ಲೋಕೋಪಯೋಗಿ ಇಲಾಖೆಯಿಂದ ರಾಜ್ ನಿವಾಸ್ ಮಾರ್ಗದಲ್ಲಿ ಎರಡು ಬಂಗಲೆಗಳನ್ನು ಮಂಜೂರು ಮಾಡಲಾಗಿತ್ತು. ಒಂದು ಅವರ ವಾಸಕ್ಕೆ ಮತ್ತು ಇನ್ನೊಂದು ಗೃಹ ಕಚೇರಿಗಾಗಿ ನೀಡಲಾಗಿತ್ತು.

ರೇಖಾ ಗುಪ್ತಾ ಅವರು ಕಳೆದ ವಾರ ತಮ್ಮ ಗೃಹ ಕಚೇರಿಯನ್ನು ಉದ್ಘಾಟಿಸಿದ್ದರು ಮತ್ತು ಇದರ ನವೀಕರಣಕ್ಕಾಗಿ 60 ಲಕ್ಷ ರೂ. ಮೌಲ್ಯದ ಟೆಂಡರ್ ಕರೆಯಲಾಗಿತ್ತು. ಈ ನವೀಕರಣದಲ್ಲಿ 14 ಎಸಿಗಳು, ವಿದ್ಯುತ್ ಉಪಕರಣಗಳ ಬದಲಾವಣೆ, ಟಿವಿ ಮತ್ತು ಸಿಸಿಟಿವಿಗಳು ಸೇರಿದಂತೆ ಹಲವು ಸೌಕರ್ಯಗಳನ್ನು ಪ್ರಸ್ತಾಪಿಸಲಾಗಿತ್ತು.

ಇದಲ್ಲದೆ ಮನೆಯಲ್ಲಿ 2 ಲಕ್ಷ ರೂ.ಗಳ ನಿರಂತರ ವಿದ್ಯುತ್ ಸರಬರಾಜು(ಯುಪಿಎಸ್) ವ್ಯವಸ್ಥೆಯೂ ಇರುತ್ತದೆ. ಹೆಚ್ಚುವರಿಯಾಗಿ, 1.8 ಲಕ್ಷ ರೂ.ಗೆ ರಿಮೋಟ್ ಕಂಟ್ರೋಲ್ ಹೊಂದಿರುವ 23 ಸೀಲಿಂಗ್ ಫ್ಯಾನ್‌ಗಳು, 85,000 ರೂ.ಗೆ ಒಂದು ಒಟಿಜಿ (ಓವನ್ ಟೋಸ್ಟ್ ಗ್ರಿಲ್), 77,000 ರೂ.ಗೆ ಹಾಗೂ 60,000 ರೂ.ಗೆ ಒಂದು ಸ್ವಯಂಚಾಲಿತ ವಾಷಿಂಗ್ ಮೆಷಿನ್ ಮತ್ತು ಒಂದು ಡಿಶ್‌ವಾಶರ್, 63,000 ರೂ. ಗ್ಯಾಸ್ ಸ್ಟೌವ್, 32,000 ರೂ. ಮೌಲ್ಯದ ಮೈಕ್ರೋವೇವ್‌ಗಳು ಮತ್ತು 91,000 ರೂ.ಗೆ ಆರು ಗೀಸರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿದು ಬಂದಿತ್ತು. ಆದರೆ ಇದೀಗ ಈ ಟೆಂಡರ್ ರದ್ದು ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT