ಛಂಗೂರ್ ಬಾಬಾ ಮತಾಂತರ ಪ್ರಕರಣ 
ದೇಶ

"Mitti, Kajal, Darshan": ಬೃಹತ್ ಧಾರ್ಮಿಕ ಮತಾಂತರ ಜಾಲ ಬಹಿರಂಗ; ಏನಿದು Chhangur Baba ಕೋಡ್ ವರ್ಡ್ ಪ್ರಾಜೆಕ್ಟ್?

ಆರೋಪಿ ಛಂಗೂರ್ ಬಾಬಾ ಒಮ್ಮೆ ತಮ್ಮ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಲಕ್ನೋ: ಉತ್ತರ ಪ್ರದೇಶದಲ್ಲಿ ಬೃಹತ್ ಮತಾಂತರ ಜಾಲ ಬಹಿರಂಗವಾಗಿದ್ದು, Mitti, Kajal, Darshan ಎಂಬ ಕೋಡ್ ವರ್ಡ್ ಗಳ ಮೂಲಕ ಮತಾಂತರ ಮಾಡುತ್ತಿದ್ದ (ಚಂಗೂರ್ ಬಾಬಾ) Chhangur Baba ನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಉತ್ತರಪ್ರದೇಶದ ಬಲರಾಂಪುರದಲ್ಲಿ ಬೃಹತ್ ಧಾರ್ಮಿಕ ಮತಾಂತರ ಜಾಲ ಬಯಲಾಗಿದ್ದು, ಜಮಾಲುದ್ದೀನ್ (ಚಂಗುರ್ ಬಾಬಾ) ಎಂಬಾತನನ್ನು ಆ್ಯಂಟಿ-ಟೆರರಿಸಂ ಸ್ಕ್ವಾಡ್ (ATS) ಮತ್ತು ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಅಧಿಕಾರಿಗಳು ಬಂಧಿಸಿದ್ದಾರೆ.

ಬಡವರು ಮತ್ತು ದುರ್ಬಲರಾದವರನ್ನು, ವಿಶೇಷವಾಗಿ ಯುವತಿಯರನ್ನು, ಬೆದರಿಕೆ, ಒತ್ತಡ ಮತ್ತು ಮಾನಸಿಕ ಕಿರುಕುಳದ ಮೂಲಕ ಧಾರ್ಮಿಕ ಮತಾಂತರಕ್ಕೆ ಒಳಪಡಿಸುತ್ತಿದ್ದ ಆರೋಪ ಆತನ ಮೇಲಿದೆ.

ಮಿಟ್ಟಿ, ಕಾಜಲ್, ದರ್ಶನ್

‘ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಮತ್ತು ದರ್ಶನ’ ಇವು ಜಮಾಲುದ್ದೀನ್‌ ಅಲಿಯಾಸ್‌ ಛಂಗೂರ್‌ ಬಾಬಾ ಬಳಸುತ್ತಿದ್ದ ಕೋಡ್‌ ವರ್ಡ್‌ಗಳಾಗಿವೆ. ಹೆಚ್ಚಾಗಿ ಮಹಿಳೆಯರನ್ನು, ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆಯ ಭರವಸೆ, ಬೆದರಿಕೆ ಮೂಲಕ ಮತಾಂತರಕ್ಕೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಛಂಗೂರ್ ಬಾಬಾನ ಈ ದುಕೃತ್ಯಗಳಿಗೆ ವಿದೇಶಿ ಮೂಲಗಳಿಂದ ಹಣಕಾಸು ಒದಗುತ್ತಿತ್ತು ಎಂದು ಶಂಕಿಸಲಾಗಿದ್ದು, ತನಿಖೆಯಿಂದ ಆಘಾತಕಾರಿ ಬೆಳವಣಿಗೆಗಳು ಬಯಲಾಗಿವೆ. ಚಂಗುರ್ ಬಾಬಾ ನೇತೃತ್ವದಲ್ಲಿ 50 ಯುವಕರ ತಂಡವು ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಲಾಗಿದೆ.

ಮಹಿಳೆಯರ ಮತಾಂತರಕ್ಕೆ ಪ್ರಾಜೆಕ್ಟ್‌, ಮಿಟ್ಟಿ ಪಲಟ್ನಾ ಎಂದರೆ ಧಾರ್ಮಿಕ ಮತಾಂತರ. ಕಾಜಲ್‌ ಲಗಾನಾ ಎಂದರೆ ಕುಶಲತೆ, ದರ್ಶನ ಎಂದರೆ ಸಂತ್ರಸ್ತೆ ಎಂದು ಸಂತ್ರಸ್ತರು ಎಂದು ಛಂಗೂರ್‌ ಬಾಬಾ ಉಲ್ಲೇಖಿಸುತ್ತಿದ್ದ.

ಮತಾಂತರಕ್ಕೆ 50 ಯುವಕರ ತಂಡ

ಉತ್ತರ ಪ್ರದೇಶ ATS ಎಫ್‌ಐಆರ್ ಪ್ರಕಾರ, ಈ ಯುವಕರು ಮತಾಂತರ ಚಟುವಟಿಕೆಗಳಲ್ಲಿ ತೊಡಗಿದ್ದರು ಮತ್ತು ಸ್ಥಳೀಯ ಮಟ್ಟದಲ್ಲಿ ಭಯ, ಒತ್ತಡ, ಮತ್ತು ಹಿಂಸಾಚಾರವನ್ನು ಉಂಟು ಮಾಡುತ್ತಿದ್ದರು. ಈ ಯುವಕರು ಚಂಗುರ್ ಬಾಬಾನ ಐಷಾರಾಮಿ ಭವನದಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದರು, ಅಲ್ಲಿ ಅವರಿಗೆ ಪ್ರತ್ಯೇಕ ಕೊಠಡಿಗಳು, ಆಹಾರ, ಬಟ್ಟೆ ಮತ್ತು ಇತರ ಅಗತ್ಯಗಳು ಒದಗಿಸಲಾಗುತ್ತಿತ್ತು. ಭವನದೊಳಗೆ ಅವರಿಗೆ ತರಬೇತಿ ನೀಡಲಾಗುತ್ತಿತ್ತು.

ಚಂಗುರ್ ಬಾಬಾ ತನ್ನನ್ನು ಧಾರ್ಮಿಕ ನಾಯಕನೆಂದು ಬಿಂಬಿಸಿಕೊಂಡು ಈ ಯುವಕರನ್ನು “ಆಧ್ಯಾತ್ಮಿಕ ಸೇವಕರು” ಎಂದು ಕರೆಯುತ್ತಿದ್ದ. ಆದರೆ, ಅವರಿಗೆ ರಚನಾತ್ಮಕ ತರಬೇತಿ ನೀಡಲಾಗಿತ್ತು. ಕಾನೂನುಬದ್ಧವಾಗಿದೆಯೋ ಇಲ್ಲವೋ ಎಂಬುದನ್ನು ಯೋಚಿಸದೆ ಆತನ ಆದೇಶಗಳನ್ನು ಯುವಕರು ಪಾಲಿಸುತ್ತಿದ್ದರು. ಕೆಲವು ದೂರುಗಳು ಪೊಲೀಸರಿಗೆ ತಲುಪಿದರೂ, ಬಾಬಾನ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ATS ಈಗ ಈ 50 ಯುವಕರ ಗುರುತು, ಹಿನ್ನೆಲೆ ಮತ್ತು ಚಟುವಟಿಕೆಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ. ಅವರ ಪಾತ್ರ, ಮತಾಂತರ ಪ್ರಕರಣಗಳು, ಮತ್ತು ಅಂತಾರಾಷ್ಟ್ರೀಯ ಸಂಬಂಧವಿದೆಯೇ ಎಂಬುದನ್ನು ಕಂಡುಹಿಡಿಯಲು ಗಮನಹರಿಸಲಾಗಿದೆ. ಕೆಲವು ಯುವಕರನ್ನು ಇತರ ರಾಜ್ಯಗಳಿಂದ ಕರೆತಂದು, ಮಾನಸಿಕ ಮತ್ತು ಸೈದ್ಧಾಂತಿಕವಾಗಿ ಸಿದ್ಧಗೊಳಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

18 ಬ್ಯಾಂಕ್ ಖಾತೆ, 68 ಕೋಟಿ ರೂ ಜಮೆ

ಈ ವಿವರಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಹಿರಂಗಪಡಿಸಿದ್ದು, ಛಂಗೂರ್ ಬಾಬಾಗೆ ಸಂಬಂಧಿಸಿದ 40 ಬ್ಯಾಂಕ್ ಖಾತೆಗಳಲ್ಲಿ 18 ಖಾತೆಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ಛಂಗೂರ್ ಬಾಬಾಗೆ ಸಂಬಂಧಿಸಿದ 18 ಬ್ಯಾಂಕ್ ಖಾತೆಗಳಿಂದ 68 ಕೋಟಿ ರೂ.ಗಳ ವಹಿವಾಟು ನಡೆದಿದೆ.

ಮೂರು ತಿಂಗಳ ಅವಧಿಯಲ್ಲಿ ಈ ಖಾತೆಗಳಲ್ಲಿ ಸುಮಾರು 7 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ. ಜು.5 ರಂದು, ಧಾರ್ಮಿಕ ಮತಾಂತರ ಮಾಸ್ಟರ್‌ಮೈಂಡ್ ಛಂಗೂರ್ ಬಾಬಾ ಮತ್ತು ಆತನ ಸಹಾಯಕಿ ನೀತು ಅಲಿಯಾಸ್ ನಸ್ರೀನ್ ಇಬ್ಬರನ್ನೂ ಬಂಧಿಸಲಾಯಿತು. ಈ ಇಬ್ಬರು ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಮಾಧಪುರ ನಿವಾಸಿಗಳು.

ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪೊಲೀಸರು ಆತನ ಬಂಧನಕ್ಕೆ 50,000 ರೂ. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸೈಕಲ್ ನಲ್ಲಿ ತಾಯತ ಮಾರುತ್ತಿದ್ದ ಛಂಗೂರ್ ಬಾಬಾ

ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಛಂಗೂರ್ ಬಾಬಾ ಒಮ್ಮೆ ತಮ್ಮ ಸೈಕಲ್‌ನಲ್ಲಿ ಉಂಗುರಗಳು ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಳಿಕ ಆತ ಗ್ರಾಮದ ಮುಖ್ಯಸ್ಥನಾದ. ಈತನಿಗೆ ವಿದೇಶಗಳಿಂದ ಹಣದ ನೆರವು ಬರುತ್ತಿತ್ತು. ತನಿಖೆಯ ಪ್ರಕಾರ, ಈ ಎಲ್ಲಾ ಹಣವು ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಿಂದ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

ಸರ್ಕಾರದ ವಿರುದ್ಧ ಹೋರಾಡಿ ಗೆದ್ದ ಅಲೋಕ್ ಕುಮಾರ್​​ಗೆ DGP ಆಗಿ ಮುಂಬಡ್ತಿ: ADGP ಬಿ.ದಯಾನಂದ್ ವರ್ಗಾವಣೆ

Protection of personality rights: ಹೈಕೋರ್ಟ್ ಗೆ ಸಲ್ಮಾನ್ ಖಾನ್; ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಟ್ರೆಂಡ್ ಆಗ್ತಿರೋದೇಕೆ?

ದ್ವೇಷ ಭಾಷಣ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್ ಗೆ ನಿರೀಕ್ಷಣಾ ಜಾಮೀನು!

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

SCROLL FOR NEXT