ಹಾವು ಸುತ್ತಿಕೊಂಡು ಬೈಕ್ ಚಾಲನೆ ಮಾಡಿದ ಭೂಪ 
ದೇಶ

ವಿಷಕಾರಿ ಸರ್ಪದೊಂದಿಗೆ ಹುಚ್ಟಾಟ: ಕುತ್ತಿಗೆಗೆ ಹಾವು ಸುತ್ತಿಕೊಂಡು ಬೈಕ್ ಚಾಲನೆ; ಉರಗ ಪ್ರೇಮಿ ಸಾವು!

ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವೇಳೆ ಅದೇ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ.

ಗುನಾ: ವಿಷ ಸರ್ಪದೊಂದಿಗೆ ಹುಚ್ಚಾಟ ಮೆರೆದ ವ್ಯಕ್ತಿಯೋರ್ವ ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿರುವ ಧಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ಹೌದು.. ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವೇಳೆ ಅದೇ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ದೀಪಕ್ ಮಹಾವರ್ ಎಂದು ಗುರುತಿಸಲಾಗಿದೆ.

ಘಟನೆ ನಡೆಯುವ ಮೊದಲು ದೀಪಕ್ ತನ್ನ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಚಲಾಯಿಸುತ್ತಿರುವ ವಿಡಿಯೋವನ್ನು ರೆಕಾರ್ಡ್​ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ಉರಗ ಸ್ನೇಹಿ ದೀಪಕ್ ಸಾವನ್ ಮಾಸದ ಮೆರವಣಿಗೆಯಲ್ಲಿ ಈ ಹಾವನ್ನು ಪ್ರದರ್ಶನಕ್ಕಾಗಿ ಇಡಲು ಬಯಸಿದ್ದರು. ನಿನ್ನೆ ಅವರು ತಮ್ಮ ಮಕ್ಕಳ ಶಾಲೆಗೆ ಹೋಗುತ್ತಿದ್ದಾಗ, ಅವರು ಹಾವನ್ನು ಕುತ್ತಿಗೆಗೆ ನೇತು ಹಾಕಿಕೊಂಡಿದ್ದರು. ಅವರು ಹಾವಿನೊಂದಿಗೆ ಬೈಕ್ ಸವಾರಿ ಮಾಡುವುದನ್ನು ನೋಡಿ, ಕೆಲವರು ದೀಪಕ್ ಅವರನ್ನು ದಾರಿಯಲ್ಲಿ ತಡೆದು ಅವರೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಮಾಡಿದರು.

ವೀಡಿಯೊವನ್ನು ತಯಾರಿಸುವಾಗ, ಅವರು ಹಾವಿನೊಂದಿಗೆ ಆಟವಾಡಲು ಪ್ರಾರಂಭಿಸಿದರು. ಇದು ಮಾತ್ರವಲ್ಲ, ಅವರು ಹಾವನ್ನು ಚುಂಬಿಸಲು ಪ್ರಯತ್ನಿಸಿದರು ಆದರೆ ನಂತರ ಹಾವು ಅವರನ್ನು ಕಚ್ಚಿತು. ಅದರ ವೀಡಿಯೊ ವೈರಲ್ ಆಗುತ್ತಿದೆ

ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ದೀಪಕ್

ಬಳಿಕ ಸ್ಥಳೀಯರು ದೀಪಕ್ ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ದೀಪಕ್ ಚಿಕಿತ್ಸೆ ಸಮಯದಲ್ಲಿ ಪ್ರಾಣ ಬಿಟ್ಟಿದ್ದಾರೆ. ದೀಪಕ್ ಅವರ ಇಬ್ಬರು ಪುತ್ರರಾದ ರೌನಕ್ (12) ಮತ್ತು ಚಿರಾಗ್ (14) ಅವರನ್ನು ಅಗಲಿದ್ದಾರೆ. ದೀಪಕ್ ಪತ್ನಿ ಈ ಹಿಂದೆಯೇ ನಿಧನರಾಗಿದ್ದರು. ದೀಪಕ್ ನಿಧನದೊಂದಿಗೆ ಅವರ ಮಕ್ಕಳು ಈಗ ಅನಾಥರಾಗಿದ್ದಾರೆ.

ಉರಗ ಪ್ರೇಮಿಯಾಗಿದ್ದ ದೀಪಕ್

ಮೂಲಗಳ ಪ್ರಕಾರ ಗುನಾ ಜಿಲ್ಲೆಯ ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದ ದೀಪಕ್, ಉರಗ ಪ್ರೇಮಿಯಾಗಿದ್ದ. ಹಾವುಗಳನ್ನು ರಕ್ಷಿಸುವಲ್ಲಿ ಹೆಸರುವಾಸಿಯಾಗಿದ್ದರು. ಇಲ್ಲಿಯವರೆಗೆ ಸಾವಿರಾರು ಹಾವುಗಳನ್ನು ರಕ್ಷಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT