ದೇಶ

ನಿರ್ಬಂಧಗಳ ಬೆದರಿಕೆ: ದ್ವಿಮುಖ ನೀತಿ ವಿರುದ್ಧ NATO ಗೆ ಭಾರತ ಎಚ್ಚರಿಕೆ!

ರಟ್ ನೇರವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ನ್ನು ಹೆಸರಿಸಿ, ರಷ್ಯಾ ಜೊತೆಗಿನ ವ್ಯವಹಾರವನ್ನು ಮುಂದುವರಿಸುವುದರಿಂದ "ಬೃಹತ್ ರೀತಿಯಲ್ಲಿ" ಅವುಗಳ ಮೇಲೆ "ಪ್ರತಿದಾಳಿ" ಮಾಡಬಹುದು ಎಂದು ಎಚ್ಚರಿಸಿದ್ದರು.

ನವದೆಹಲಿ: ಭಾರತ ಸೇರಿದಂತೆ ರಷ್ಯಾ ಜೊತೆ ವ್ಯಾಪಾರ ಮುಂದುವರಿಸುವ ದೇಶಗಳು "ತುಂಬಾ ಕಠಿಣ" ನಿರ್ಬಂಧಗಳನ್ನು ಎದುರಿಸಬಹುದು ಎಂಬ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರಟ್ (Mark Rutte) ಅವರ ಎಚ್ಚರಿಕೆಯನ್ನು ಭಾರತ ಗುರುವಾರ ದೃಢವಾಗಿ ತಳ್ಳಿಹಾಕಿದೆ. ಇದೇ ವೇಳೆ ಭಾರತ ತಿರುಗೇಟು ನೀಡಿದ್ದು ಜಾಗತಿಕ ಇಂಧನ ನೀತಿಗಳಲ್ಲಿ "ಡಬಲ್ ಸ್ಟ್ಯಾಂಡರ್ಡ್"ಗಳ ವಿರುದ್ಧ ಎಚ್ಚರಿಕೆ ನೀಡಿದೆ.

"ಈ ವಿಷಯದ ಬಗ್ಗೆ ವರದಿಗಳನ್ನು ನಾವು ನೋಡಿದ್ದೇವೆ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ Rutte ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಹೇಳಿದರು.

"ನಮ್ಮ ಜನರ ಇಂಧನ ಅಗತ್ಯಗಳನ್ನು ಭದ್ರಪಡಿಸಿಕೊಳ್ಳುವುದು ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದು ನಾನು ಪುನರುಚ್ಚರಿಸುತ್ತೇನೆ. ಈ ಪ್ರಯತ್ನದಲ್ಲಿ, ಮಾರುಕಟ್ಟೆಗಳಲ್ಲಿ ಏನು ನೀಡಲಾಗುತ್ತಿದೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಗಳಿಂದ ನಾವು ಮಾರ್ಗದರ್ಶನ ಪಡೆಯುತ್ತೇವೆ. ಈ ವಿಷಯದ ಬಗ್ಗೆ ಯಾವುದೇ ಡಬಲ್ ಸ್ಟ್ಯಾಂಡರ್ಡ್‌ಗಳ ವಿರುದ್ಧ ನಾವು ವಿಶೇಷವಾಗಿ ಎಚ್ಚರಿಕೆ ವಹಿಸುತ್ತೇವೆ" ಎಂದು ಜೈಸ್ವಾಲ್ ಹೇಳಿದ್ದಾರೆ.

ಇತ್ತೀಚೆಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಘೋಷಣೆಯನ್ನು ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಾರ್ಕ್ ರಟ್ ಪ್ರತಿಧ್ವನಿಸಿ, ಉಕ್ರೇನ್ ಮೇಲೆ ಶಾಂತಿ ಒಪ್ಪಂದಕ್ಕೆ ಮಾಸ್ಕೋ ಒಪ್ಪದ ಹೊರತು ತೈಲ ಸೇರಿದಂತೆ ರಷ್ಯಾದ ರಫ್ತಿನ ಮೇಲೆ 100% ಸುಂಕಗಳನ್ನು 50 ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು. ರಟ್ ನೇರವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ನ್ನು ಹೆಸರಿಸಿ, ರಷ್ಯಾ ಜೊತೆಗಿನ ವ್ಯವಹಾರವನ್ನು ಮುಂದುವರಿಸುವುದರಿಂದ "ಬೃಹತ್ ರೀತಿಯಲ್ಲಿ" ಅವುಗಳ ಮೇಲೆ "ಪ್ರತಿದಾಳಿ" ಮಾಡಬಹುದು ಎಂದು ಎಚ್ಚರಿಸಿದ್ದರು.

"ಈ ಮೂರು ದೇಶಗಳಿಗೆ ನನ್ನ ಪ್ರೋತ್ಸಾಹ, ವಿಶೇಷವಾಗಿ... ನೀವು ಈಗ ಬೀಜಿಂಗ್‌ನಲ್ಲಿ ಅಥವಾ ದೆಹಲಿಯಲ್ಲಿ ವಾಸಿಸುತ್ತಿದ್ದರೆ... ನೀವು ಇದನ್ನು ಪರಿಶೀಲಿಸಲು ಬಯಸಬಹುದು, ಏಕೆಂದರೆ ಇದು ನಿಮಗೆ ತುಂಬಾ ಪರಿಣಾಮ ಬೀರಬಹುದು" ಎಂದು ರುಟ್ಟೆ ಅಮೆರಿಕದ ಶಾಸಕರನ್ನು ಭೇಟಿಯಾದ ನಂತರ ವರದಿಗಾರರಿಗೆ ತಿಳಿಸಿದರು. "ಆದ್ದರಿಂದ ದಯವಿಟ್ಟು ವ್ಲಾಡಿಮಿರ್ ಪುಟಿನ್‌ಗೆ ಫೋನ್ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಅವರು ಗಂಭೀರವಾಗಿ ಯೋಚಿಸಬೇಕು ಎಂದು ಅವರಿಗೆ ತಿಳಿಸಿ." ಎಂದು ಹೇಳಿದ್ದರು. ಭಾರತ ಪ್ರಸ್ತುತ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ': ರಾಹುಲ್ ಗಾಂಧಿಯಿಂದ ಹೊಸ ವಿವಾದ

ರಾಜ್ಯದ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ರ ವಯೋಮಾನದವರು- ಸಿಎಂ ಸಿದ್ದರಾಮಯ್ಯ

ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ನಿರ್ಬಂಧ: ತಡೆಯಾಜ್ಞೆ ವಿರೋಧಿಸಿ ಸರ್ಕಾರದ ಮೇಲ್ಮನವಿ; 'ಆದೇಶ ಕಾಯ್ದಿರಿಸಿದ' ಹೈಕೋರ್ಟ್

ಏಷ್ಯಾ ಕಪ್ ವಿವಾದ: ಪಾಕ್ ಕ್ರಿಕೆಟಿಗ ಹ್ಯಾರಿಸ್ ರೌಫ್‌ಗೆ ಐಸಿಸಿ ಕಠಿಣ ಶಿಕ್ಷೆ, ಸೂರ್ಯಕುಮಾರ್ ಯಾದವ್‌ಗೆ ದಂಡ

ಭಾರತ ಸದ್ಯದಲ್ಲೇ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ- ಕೇಂದ್ರ ಹಣಕಾಸು ಸಚಿವೆ

SCROLL FOR NEXT