ಡಿಂಪಲ್ ಯಾದವ್ 
ದೇಶ

SP ಸಂಸದೆ ಡಿಂಪಲ್ ಯಾದವ್ ಬೆನ್ನಿನ ಬಗ್ಗೆ 'ಅಶ್ಲೀಲ' ಹೇಳಿಕೆ: News ರೂಂನಲ್ಲೇ Muslim ಮೌಲಾನಗೆ ಕಪಾಳಮೋಕ್ಷ, Video

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಮುಸ್ಲಿಂ ಮೌಲಾನಾ ಸಾಜಿದ್ ರಶೀದಿಗೆ ಕಪಾಳಮೋಕ್ಷ ಮಾಡಲಾಗಿದೆ.

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಮುಸ್ಲಿಂ ಮೌಲಾನಾ ಸಾಜಿದ್ ರಶೀದಿಗೆ ಕಪಾಳಮೋಕ್ಷ ಮಾಡಲಾಗಿದೆ. ಟಿವಿ ಡಿಬೇಟ್ ನಿಮಿತ್ತ ಸುದ್ದಿ ವಾಹಿನಿಯೊಂದಕ್ಕೆ ಮೌಲಾನಾ ಸಾಜಿದ್ ರಶೀದಿ ಹೋಗಿದ್ದರು. ಅಲ್ಲಿಗೆ ಹೋದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮೌಲಾನಾ ಸಾಜಿದ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದ ಮಸೀದಿಗಳ ಇಮಾಮ್‌ಗಳ ಸಂಘಟನೆಯಾದ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿರುವ ಮೌಲಾನಾ ಸಾಜಿದ್ ರಶೀದಿ, ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಹೇಳಿಕೆಗಳಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ ಡಿಂಪಲ್ ಯಾದವ್ ವಿರುದ್ಧ ಅವರು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಇನ್ನು ಮೌಲಾನಾ ಸಾಜಿಶ್ ರಶೀದಿ ಹೇಳಿಕೆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೊದಲ್ಲಿ ಮೌಲಾನಾ ಸಾಜಿದ್, ಎಸ್‌ಪಿ ಸಂಸದ ಡಿಂಪಲ್ ಯಾದವ್ ಅವರ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ವಾಸ್ತವವಾಗಿ, ಡಿಂಪಲ್ ಯಾದವ್ ಕೆಲವು ದಿನಗಳ ಹಿಂದೆ ಮಸೀದಿಗೆ ಭೇಟಿ ನೀಡಿದ್ದರು. ಈ ಭೇಟಿಯ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ಈ ಭೇಟಿಯ ಸಮಯದಲ್ಲಿ ಮೌಲಾನಾ ರಶೀದಿ ಅವರ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದರು. ನಾನು ನಿಮಗೆ ಒಂದು ಫೋಟೋ ತೋರಿಸುತ್ತೇನೆ. ಅದು ನಿಮ್ಮನ್ನು ನಾಚಿಕೆಪಡಿಸುತ್ತದೆ. ನಾನು ಯಾರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಎಲ್ಲರಿಗೂ ತಿಳಿದಿದೆ. ಅವರೊಂದಿಗೆ ಇದ್ದ ಮಹಿಳೆ ಮುಸ್ಲಿಂ ಉಡುಪಿನಲ್ಲಿದ್ದರು. ಅವರ ತಲೆಗೆ ಮುಚ್ಚಲಾಗಿತ್ತು. ಇನ್ನೊಬ್ಬ ಮಹಿಳೆ ಡಿಂಪಲ್ ಯಾದವ್ ಅವರ ಬೆನ್ನು ಕಾಣುವಂತೆ ಕುಳಿತ್ತಿದ್ದರು ಎಂದು ಹೇಳಿದ್ದರು.

ಮೌಲಾನಾ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆ ಬಿಜೆಪಿ ಕಠಿಣ ನಿಲುವು ತೆಗೆದುಕೊಂಡಿದೆ. ಸೋಮವಾರ, ಎನ್‌ಡಿಎ ಸಂಸದರು ಸಂಸತ್ತಿನ ಆವರಣದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದು ಹೇಳಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಿದರು. ಮೌಲಾನಾ ಅವರ ಹೇಳಿಕೆಯ ಬಗ್ಗೆ ಅಖಿಲೇಶ್ ಯಾದವ್ ಏಕೆ ಮೌನವಹಿಸಿದ್ದಾರೆ ಎಂದು ಬಿಜೆಪಿ ಸಂಸದರು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್