ತೇಜಸ್ವಿ ಸೂರ್ಯ online desk
ದೇಶ

Operation Sindoor ಗೆ ಬೆಂಬಲ: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಬ್ರೆಜಿಲ್ ಖಂಡನೆ; ತೇಜಸ್ವಿ ಸೂರ್ಯ

ಬಹುಕಾಲದಿಂದ ಬ್ರೆಜಿಲ್ ಭಾರತದ ಜೊತೆ ಮೈತ್ರಿ ಹೊಂದಿದ್ದು, ಮಿತ್ರ ದೇಶವಾಗಿದೆ ಎಂದು ನಿಯೋಗಕ್ಕೆ ಬ್ರೆಜಿಲ್ ನಾಯಕರು ಭರವಸೆ ನೀಡಿದರು ಎಂದು ಸೂರ್ಯ ತಿಳಿಸಿದ್ದಾರೆ.

ಬ್ರೆಜಿಲ್: ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿರುವ ಬ್ರೆಜಿಲ್ ನಾಯಕರು ಭಾರತದ ಭಯೋತ್ಪಾದನಾ ನಿಗ್ರಹ ಪ್ರಯತ್ನ ಆಪರೇಷನ್ ಸಿಂಧೂರಕ್ಕೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗದ ಸದಸ್ಯರಾಗಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ನಿಯೋಗವು ಬ್ರೆಜಿಲ್ ಸಂಸತ್ತಿನ ಅಧ್ಯಕ್ಷರು, ಹಂಗಾಮಿ ವಿದೇಶಾಂಗ ಸಚಿವರು ಮತ್ತು ಭಾರತ-ಬ್ರೆಜಿಲ್ ಸ್ನೇಹ ಸಮೂಹದ ಸಂಸತ್ ಸದಸ್ಯರನ್ನು ಭೇಟಿಯಾಯಿತು. ಬಹುಕಾಲದಿಂದ ಬ್ರೆಜಿಲ್ ಭಾರತದ ಜೊತೆ ಮೈತ್ರಿ ಹೊಂದಿದ್ದು, ಮಿತ್ರ ದೇಶವಾಗಿದೆ ಎಂದು ನಿಯೋಗಕ್ಕೆ ಬ್ರೆಜಿಲ್ ನಾಯಕರು ಭರವಸೆ ನೀಡಿದರು ಎಂದು ಸೂರ್ಯ ತಿಳಿಸಿದ್ದಾರೆ.

ನಾವು ಬ್ರೆಜಿಲ್‌ನ ಹಂಗಾಮಿ ವಿದೇಶಾಂಗ ಸಚಿವ, ಬ್ರೆಜಿಲ್ ಸಂಸತ್ತಿನ ಅಧ್ಯಕ್ಷರು, ಭಾರತ-ಬ್ರೆಜಿಲ್ ಸ್ನೇಹ ಸಮೂಹದ ಸಂಸದರನ್ನು ಭೇಟಿಯಾದೆವು. ಮೂರು ಸಭೆಗಳಲ್ಲಿಯೂ, ಬ್ರೆಜಿಲ್ ಭಾರತಕ್ಕೆ ಸ್ಪಷ್ಟವಾಗಿ ಬೆಂಬಲ ವ್ಯಕ್ತಪಡಿಸಿದೆ. ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿದೆ. ಭಾರತದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಿಂಧೂರ್ ಬೆಂಬಲಿಸಿದೆ. ಇದು ಭಾರತಕ್ಕೆ ಬಹಳ ದೊಡ್ಡ ಯಶಸ್ಸು. ಲ್ಯಾಟಿನ್ ಅಮೆರಿಕ ಮತ್ತು ಈ ಸಂಪೂರ್ಣ ಭೌಗೋಳಿಕತೆಯಲ್ಲಿ ಬ್ರೆಜಿಲ್ ಅತ್ಯಗತ್ಯ ಧ್ವನಿಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಜಿ -20, ಜಿ -4, ಬ್ರಿಕ್ಸ್, ಅಥವಾ ಅಂತರರಾಷ್ಟ್ರೀಯ ಸೌರ ಒಕ್ಕೂಟ, ಜೈವಿಕ ಇಂಧನಗಳಿಗಾಗಿ ಇರುವ ಜಾಗತಿಕ ಒಕ್ಕೂಟ ಸೇರಿ ಹಲವೆಡೆ ಬ್ರೆಜಿಲ್ ಭಾರತದ ಜೊತೆ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿದ್ದು. ಮೂರು ಸಭೆಗಳಲ್ಲಿ, ಬ್ರೆಜಿಲ್‌ ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಬೆಂಬಲಿಸಿದೆ. ಪ್ರತಿ ಸಭೆಯ ಕೊನೆಯಲ್ಲಿ, ಬ್ರೆಜಿಲ್ ಎಲ್ಲಾ ಕಾಲಕ್ಕೂ ಭಾರತದ ಮಿತ್ರ ಎಂಬ ಭರವಸೆ ನೀಡಲಾಯಿತು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT