ಆಸ್ಪತ್ರೆಯಲ್ಲಿ ರಮೇಶ್ ವಿಶ್ವಾಶ್ ಕುಮಾರ್  
ದೇಶ

'ನಾನು ಜೀವಂತವಾಗಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ': ಬದುಕುಳಿದ Viswashkumar Ramesh ವಿಮಾನ ದುರಂತಕ್ಕೆ ಸಾಕ್ಷಿ

ಮೂಲತಃ ಡಿಯುನವರಾದ ವಿಶ್ವಾಶ್ ಕುಮಾರ್ ಎರಡು ದಶಕಗಳಿಗೂ ಹೆಚ್ಚು ಕಾಲ ಯುಕೆಯಲ್ಲಿ ನೆಲೆಸಿ ಅಲ್ಲಿಯ ಪ್ರಜೆಯಾಗಿದ್ದಾರೆ.

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನ ಮೇಘನಿನಗರ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ AI-171 ರ ಅವಶೇಷಗಳಿಂದ ಹೊಗೆ ಇನ್ನೂ ತಣ್ಣಗಾಗಿಲ್ಲ. 241 ಜನರೊಂದಿಗೆ ವಿಮಾನ ಹತ್ತಿದ ವಿಶ್ವಾಶ್‌ಕುಮಾರ್ ರಮೇಶ್ ಮಾತ್ರ ಜೀವಂತವಾಗಿ ಬದುಕುಳಿದ ಏಕೈಕ ವ್ಯಕ್ತಿ.

ಈಗ ಸಿವಿಲ್ ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿ ಮಲಗಿರುವ ಅವರು, ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಂತೆ ಅವರ ಧ್ವನಿ ನಡುಗುತ್ತದೆ, ಅವರ ಪ್ರತಿ ನೆನಪು ಬೆಂಕಿ ಮತ್ತು ಭಯದಲ್ಲಿ ಕೊನೆಯಾಗುತ್ತಿದೆ.

ಮೂಲತಃ ಡಿಯುನವರಾದ ವಿಶ್ವಾಶ್ ಕುಮಾರ್ ಎರಡು ದಶಕಗಳಿಗೂ ಹೆಚ್ಚು ಕಾಲ ಯುಕೆಯಲ್ಲಿ ನೆಲೆಸಿ ಅಲ್ಲಿಯ ಪ್ರಜೆಯಾಗಿದ್ದಾರೆ. ನಿನ್ನೆ ಅವರೊಂದಿಗೆ ವಿಮಾನದಲ್ಲಿದ್ದ ಅವರ ಸಹೋದರ ಅಜಯ್ ಅವರೊಂದಿಗೆ ಆರು ತಿಂಗಳ ಹಿಂದೆ ಗುಜರಾತ್‌ಗೆ ಬಂದಿದ್ದರು.

ಇಂದು, ಹೋಗುವಾದ ಏಕಾಂಗಿಯಾಗಿ ದೈಹಿಕವಾಗಿ ಗಾಯಗೊಂಡು, ಭಾವನಾತ್ಮಕವಾಗಿ ಭಯಬಿದ್ದು ಹೋಗಿದ್ದಾರೆ. ಅಬ್ಬಾ ಅವರಿಗೆ ಆಯಸ್ಸು ಗಟ್ಟಿಯಿದೆ ಎಂದು ಎಲ್ಲರೂ ಉದ್ಗರಿಸುತ್ತಿದ್ದು, ವಿಶ್ವಸ್ ಅವರು ಆಧ್ಯಾತ್ಮಿಕವಾಗಿಯೂ ದಿಗ್ಭ್ರಮೆಗೊಂಡಿದ್ದಾರೆ.

ನನ್ನ ಕಣ್ಣುಗಳ ಮುಂದೆ ಎಲ್ಲವೂ ಸಂಭವಿಸಿ ಹೋಯಿತು. ನಾನು ಜೀವಂತವಾಗಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಾಶ್‌ಕುಮಾರ್ ಡಿಡಿ ನ್ಯೂಸ್‌ಗೆ ಹೇಳುವಾಗ ಅವರ ಕಣ್ಣುಗಳು ಒದ್ದೆಯಾಗಿವೆ.

ನಾನು ಇನ್ನೂ ದಿಗ್ಭ್ರಮೆಯಲ್ಲಿದ್ದೇನೆ. ವಿಮಾನ ನೆಲಕ್ಕಪ್ಪಳಿಸಿದಾಗ ನಾನು ವಿಮಾನದಲ್ಲೇ ಇದ್ದೆ. ಆದರೆ ಮುಂದೇನಾಯ್ತು ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಭಾರೀ ಸ್ಫೋಟ ಮತ್ತು ಹೊಗೆಯಲ್ಲಿ ಯಾರು ಎಲ್ಲಿದ್ದಾರೆ ಎಂಬುದೇ ಕಾಣುತ್ತಿರಲಿಲ್ಲ. ನಾನು ಬದುಕುಳಿದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ವಿಶ್ವಾಸ್‌ ಕುಮಾರ್‌ ಹೇಳಿದ್ದಾರೆ.

ಒಂದು ಕ್ಷಣ, ನಾನು ಸಾಯುತ್ತೇನೆ ಎಂದೇ ಅಂದುಕೊಂಡಿದ್ದೆ

ಇದು ಲಂಡನ್‌ಗೆ ಹೋಗುವ AI-171 ವಿಮಾನದ ನಿಯಮಿತ ಹಾರಾಟವಾಗಬೇಕಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಭಸ್ಮವಾಗಿ ಹೋಯಿತು. ವಿಶ್ವಾಶ್‌ಕುಮಾರ್ ವಿವರಿಸಿದಂತೆ, ವಿಮಾನವು ಹಾರಾಟ ಆರಂಭಿಸಿದ ಕೂಡಲೇ ಮಿನುಗುವ ಹಸಿರು ಮತ್ತು ಬಿಳಿ ದೀಪಗಳು ಕ್ಯಾಬಿನ್‌ನಾದ್ಯಂತ ಮಿನುಗಿದವು - ವಿಪತ್ತಿಗೆ ತಣ್ಣನೆಯ ಮುನ್ನುಡಿ ನೀಡಿತ್ತು. ಸೆಕೆಂಡುಗಳ ನಂತರ, ವಿಮಾನವು ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಅನಿಯಂತ್ರಿತವಾಗಿ ಓಡಿಹೋಗಿ ನಂತರ ಕಟ್ಟಡಕ್ಕೆ ಅಪ್ಪಳಿಸಿತು ಎಂದು ನಾನು ಭಾವಿಸಿದೆ. ಜ್ವಾಲೆಗಳು ಕ್ಯಾಬಿನ್ ನ್ನು ಆವರಿಸಿದವು. ಗಗನಸಖಿ ಮತ್ತು ಇತರ ನೋಡಿದೆ ಎನ್ನುತ್ತಾರೆ.

ವಿಶ್ವಾಸ್ ಕುಮಾರ್ ಉಳಿದಿದ್ದು ಹೇಗೆ?

ವಿಮಾನದ ಒಂದು ಭಾಗದಲ್ಲಿ ವಿಶ್ವಾಶ್‌ಕುಮಾರ್ ಕುಳಿತಿದ್ದರು, ಅದು ವಿಧಿಯಿಂದಲೇ ಮುರಿದು ಹಾಸ್ಟೆಲ್‌ನ ಇನ್ನೊಂದು ಬದಿಯಲ್ಲಿರುವ ತೆರೆದ ಮೈದಾನದ ಬಳಿ ಇಳಿಯಿತು. ಆ ಬೇರ್ಪಡುವಿಕೆ ಅವರ ಜೀವವನ್ನು ಉಳಿಸಿತು.

ನನಗೆ ಪ್ರಜ್ಞೆ ಬಂದಾಗ, ನನ್ನ ಸೀಟ್‌ಬೆಲ್ಟ್ ಅನ್ನು ಬಿಚ್ಚಿ, ಮೇಲಕ್ಕೆ ನೋಡಿದಾಗ ಬಾಗಿಲು ಮುರಿದಿರುವುದನ್ನು ನೋಡಿದೆ. ಕೂಡಲೇ ಎದ್ದು ಹೊರಗೆ ನಡೆದೆ. ನಾನು ಗೋಡೆಯ ಇನ್ನೊಂದು ಬದಿಯಲ್ಲಿದ್ದಿದ್ದರೆ ಸಾಧ್ಯವಾಗುತ್ತಿರಲಿಲ್ಲ. ನಾನೂ ಸತ್ತುಹೋಗುತ್ತಿದ್ದೆ ಎಂದರು.

ಸುಟ್ಟು ಕರಕಲಾದ ದೇಹಗಳ ನಡುವೆ ಒಂಟಿ ವ್ಯಕ್ತಿಯಾಗಿ ವಿಶ್ವಾಶ್ ಕುಮಾರ್ ದಿಗ್ಭ್ರಮೆಗೊಂಡರು. ತುರ್ತು ಸೇವೆಗಳು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದವು, ಅಲ್ಲಿ ಅವರು ಈಗ ನಿರಂತರ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಯಲ್ಲಿ ವಿಶ್ವಾಶ್‌ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. “ಮೋದಿಯವರು ನನಗೆ ಹೇಗೆ ಅನಿಸುತ್ತಿದೆ ಎಂದು ಕೇಳಿದರು ಮತ್ತು ಏನಾಯಿತು ಎಂದು ವಿಚಾರಿಸಿದರು ಎಂದರು.

ಲಂಡನ್‌ಗೆ ಹಿಂತಿರುಗಿದ ಅವರ ಕುಟುಂಬವು ಸಮಾಧಾನ ಮತ್ತು ದುಃಖ ಎರಡರಿಂದಲೂ ತುಂಬಿತ್ತು. ಅವರ ಸಹೋದರ ನಯನ್‌ಭಾಯ್, ಯುಕೆಯಿಂದ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕುಟುಂಬವು ಭಾರತಕ್ಕೆ ತೆರಳುತ್ತಿದೆ ಎಂದು ದೃಢಪಡಿಸಿದರು. ನಾವು ವಿಶ್ವಾಸ್ ರೊಂದಿಗೆ ಮಾತನಾಡಿದ್ದೇವೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಇನ್ನೊಬ್ಬ ಸಹೋದರ ಅಜಯ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾವುಕರಾಗಿ ಹೇಳಿದರು.

ವಿಶ್ವಾಶ್‌ಕುಮಾರ್ ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ 20 ವರ್ಷಗಳಿಗೂ ಹೆಚ್ಚು ಕಾಲ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ, ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT