ಸುಮಿತ್ ಸಬರ್ವಾಲ್ , ಕ್ಲೈವ್ ಕುಂದರ್ 
ದೇಶ

'ಲಂಡನ್ ತಲುಪಿದ ನಂತರ ಕಾಲ್ ಮಾಡುತ್ತೇನೆ ಎಂದ ಮಗ ಬಾರದ ಲೋಕಕ್ಕೆ ಹೋದ': ವಿಮಾನ ಹತ್ತುವ ಮುನ್ನ ವೃದ್ಧ ತಂದೆಗೆ ಕರೆ ಮಾಡಿದ್ದ ಕ್ಯಾ. ಸುಮಿತ್ ಸಬರ್ವಾಲ್

ಮೂರು ದಿನಗಳ ಹಿಂದೆ, ಸುಮಿತ್ ಸಬರ್ವಾಲ್ ತನ್ನ ತಂದೆಯೊಂದಿಗೆ ಬಹಳ ಪ್ರೀತಿಯಿಂದ ಮಾತುಕತೆ ನಡೆಸಿದ್ದರು. ಒಂದೆರಡು ವರ್ಷಗಳ ಹಿಂದೆ ಸುಮಿತ್ ಅವರ ತಾಯಿ ನಿಧನರಾದ ನಂತರ ತಂದೆ ಒಂಟಿಯಾಗಿ ವಾಸಿಸುತ್ತಿದ್ದಾರೆ.

ನವದೆಹಲಿ: ಮುಂಬೈಯಲ್ಲಿರುವ ವೃದ್ಧ ಮತ್ತು ಅಸ್ವಸ್ಥ ತಂದೆ ತನ್ನ ಮಗ ಮನೆಗೆ ಬಂದು ತನ್ನ ಯೋಗಕ್ಷೇಮ ವಿಚಾರಿಸುತ್ತಾನೆ ಎಂಬ ನಿರೀಕ್ಷೆ ಹುಸಿಯಾಯಿತು. ಮಗ ಪೈಲಟ್-ಇನ್-ಕಮಾಂಡ್ ಸುಮಿತ್ ಸಬರ್ವಾಲ್ ನಿನ್ನೆ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ನಿಧನರಾದರು.

ಲಂಡನ್‌ಗೆ ಹಾರುವ ಮೊದಲು ಸುಮಿತ್ ಸಬರ್ವಾಲ್ ತನ್ನ ತಂದೆಗೆ ಫೋನ್ ಮಾಡಿ, ನಾನು ಲಂಡನ್ ತಲುಪಿದ ನಂತರ ನಾನು ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿ ವಿಮಾನ ಹತ್ತಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲಾಗಿ ಹೋದರು.

ಮೂರು ದಿನಗಳ ಹಿಂದೆ, ಸುಮಿತ್ ಸಬರ್ವಾಲ್ ತನ್ನ ತಂದೆಯೊಂದಿಗೆ ಬಹಳ ಪ್ರೀತಿಯಿಂದ ಮಾತುಕತೆ ನಡೆಸಿದ್ದರು. ಒಂದೆರಡು ವರ್ಷಗಳ ಹಿಂದೆ ಸುಮಿತ್ ಅವರ ತಾಯಿ ನಿಧನರಾದ ನಂತರ ತಂದೆ ಒಂಟಿಯಾಗಿ ವಾಸಿಸುತ್ತಿದ್ದಾರೆ. ಮಗ ಸುಮಿತ್ ಮದುವೆಯಾಗಿರಲಿಲ್ಲ.

ಮಗ ವಿಮಾನ ಅಪಘಾತದಲ್ಲಿ ತೀರಿಹೋದ ಸುದ್ದಿ ಕೇಳಿ ಸ್ನೇಹಿತರು ಮತ್ತು ಸಂಬಂಧಿಕರು ದಿನವಿಡೀ ವೃದ್ಧ ತಂದೆಯನ್ನು ಬಂದು ನೋಡಿಕೊಂಡು ಹೋಗುತ್ತಿದ್ದರು. ಸುಮಿತ್ ಸಭರ್ವಾಲ್‌ಗೆ 55 ಅಥವಾ 56 ವರ್ಷ ವಯಸ್ಸಾಗಿರಬೇಕು" ಎಂದು ಭಾರತೀಯ ಪೈಲಟ್‌ಗಳ ಸಂಘದ ಅಧ್ಯಕ್ಷ ಕ್ಯಾಪ್ಟನ್ ಸಿಎಸ್ ರಾಂಧವ ಹೇಳುತ್ತಾರೆ. ಅವರಿಗೆ ತಂದೆಯೊಂದಿಗೆ ಉತ್ತಮ ಬಾಂಧವ್ಯವಿತ್ತು ಎನ್ನುತ್ತಾರೆ.

ಸಭರ್ವಾಲ್, ಅತ್ಯಂತ ಅನುಭವಿ ಪೈಲಟ್, ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿದ್ದು, 8,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಹೊಂದಿದ್ದರು. ಅವರು ಸ್ವತಃ ವಿಮಾನಗಳ ಸುರಕ್ಷತಾ ಪರಿಶೀಲನೆಗಳಲ್ಲಿ ಭಾಗಿಯಾಗಿದ್ದರು ಎಂದು ಕ್ಯಾಪ್ಟನ್ ರಾಂಧವ ಹೇಳುತ್ತಾರೆ.

ಭಾರತೀಯ ಪೈಲಟ್‌ಗಳ ಸಂಘವು ಸುಮಾರು 6,000 ಸದಸ್ಯರನ್ನು ಹೊಂದಿದೆ, ಸಭರ್ವಾಲ್ ಅವರಲ್ಲಿ ಒಬ್ಬರು. ನಾವು ವಿಮಾನ ಸುರಕ್ಷತೆಗಾಗಿ ಬಹಳಷ್ಟು ಶ್ರಮಿಸುತ್ತೇವೆ, ಅವರು ನಮ್ಮಲ್ಲಿ ಒಬ್ಬರು ಎಂದು ಅವರು ಹೇಳಿದರು.

ಇನ್ನು ನಿನ್ನೆಯ ಅಪಘಾತ ವೇಳೆ ಸಹ-ಪೈಲಟ್ ಕ್ಲೈವ್ ಕುಂದರ್ 1,000 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವನ್ನು ಹೊಂದಿದ್ದರು,

ಸಹ ಪೈಲಟ್ ದೀಪಕ್ ಪಾಠಕ್ ಕೂಡ ಮಹಾರಾಷ್ಟ್ರದವರು. ಅವರು ಥಾಣೆ ಜಿಲ್ಲೆಯ ಬದ್ಲಾಪುರದವರು. ಅವರ ಸಹೋದ್ಯೋಗಿಗಳು ಅವರು ದೀರ್ಘ ಪ್ರಯಾಣದಲ್ಲಿ ಅನುಭವಿ ಮತ್ತು ಕೆಲಸದಲ್ಲಿ ಸಾಕಷ್ಟು ದಕ್ಷರಾಗಿದ್ದರು ಎಂದು ಹೇಳುತ್ತಾರೆ.

ದೀಪಕ್ ಅಪಘಾತದಲ್ಲಿ ನಿಧನರಾದರು ಎಂದು ಅವರ ಕುಟುಂಬ ನಂಬಲು ಅಸಾಧ್ಯವಾಗುತ್ತದೆ. ದೀಪಕ್‌ಗೆ ಕರೆ ಮಾಡುತ್ತಿದ್ದೇವೆ ಮತ್ತು ಅವರ ಫೋನ್ ರಿಂಗಣಿಸುತ್ತಿದೆ, ಅವರು ಜೀವಂತವಾಗಿದ್ದಾರೆ ಎಂದು ಕುಟುಂಬಸ್ಥರು ನಂಬುತ್ತಾರೆ.

ದೀಪಕ್ ಜೀವಂತವಾಗಿದ್ದಾರೆ ಮತ್ತು ಅವರು ಹಿಂತಿರುಗುತ್ತಾರೆ ಎಂದು ನಾವು ಇನ್ನೂ ಆಶಿಸುತ್ತೇವೆ. ದೀಪಕ್ ಎಲ್ಲಿಗೂ ಹೋಗುವ ಮೊದಲು ಮನೆಗೆ ಮೊದಲ ಕರೆ ಮಾಡುತ್ತಿದ್ದರು, ಸಹ ಪೈಲಟ್ ಆಗಿ ಲಂಡನ್‌ಗೆ ಹೊರಡುವ ಮೊದಲು ಅವರು ತಮ್ಮ ತಾಯಿಯೊಂದಿಗೆ ಮಾತನಾಡುತ್ತಿದ್ದರು ಎಂದು ಸಹ ಪೈಲಟ್ ಕುಟುಂಬ ಸದಸ್ಯರು ಹೇಳಿದರು.

ಸಿಬ್ಬಂದಿಯಲ್ಲಿ ಇಬ್ಬರು ಸಹ ಮಹಾರಾಷ್ಟ್ರದವರು. ಅರ್ಪಣ್ ಮಹಾದಿಕ್ ಮುಂಬೈನ ಗೋರೆಗಾಂವ್‌ನವರು, ರೋಶನಿ ಸೊಂಘರೆ ಡೊಂಬಿವಲಿಯವರು. ಮಹಾದಿಕ್ ಎನ್‌ಸಿಪಿ ರಾಜ್ಯ ಅಧ್ಯಕ್ಷ ಸುನಿಲ್ ತತ್ಕರೆ ಅವರ ಸಂಬಂಧಿ.

ಪೈಲಟ್ ಮತ್ತು ಸಿಬ್ಬಂದಿಯ ಹೆಸರುಗಳು ಮಾಧ್ಯಮಗಳಲ್ಲಿ ಹರಿದಾಡಿದ ಕೂಡಲೇ, ಶಿವಸೇನಾ ಶಾಸಕ ದಿಲೀಪ್ ಲಾಂಡೆ ಪೊವೈನಲ್ಲಿರುವ ಸುಮಿತ್ ಸಭರ್ವಾಲ್ ಅವರ ಮನೆಗೆ ಧಾವಿಸಿ 88 ವರ್ಷದ ತಂದೆ ಪುಷ್ಕರಾಜ್ ಸಭರ್ವಾಲ್ ಅವರನ್ನು ಭೇಟಿಯಾದರು. ತಂದೆ ತಮ್ಮ ಮಗಳು ಮತ್ತು ಇಬ್ಬರು ಮೊಮ್ಮಕ್ಕಳು ಮನೆಗೆ ಬರಲು ಕಾಯುತ್ತಿದ್ದಾರೆ ಎಂದು ಲ್ಯಾಂಡೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT