ಪಹಲ್ಗಾಮ್. 
ದೇಶ

Pahalgam Terror Attack: ಉಗ್ರರ ಪೈಶಾಚಿಕ ಕೃತ್ಯದ ಬಳಿಕ ನಿಧಾನಗತಿಯಲ್ಲಿ ಕಾಶ್ಮೀರದತ್ತ ಮುಖ ಮಾಡಿದ ಪ್ರವಾಸಿಗರು

ಏಪ್ರಿಲ್ 22ರ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೆ ತೆರೆದಿದ್ದು, ಇದರ ಬೆನ್ನಲ್ಲೇ ಪಹಲ್ಗಾಮ್'ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಶ್ರೀನಗರ: ಬೈಸರನ್'ನಲ್ಲಿ ಉಗ್ರ ದಾಳಿ ಘಟನೆ ನಡೆದು 2 ತಿಂಗಳುಗಳು ಕಳೆಯುತ್ತಿದ್ದು, ದಿನ ಕಳೆದಂತೆ ನಿಧಾನಗತಿಯಲ್ಲಿ ಕಾಶ್ಮೀರದತ್ತ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ.

ಏಪ್ರಿಲ್ 22ರ ಉಗ್ರರ ಪೈಶಾಚಿಕ ಕೃತ್ಯದ ಬಳಿಕ ಮುಚ್ಚಲ್ಪಟ್ಟ ಕೆಲವು ಪ್ರವಾಸಿ ತಾಣಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮತ್ತೆ ತೆರೆದಿದ್ದು, ಇದರ ಬೆನ್ನಲ್ಲೇ ಪಹಲ್ಗಾಮ್'ಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವೆರಿನಾಗ್ ಗಾರ್ಡನ್, ಕೊಕರ್ನಾಗ್ ಗಾರ್ಡನ್, ಅಚಬಲ್ ಗಾರ್ಡನ್, ಬದಮ್ವರಿ ಪಾರ್ಕ್, ಡಕ್ ಪಾರ್ಕ್ ಮತ್ತು ತಕ್ದೀರ್ ಪಾರ್ಕ್ ಜೊತೆಗೆ ಬೆತಾಬ್ ವ್ಯಾಲಿ ಮತ್ತು ಪಹಲ್ಗಾಮ್ ಉದ್ಯಾನವನಗಳನ್ನು ಮತ್ತೆ ತೆರೆಯುವುದಾಗಿ ಘೋಷಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಅನೇಕ ಪ್ರವಾಸಿ ವಾಹನಗಳು ಪಹಲ್ಗಾಮ್‌ಗೆ ಬಂದು ಪ್ರವಾಸಿ ತಾಣದಲ್ಲಿ ಮುಕ್ತವಾಗಿ ಚಲಿಸಿದವು ಎಂದು ಪಹಲ್ಗಾಮ್‌ನ ಶಾಹಿ ರೆಸ್ಟೋರೆಂಟ್‌ನ ಮಾಲೀಕ ಹಿಲಾಲ್ ಅಹ್ಮದ್ ಅವರು ಹೇಳಿದ್ದಾರೆ.

ಪಹಲ್ಗಾಮ್‌ಗೆ ಭೇಟಿ ನೀಡಿದ್ದ ಮಧ್ಯಪ್ರದೇಶದ ಪ್ರವಾಸಿಗರ ಗುಂಪೊಂದು ಮಾತನಾಡಿ, ಇದು ಅತ್ಯಂತ ಸುಂದರವಾದ ಮತ್ತು ಅದ್ಭುತವಾದ ಸ್ಥಳವಾಗಿದೆ. ಇಲ್ಲಿನ ವಾತಾವರಣ ಆಹ್ಲಾದಕರವಾಗಿದೆ. ಪ್ರಸ್ತುತ ಇಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿದ್ದು, ಸಾಕಷ್ಟು ಭದ್ರತಾ ವ್ಯವಸ್ಥೆಗಳು ಜಾರಿಯಲ್ಲಿವೆ. ಪಹಲ್ಗಾಮ್ ಅಥವಾ ಕಣಿವೆಯ ಯಾವುದೇ ಸ್ಥಳದಲ್ಲಿ ನಾವು ಎಂದಿಗೂ ಅಸುರಕ್ಷಿತ ಎಂಬ ಭಾವನೆ ಮೂಡಲಿಲ್ಲ ಎಂದು ತಿಳಿಸಿದ್ದಾರೆ.

ಪಹಲ್ಗಮ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಾವೇದ್ ಬುರ್ಜಾ ಅವರು ಮಾತನಾಡಿ, ಹೋಟೆಲ್ ಬುಕಿಂಗ್ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಶೂನ್ಯ ಸಂಖ್ಯೆಯಿಂದ, ಪಹಲ್ಗಾಮ್‌ನಲ್ಲಿರುವ ಹೋಟೆಲ್‌ಗಳಲ್ಲಿ ಜನಸಂಖ್ಯೆ ಈಗ 15-20 ಪ್ರತಿಶತಕ್ಕೆ ಏರಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಪಹಲ್ಗಮ್ ದಾಳಿಯ ನಂತರ ಸುಮಾರು ಎರಡು ತಿಂಗಳು ಇಲ್ಲಿನ ವ್ಯಾಪಾರ-ವಹಿವಾಟುಗಳು ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ನಾವು ನಮ್ಮ ಜೀವನವನ್ನು ಮತ್ತೆ ಪುನರ್ನಿರ್ಮಿಸಬಹುದು ಎಂಬ ಭರವಸೆ ನಮಗಿದೆ ಎಂದು ಕ್ಯಾಬ್ ಚಾಲಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

WPL 2026: 4 ಓವರ್, 1 ಮೇಡನ್.. ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್.. RCBಯ ಲೇಡಿ ಹೇಜಲ್ವುಡ್ Lauren Bell!

ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ ‘ಗರಗಸ’; DDT ಆಗುವತ್ತ ಕರ್ನಾಟಕ ಸರ್ಕಾರ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

SCROLL FOR NEXT