ಮಹಾರಾಣಾ ಪ್ರತಾಪ್‌ ವಂಶಸ್ಥ ಅರವಿಂದ್ ಸಿಂಗ್ ಮೇವಾರ್  online desk
ದೇಶ

ಮಹಾರಾಣಾ ಪ್ರತಾಪ್‌ ವಂಶಸ್ಥ, ಕ್ರಿಕೆಟ್, ಪೋಲೋ ಕ್ರೀಡಾಪಟು ಅರವಿಂದ್ ಸಿಂಗ್ ಮೇವಾರ್ ನಿಧನ

ಮೇವಾರ್ ಗೌರವಾರ್ಥವಾಗಿ, ಉದಯಪುರ ನಗರ ಅರಮನೆಯನ್ನು ಭಾನುವಾರ ಮತ್ತು ಸೋಮವಾರ ಪ್ರವಾಸಿಗರಿಗೆ ಮುಚ್ಚಲಾಗುತ್ತಿದೆ.

ಉದಯಪುರ: ಮೇವಾರ್‌ನ ರಾಜಮನೆತನದ ಸದಸ್ಯ ಮತ್ತು HRH ಹೋಟೆಲ್‌ಗಳ ಸಮೂಹದ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಮೇವಾರ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಭಾನುವಾರ ಮುಂಜಾನೆ ಉದಯಪುರದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೇವಾರ್ (81) ರಜಪೂತ ರಾಜ ಮಹಾರಾಣಾ ಪ್ರತಾಪ್ ಅವರ ವಂಶಸ್ಥರಾಗಿದ್ದರು. ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿರುವ ಅವರ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪತ್ನಿ ವಿಜಯರಾಜ್ ಕುಮಾರಿ, ಮಗ ಲಕ್ಷ್ಯರಾಜ್ ಸಿಂಗ್ ಮೇವಾರ್ ಮತ್ತು ಪುತ್ರಿಯರಾದ ಭಾರ್ಗವಿ ಕುಮಾರಿ ಮೇವಾರ್ ಮತ್ತು ಪದ್ಮಜಾ ಕುಮಾರಿ ಪರ್ಮಾರ್ ಅವರನ್ನು ಅಗಲಿದ್ದಾರೆ.

ಸೋಮವಾರ ಅಂತ್ಯಕ್ರಿಯೆ

ಮೇವಾರ್ ಗೌರವಾರ್ಥವಾಗಿ, ಉದಯಪುರ ನಗರ ಅರಮನೆಯನ್ನು ಭಾನುವಾರ ಮತ್ತು ಸೋಮವಾರ ಪ್ರವಾಸಿಗರಿಗೆ ಮುಚ್ಚಲಾಗುತ್ತಿದೆ. ಅರವಿಂದ್ ಸಿಂಗ್ ಮೇವಾರ್ ಭಗವಂತ್ ಸಿಂಗ್ ಮೇವಾರ್ ಮತ್ತು ಸುಶೀಲಾ ಕುಮಾರಿ ಅವರ ಕಿರಿಯ ಮಗನಾಗಿ ಜನಿಸಿದ್ದರು. ಅವರ ಹಿರಿಯ ಸಹೋದರ ಮಹೇಂದ್ರ ಸಿಂಗ್ ಮೇವಾರ್ ಕಳೆದ ವರ್ಷ ನವೆಂಬರ್‌ನಲ್ಲಿ ನಿಧನರಾದರು.

ಅರವಿಂದ್ ಸಿಂಗ್ ಮೇವಾರ್ ಅಜ್ಮೀರ್‌ನ ಪ್ರತಿಷ್ಠಿತ ಮೇಯೊ ಕಾಲೇಜಿನಲ್ಲಿ ಶಿಕ್ಷಣ ಪಡೆದರು ಮತ್ತು ಯುಕೆ ಮತ್ತು ಯುಎಸ್‌ನಲ್ಲಿ ಹೋಟೆಲ್ ನಿರ್ವಹಣಾ ಕೋರ್ಸ್‌ಗಳನ್ನು ಪಡೆದರು. ಅವರು ವಿವಿಧ ಅಂತರರಾಷ್ಟ್ರೀಯ ಹೋಟೆಲ್‌ಗಳಲ್ಲಿ ತರಬೇತಿ ಪಡೆದಿದ್ದಾರೆ.

ಅರವಿಂದ್ ಸಿಂಗ್ ಮೇವಾರ್ HRH ಹೋಟೆಲ್‌ಗಳ ಸಮೂಹವನ್ನು ವೃತ್ತಿಪರವಾಗಿ ನಿರ್ವಹಿಸುವ ಕಾರ್ಪೊರೇಟ್ ಸಂಸ್ಥೆಯಾಗಿ ನಿರ್ಮಿಸುವ ಮೊದಲು ಹಲವು ವರ್ಷಗಳ ಕಾಲ ಚಿಕಾಗೋದಲ್ಲಿ ವಾಸಿಸುತ್ತಿದ್ದರು ಮತ್ತು ಕೆಲಸ ಮಾಡುತ್ತಿದ್ದರು.

ಉತ್ಸಾಹಿ ಕ್ರಿಕೆಟಿಗ

ಅರವಿಂದ್ ಸಿಂಗ್ ಮೇವಾರ್ ಒಬ್ಬ ಉತ್ಸಾಹಿ ಕ್ರಿಕೆಟಿಗನೂ ಹೌದು. ಮೇವಾರ್ 1945-46ರಲ್ಲಿ ರಾಜಸ್ಥಾನದ ನಾಯಕನಾಗಿ ರಣಜಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದರು ಮತ್ತು ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದರು.

1970 ರ ದಶಕದಲ್ಲಿ ಅವರು ವೈದ್ಯಕೀಯ ಕಾರಣಗಳಿಂದಾಗಿ ಕ್ರೀಡೆಯನ್ನು ತ್ಯಜಿಸಿದ್ದರು. ಅರವಿಂದ್ ಸಿಂಗ್ ಮೇವಾರ್ ಅವರಿಗೆ ಕ್ರಿಕೆಟ್ ಅಷ್ಟೇ ಅಲ್ಲದೇ ಪೋಲೊ ಕ್ರೀಡೆಯಲ್ಲೂ ಹಿಡಿತವಿತ್ತು.

ಅರವಿಂದ್ ಸಿಂಗ್ ಮೇವಾರ್ ಯುಕೆಯಲ್ಲಿ ಅವರು ಕೇಂಬ್ರಿಡ್ಜ್ ಮತ್ತು ನ್ಯೂಮಾರ್ಕೆಟ್ ಪೋಲೊ ಕ್ಲಬ್‌ನಲ್ಲಿ 'ಉದಯಪುರ ಕಪ್' ನ್ನು ಸ್ಥಾಪಿಸಿದ್ದರು.

ಉದಯಪುರದಲ್ಲಿ, ಭಾರತೀಯ ಪಂದ್ಯಾವಳಿಗಳಿಗಾಗಿ ಆಯ್ಕೆ ಮಾಡಲ್ಪಟ್ಟ ಮತ್ತು ವಿಶೇಷವಾಗಿ ತರಬೇತಿ ಪಡೆದ ವೃತ್ತಿಪರ ಆಟಗಾರರೊಂದಿಗೆ ಪೋಲೊ ತಂಡವಾಗಿ ಮೇವಾರ್ ಪೋಲೊವನ್ನು ರಚಿಸಲಾದ ಹೆಗ್ಗಳಿಕೆ ಅರವಿಂದ್ ಸಿಂಗ್ ಮೇವಾರ್ ಗೆ ಸಲ್ಲುತ್ತದೆ. 1991 ರಲ್ಲಿ ಮೇವಾರ್ ಪೋಲೊ ತಂಡ 61 ನೇ ಕ್ಯಾವಲ್ರಿ ಆಟಗಾರರನ್ನು ಸೋಲಿಸಿ ಪ್ರತಿಷ್ಠಿತ ಅಧ್ಯಕ್ಷರ ಕಪ್ ನ್ನು ತನ್ನದಾಗಿಸಿಕೊಂಡಿತ್ತು.

ಅವರು ಉತ್ಸಾಹಿ ಪೈಲಟ್ ಕೂಡ ಆಗಿದ್ದರು ಮತ್ತು ಮೈಕ್ರೋಲೈಟ್ ವಿಮಾನದಲ್ಲಿ ಭಾರತದಾದ್ಯಂತ ಏಕವ್ಯಕ್ತಿ ಹಾರಾಟ ನಡೆಸಿದ್ದಾರೆ.

ಮೇವಾರ್ ಉದಯಪುರದ ಮಹಾರಾಣಾ ಆಫ್ ಮೇವಾರ್ ಚಾರಿಟೇಬಲ್ ಫೌಂಡೇಶನ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ಟ್ರಸ್ಟಿಯಾಗಿದ್ದರು. ಅವರು ಇತರ ಟ್ರಸ್ಟ್‌ಗಳ ಮುಖ್ಯಸ್ಥರೂ ಆಗಿದ್ದರು.

ಅವರ ತಂದೆ ಭಗವತ್ ಸಿಂಗ್ ಮೇವಾರ್ ಅವರ ಮರಣದ ನಂತರ, ಮೇವಾರ್ ಮನೆಯ ನಾಯಕತ್ವ ಮತ್ತು ಆಸ್ತಿ ವಿವಾದದ ಬಗ್ಗೆ ಅವರ ವಂಶಸ್ಥರ ನಡುವೆ ಘರ್ಷಣೆಗಳು ಮತ್ತು ಸಮಸ್ಯೆಗಳು ಉಂಟಾಗಿವೆ.

ಭಗವಂತ್ ಸಿಂಗ್ ತಮ್ಮ ಆಸ್ತಿಯನ್ನು ಟ್ರಸ್ಟ್ ಮೂಲಕ ಅರವಿಂದ್‌ಗೆ ವಿಲ್ ಮಾಡಿ, ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಹೆಸರಿಸಿದರು ಮತ್ತು ಅವರ ಹಿರಿಯ ಮಗ ಮಹೇಂದ್ರ ಸಿಂಗ್ ಮೇವಾರ್ ವಿರುದ್ಧ ಮೊಕದ್ದಮೆ ಹೂಡಿದ್ದರಿಂದ ಅವರ ಉತ್ತರಾಧಿಕಾರವನ್ನು ಕಸಿದುಕೊಂಡರು.

1984 ರಲ್ಲಿ ಅವರ ತಂದೆಯ ಮರಣದ ನಂತರ, ಅರವಿಂದ್ ಮನೆಯ ನಾಯಕತ್ವವನ್ನು ವಹಿಸಿಕೊಂಡರು. ಅದೇ ಸಮಯದಲ್ಲಿ, ಹಿರಿಯ ಮಗನಾದ ಮಹೇಂದ್ರ ಸಿಂಗ್ ಮೇವಾರ್ ಅವರನ್ನು ಕುಟುಂಬದ ನಾಮಮಾತ್ರ ಮುಖ್ಯಸ್ಥರನ್ನಾಗಿ ಮಾಡಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT