ವಿನೋದ್ ಕುಮಾರ್ ಶುಕ್ಲಾ 
ದೇಶ

59ನೇ Jnanpith Award: ಈ ಬಾರಿಯೂ ಕನ್ನಡಿಗರಿಗೆ ಸಿಗದ ಜ್ಞಾನಪೀಠ, ಹಿಂದಿ ಬರಹಗಾರನಿಗೆ ಒಲಿದ ಅತ್ಯುನ್ನತ ಪ್ರಶಸ್ತಿ!

ಪ್ರಸಿದ್ಧ ಹಿಂದಿ ಕವಿ ಮತ್ತು ಬರಹಗಾರ ವಿನೋದ್ ಕುಮಾರ್ ಶುಕ್ಲಾ ಅವರು ಈ ವರ್ಷದ ಅತಿದೊಡ್ಡ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಇಂದು ನವದೆಹಲಿಯಲ್ಲಿ ಘೋಷಣೆ ಮಾಡಲಾಯಿತು. ವಿನೋದ್ ಕುಮಾರ್ ಶುಕ್ಲಾ ರಾಯ್‌ಪುರದಲ್ಲಿ ನೆಲೆಸಿದ್ದಾರೆ.

ಪ್ರಸಿದ್ಧ ಹಿಂದಿ ಕವಿ ಮತ್ತು ಬರಹಗಾರ ವಿನೋದ್ ಕುಮಾರ್ ಶುಕ್ಲಾ (Vinod Kumar Shukla) ಅವರು ಈ ವರ್ಷದ ಅತಿದೊಡ್ಡ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಜ್ಞಾನಪೀಠ (Jnanpith Award) ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಇಂದು ನವದೆಹಲಿಯಲ್ಲಿ ಘೋಷಣೆ ಮಾಡಲಾಯಿತು. ವಿನೋದ್ ಕುಮಾರ್ ಶುಕ್ಲಾ ರಾಯ್‌ಪುರದಲ್ಲಿ ನೆಲೆಸಿದ್ದಾರೆ.

1937ರ ಜನವರಿ 1ರಂದು ರಾಜನಂದಗಾಂವ್‌ನಲ್ಲಿ ಜನಿಸಿದ್ದರು. ಅವರು ಕಳೆದ 50 ವರ್ಷಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಮೊದಲ ಕವನ ಸಂಕಲನ "ಅಭಿಕ್ಷ ಜೈ ಹಿಂದ್" 1971 ರಲ್ಲಿ ಪ್ರಕಟವಾಯಿತು. ಅಂದಿನಿಂದ ಅವರ ಬರಹಗಳು ಸಾಹಿತ್ಯ ಜಗತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿವೆ. ಅವರ ಕಾದಂಬರಿಗಳಾದ ನೌಕರ್ ಕಿ ಕಮೀಜ್, ಖಿಲೇಗಾ ತೋ ದೇಖೆಂಗೆ ಮತ್ತು ದೇರ್ ವಾಸ್ ಎ ವಿಂಡೋ ಇನ್ ದಿ ವಾಲ್ ಗಳನ್ನು ಅತ್ಯುತ್ತಮ ಹಿಂದಿ ಕಾದಂಬರಿಗಳೆಂದು ಪರಿಗಣಿಸಲಾಗಿದೆ. ಅಲ್ಲದೆ... ಅವರ ಕಥಾ ಸಂಕಲನಗಳಾದ ರೂಮ್ ಆನ್ ಎ ಟ್ರೀ ಮತ್ತು ಕಾಲೇಜ್ ಕೂಡ ಹೆಚ್ಚು ಚರ್ಚಿಸಲ್ಪಟ್ಟಿವೆ.

ವಿನೋದ್ ಕುಮಾರ್ ಶುಕ್ಲಾ ಅವರು ಮಕ್ಕಳ ಪುಸ್ತಕಗಳನ್ನು ಸಹ ಬರೆದಿದ್ದಾರೆ. ಅವುಗಳಲ್ಲಿ ಗ್ರೀನ್ ಲೀಫ್ ಕಲರ್ಡ್ ಪತ್ರಂಗಿ ಮತ್ತು ಎ ಬಾಯ್ ನೇಮ್ಡ್ ಕಹಿನ್ ಖೋ ಗಯಾ ಮುಂತಾದ ಪುಸ್ತಕಗಳು ಸೇರಿವೆ. ಇವು ಮಕ್ಕಳಿಗೆ ತುಂಬಾ ಇಷ್ಟವಾಗಿವೆ. ಅವರ ಪುಸ್ತಕಗಳನ್ನು ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ ಮತ್ತು ಅವರ ಸಾಹಿತ್ಯವನ್ನು ಪ್ರಪಂಚದಾದ್ಯಂತ ಓದಲಾಗುತ್ತದೆ.

ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. 2011ರಲ್ಲಿ ಕೊನೆಯ ಬಾರಿಗೆ ಕನ್ನಡಕ್ಕೆ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಲಭಿಸಿತ್ತು. ಡಾ.ಚಂದ್ರಶೇಖರ ಕಂಬಾರ ಅವರ ಸಮಗ್ರ ಕೃತಿಗೆ 2011ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿ ದೊರಕಿತ್ತು. ಇಲ್ಲಿಯವರೆಗೆ ಕುವೆಂಪು, ಶಿವರಾಮ ಕಾರಂತ, ದರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯುಆರ್ ಅನಂತಮೂರ್ತಿಯವರು ಈ ಪ್ರಶಸ್ತಿಯನ್ನು ಪಡೆದ ಸಾಹಿತಿಗಳಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಒಡೆತನದ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ಸ್ಥಾಪಿಸಿದ್ದು, 1961ರಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel