ಅದ್ನಾನ್ ಸಮಿ  
ದೇಶ

'ನಾವು ನಮ್ಮ ಸೇನೆಯನ್ನು ದ್ವೇಷಿಸುತ್ತೇವೆ' ಎಂದ ಪಾಕ್ ಹುಡುಗರಿಗೆ ಗಾಯಕ ಅದ್ನಾನ್ ಸಮಿ ಹೇಳಿದ್ದು ಏನು?

ಅಜರ್‌ಬೈಜಾನ್‌ನ ಬಾಕು ಪ್ರವಾಸದ ಸಮಯದಲ್ಲಿ ಅವರು ಪಾಕಿಸ್ತಾನದ ಯುವಕರ ಗುಂಪಿನೊಂದಿಗೆ ನಡೆಸಿದ ಸಂವಾದವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ನವದೆಹಲಿ: ಪಾಕಿಸ್ತಾನದ ಸೇನೆಯು ಉತ್ತಮ ಪಡೆ ಅಲ್ಲ. ನಾನು ಆ ದೇಶದಿಂದ ಹೊರಬರಲು ಅದು ಪ್ರೇರೇಪಿಸಿತು ಎಂದು ಖ್ಯಾತ ಗಾಯಕ ಅದ್ನಾನ್ ಸಾಮಿ ಬಹಿರಂಗಪಡಿಸಿದ್ದಾರೆ.

ಅಜರ್‌ಬೈಜಾನ್‌ನ ಬಾಕು ಪ್ರವಾಸದ ಸಮಯದಲ್ಲಿ ಅವರು ಪಾಕಿಸ್ತಾನದ ಯುವಕರ ಗುಂಪಿನೊಂದಿಗೆ ನಡೆಸಿದ ಸಂವಾದವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

"ಬಾಕುವಿನ ಸುಂದರ ಬೀದಿಗಳಲ್ಲಿ ನಡೆಯುವಾಗ ಕೆಲವು ಪಾಕಿಸ್ತಾನಿ ಹುಡುಗರನ್ನು ಭೇಟಿಯಾದ್ದೇನು. "ಅವರು ಹೇಳಿದರು, "ಸರ್, ನೀವು ತುಂಬಾ ಅದೃಷ್ಟವಂತರು. ನೀವು ಒಳ್ಳೆಯ ಸಮಯದಲ್ಲಿ ಪಾಕಿಸ್ತಾನವನ್ನು ತೊರೆದಿದ್ದೀರಿ. ನಾವು ಕೂಡಾ ನಮ್ಮ ಪೌರತ್ವವನ್ನು ಬದಲಾಯಿಸಲು ಬಯಸುತ್ತೇವೆ. ನಾವು ನಮ್ಮ ಸೈನ್ಯವನ್ನು ದ್ವೇಷಿಸುತ್ತೇವೆ. ಅವರು ನಮ್ಮ ದೇಶವನ್ನು ನಾಶಪಡಿಸಿದ್ದಾರೆ! ಎಂದು ನನಗೆ ಹೇಳಿದರು. 'ನನಗೆ ಇದು ಬಹಳ ಹಿಂದೆಯೇ ತಿಳಿದಿತ್ತು! ಎಂದು ನಾನು ಉತ್ತರಿಸಿದೆ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನಿ ತಂದೆ ಮತ್ತು ಭಾರತೀಯ ತಾಯಿಗೆ ಯುಕೆಯಲ್ಲಿ ಜನಿಸಿದ ಸಾಮಿ, 2001 ರಲ್ಲಿ ಭಾರತದಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರು ಮೊದಲು ಸಂದರ್ಶಕರ ವೀಸಾ ಮತ್ತು ದ್ವಿಪೌರತ್ವವನ್ನು (ಪಾಕಿಸ್ತಾನ ಮತ್ತು ಕೆನಡಾ) ಹೊಂದಿದ್ದರು. 2016 ರಲ್ಲಿ ಅವರು ಭಾರತೀಯ ಪ್ರಜೆಯಾಗುತ್ತಾರೆ. ಸಾಮಿ ಇತರರಂತೆ ಪಹಲ್ಗಾಮ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದು ಮಾನವೀಯತೆಯ ವಿರುದ್ಧದ ಭಯಾನಕ ಅಪರಾಧ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT