ಜನರಲ್ ಮನೋಜ್ ನರವಾಣೆ  
ದೇಶ

ಯುದ್ಧ ರೋಮ್ಯಾಂಟಿಕ್, ಬಾಲಿವುಡ್ ಸಿನಿಮಾ ಅಲ್ಲ; ಕದನ ವಿರಾಮ ಒಪ್ಪಂದ ಪ್ರಶ್ನಿಸುವವರಿಗೆ ಮಾಜಿ ಸೇನಾ ಮುಖ್ಯಸ್ಥ ಖಡಕ್ ಸಂದೇಶ!

ಆಪರೇಷನ್ ಸಿಂಧೂರದಿಂದ ಹಿಡಿದು ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಪ್ರದೇಶ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲಿನ ದಾಳಿ, ತದನಂತರದ ನಾಲ್ಕು ದಿನಗಳ ತೀವ್ರ ವೈಮಾನಿಕ ಮತ್ತು ಕೆಲವು ಭೂ ದಾಳಿಗಳಿಂದ ಇದು ಪ್ರಕ್ಷುಬ್ಧ ವಾರವಾಗಿತ್ತು.

ಪುಣೆ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವನ್ನು ಜನರು ಪ್ರಶ್ನಿಸುತ್ತಿರುವುದರ ಬಗ್ಗೆ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಯುದ್ಧವು ರೋಮ್ಯಾಂಟಿಕ್ ಅಥವಾ ಬಾಲಿವುಡ್ ಸಿನಿಮಾವಲ್ಲ ಎಂದಿದ್ದಾರೆ. ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ನರವಾಣೆ, ಆದೇಶ ನೀಡಿದರೆ ಯುದ್ಧಕ್ಕೆ ಹೋಗುತ್ತೇನೆ, ಆದರೆ ರಾಜತಾಂತ್ರಿಕತೆಯು ನನ್ನ ಮೊದಲ ಆಯ್ಕೆಯಾಗಿದೆ ಎಂದು ಹೇಳಿದರು.

ಇದು ಮಿಲಿಟರಿ ಕಾರ್ಯಾಚರಣೆ ನಿಲುಗಡೆ ಮಾತ್ರ:

ಆಪರೇಷನ್ ಸಿಂಧೂರದಿಂದ ಹಿಡಿದು ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಪ್ರದೇಶ ಮತ್ತು ಪಾಕಿಸ್ತಾನದಲ್ಲಿನ ಉಗ್ರರ ಶಿಬಿರಗಳ ಮೇಲಿನ ದಾಳಿ, ತದನಂತರದ ನಾಲ್ಕು ದಿನಗಳ ತೀವ್ರ ವೈಮಾನಿಕ ಮತ್ತು ಕೆಲವು ಭೂ ದಾಳಿಗಳಿಂದ ಇದು ಪ್ರಕ್ಷುಬ್ಧ ವಾರವಾಗಿತ್ತು. ಇದು ಅಂತಿಮವಾಗಿ ಕದನ ವಿರಾಮ ಒಪ್ಪಂದ ಘೋಷಣೆಯೊಂದಿಗೆ ಮುಕ್ತಾಯವಾಯಿತು. ಇದು ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆ ಮಾತ್ರ ಎಂದು ನಾನು ಪುನರಾವರ್ತಿಸಲು ಬಯಸುತ್ತೇನೆ. ಕದನ ವಿರಾಮವಲ್ಲ. ಮುಂಬರುವ ದಿನಗಳು ಮತ್ತು ವಾರಗಳಲ್ಲಿ ವಿಷಯಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದನ್ನು ನೋಡಿ ಎಂದರು.

ಯುದ್ಧದ ನಷ್ಟ ತುಂಬಾ ದೊಡ್ಡದಾಗಿದೆ:

ಕದನ ವಿರಾಮ ಒಪ್ಪಂದ ಕುರಿತು ಹಲವು ಜನರು ಪ್ರಶ್ನೆಗಳನ್ನು ಎತ್ತಿದ್ದಾರೆ. ನೀವು ಯದ್ಧದ ನೈಜ ಅಂಕಿ ಅಂಶಗಳು, ವಿಶೇಷವಾಗಿ ಯುದ್ಧದ ವೆಚ್ಚವನ್ನು ಪರಿಗಣಿಸಿದರೆ ನಷ್ಟವು ತುಂಬಾ ದೊಡ್ಡದಾಗಿದೆ ಎಂಬುದು ನಿಮಗೆ ಮನವರಿಕೆಯಾಗುತ್ತದೆ. ನಮ್ಮಲ್ಲಿ ತಾಕತ್ತನ್ನು ಪಾಕಿಸ್ತಾನಕ್ಕೆ ಸಾಬೀತುಪಡಿಸಿದ್ದೇವೆ ಎಂದು ನಾನು ನಂಬಿದ್ದೇನೆ. ಉಗ್ರರ ಮೂಲಸೌಕರ್ಯಗಳ ಮೇಲೆ ಮಾತ್ರವಲ್ಲದೆ ಅವರ ವಾಯುನೆಲೆಗಳ ಮೇಲೂ ನಾವು ದಾಳಿ ನಡೆಸಿದ್ದೇವೆ. ಅದನ್ನು ಅರಿತು ಪಾಕಿಸ್ತಾನದ DGMO ಭಾರತದ DGMO ಗೆ ಕರೆ ಮಾಡಿ, ಅಂತಿಮವಾಗಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು

ಸಾಮಾಜಿಕ ಅಂಶವಿದೆ:

ಮೂರನೇಯದು ಸಾಮಾಜಿಕ ಅಂಶವಿದೆ. ನಾನು ಶಕ್ತಿ ಮತ್ತು ವಿನಾಶವನ್ನು ಪ್ರಸ್ತಾಪಿಸಿದೆ. ಆದರೆ ಈ ಸಾಮಾಜಿಕ ಭಾಗ ಪ್ರಾಣ ಕಳೆದುಕೊಂಡವರನ್ನು ಒಳಗೊಂಡಿದೆ. ಪೋಷಕರು ಅಥವಾ ಗಡಿ ಪ್ರದೇಶಗಳಲ್ಲಿ ಶೆಲ್ ದಾಳಿಯಲ್ಲಿ ಸಾಯುವ ಮಕ್ಕಳು. ಅಂತಹ ವಿನಾಶಕ್ಕೆ ಯಾರೂ ಕಾರಣವಾಗುವುದಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಎದುರಾಗುವ ಆಘಾತ ಮುಂದಿನ ಪೀಳಿಗೆಗೆ ತಲುಪುತ್ತದೆ. ಯುದ್ಧವು ರೊಮ್ಯಾಂಟಿಕ್ ಅಲ್ಲ. ಇದು ಬಾಲಿವುಡ್ ಸಿನಿಮಾವಲ್ಲ. ಇದು ತುಂಬಾ ಗಂಭೀರವಾದ ವ್ಯವಹಾರವಾಗಿದೆ. ಅದಕ್ಕಾಗಿಯೇ ನಮ್ಮ ಪ್ರಧಾನಿ ಇದು ಯುದ್ಧದ ಯುಗವಲ್ಲ ಎಂದು ಹೇಳಿದರು. ಯುದ್ಧವು ನಮ್ಮ ಮೇಲೆ ವಿವೇಚನೆಯಿಲ್ಲದವರಿಂದ ಬಲವಂತವಾಗಿ ಬಂದರೂ ನಾವು ಅದಕ್ಕೆ ಹುರಿದುಂಬಿಸಬಾರದು," ಎಂದು ಅವರು ಹೇಳಿದರು.

ಯುದ್ಧ ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ: ಆದರೂ, ನಾವು ಪೂರ್ಣ ಪ್ರಮಾಣದ ಯುದ್ಧಕ್ಕೆ ಏಕೆ ಹೋಗಲಿಲ್ಲ ಎಂದು ಜನರು ಕೇಳುತ್ತಿದ್ದಾರೆ. ಮಿಲಿಟರಿ ವ್ಯಕ್ತಿಯಾಗಿ, ಆದೇಶ ನೀಡಿದರೆ, ನಾನು ಯುದ್ಧಕ್ಕೆ ಹೋಗುತ್ತೇನೆ, ಆದರೆ ಅದು ನನ್ನ ಮೊದಲ ಆಯ್ಕೆಯಾಗಿರುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ನನ್ನ ಮೊದಲ ಆಯ್ಕೆಯಾಗಿರುತ್ತದೆ ಎಂದರು. ರಾಷ್ಟ್ರೀಯ ಭದ್ರತೆಯಲ್ಲಿ ನಾವೆಲ್ಲರೂ ಸಮಾನ ಪಾಲುದಾರರು. ನಾವು ದೇಶಗಳ ನಡುವೆ ಮಾತ್ರವಲ್ಲ, ನಮ್ಮ ನಡುವೆಯೇ, ಕುಟುಂಬಗಳಲ್ಲಿ ಅಥವಾ ರಾಜ್ಯಗಳು, ಪ್ರದೇಶಗಳು ಮತ್ತು ಸಮುದಾಯಗಳ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಹಿಂಸೆಯು ಉತ್ತರವಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT