ದೇಶ

ಪುರಿ ಸಮುದ್ರದಲ್ಲಿ ಮುಳುಗಿದ ಸ್ಪೀಡ್ ಬೋಟ್: ಸೌರವ್ ಗಂಗೂಲಿ ಸಹೋದರ, ಅತ್ತಿಗೆ ಸ್ವಲ್ಪದರಲ್ಲೆ ಪಾರು; Video

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸಹೋದರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಮತ್ತು ಪತ್ನಿ ಅರ್ಪಿತಾ ಸ್ವಲ್ಪದರಲ್ಲೆ ಪಾರಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸಹೋದರ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಮತ್ತು ಪತ್ನಿ ಅರ್ಪಿತಾ ಸ್ವಲ್ಪದರಲ್ಲೆ ಪಾರಾಗಿದ್ದಾರೆ. ಪುರಿ ಸಮುದ್ರದಲ್ಲಿ ಜಲ ಕ್ರೀಡೆಗಳನ್ನು ಆನಂದಿಸುತ್ತಿದ್ದಾಗ, ಸ್ನೇಹಾಶಿಶ್ ಮತ್ತು ಅರ್ಪಿತಾ ಅವರ ಸ್ಪೀಡ್ ಬೋಟ್ ಮಗುಚಿ ಬಿತ್ತು. ಆದರೆ ಇಬ್ಬರೂ ಪಾರಾಗಿದ್ದಾರೆ.

ಶನಿವಾರ ಸಂಜೆ ಸ್ನೇಹಶಿಶ್ ಮತ್ತು ಅರ್ಪಿತಾ ಸ್ಪೀಡ್ ಬೋಟ್ ಸವಾರಿಯನ್ನು ಆನಂದಿಸುತ್ತಿದ್ದಾಗ ಲೈಟ್‌ಹೌಸ್ ಬಳಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಅರ್ಪಿತಾ, 'ದೇವರ ದಯೆಯಿಂದ ನಾವು ಬದುಕುಳಿದೆವು' ಎಂದು ಹೇಳಿದರು. ನಾನು ಇನ್ನೂ ಆಘಾತದಲ್ಲಿದ್ದೇನೆ. ಇದು ಸಂಭವಿಸಬಾರದು ಮತ್ತು ಸಮುದ್ರದಲ್ಲಿ ಜಲ ಕ್ರೀಡೆಗಳನ್ನು ಸರಿಯಾಗಿ ವ್ಯವಸ್ಥೆ ಮಾಡಬೇಕು. ಕೋಲ್ಕತ್ತಾಗೆ ಹಿಂದಿರುಗಿದ ನಂತರ, ನಾನು ಪುರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಒಡಿಶಾದ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ, ದೊಡ್ಡ ಅಲೆಯ ಹೊಡೆತಕ್ಕೆ ಸಿಲುಕಿ ತನ್ನ ಬೋಟ್ ಮಗುಚಿಬಿದ್ದಿದ್ದು, ತಾನು ಮತ್ತು ತನ್ನ ಪತಿ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಮುದ್ರಕ್ಕೆ ಬಿದ್ದಿದ್ದೇವು ಎಂದು ಅವರು ಹೇಳಿದರು. ಅದೃಷ್ಟವಶಾತ್, ಜೀವರಕ್ಷಕರ ಸಕಾಲಿಕ ಕ್ರಮದಿಂದಾಗಿ ನಮ್ಮ ಜೀವಗಳು ಉಳಿದವು ಎಂದು ಅವರು ಹೇಳಿದರು. ದೊಡ್ಡ ಅಲೆಯ ಡಿಕ್ಕಿ ಹೊಡೆದ ನಂತರ 'ಸ್ಪೀಡ್ ಬೋಟ್' ಸಮತೋಲನ ಕಳೆದುಕೊಂಡು ಸಮುದ್ರದಲ್ಲಿ ಉರುಳಿತು ಎಂದು ಘಟನೆಯ ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ Operation Sindoor ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: IAF ಮುಖ್ಯಸ್ಥ

ಪ್ರಧಾನಿ ಮೋದಿ 'ಆಧುನಿಕ ರಾವಣ: ಶೀಘ್ರವೇ ಅವರ ಚಿನ್ನದ ಅರಮನೆ ಸುಟ್ಟು ಬೂದಿಯಾಗಲಿದೆ; ಉದಿತ್ ರಾಜ್

ಆಡಳಿತ ವೈಫಲ್ಯದ ಲಾಭ ಪಡೆಯಲೂ ವಿಫಲವಾಗಿರುವ ಪ್ರತಿಪಕ್ಷ ಬಿಜೆಪಿ (ನೇರ ನೋಟ)

ಲಡಾಖ್: ಪತಿಯ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ವಾಂಗ್ಚುಕ್ ಪತ್ನಿ ಗೀತಾಂಜಲಿ

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

SCROLL FOR NEXT