ತಾಜ್ ಮಹಲ್ 
ದೇಶ

ವೈಮಾನಿಕ ದಾಳಿಯಿಂದ ತಾಜ್ ಮಹಲ್ ರಕ್ಷಿಸಲು ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ

ಸಹಾಯಕ ಪೊಲೀಸ್ ಆಯುಕ್ತ(ತಾಜ್ ಸೆಕ್ಯುರಿಟಿ) ಸಯೀದ್ ಅರೀಬ್ ಅಹ್ಮದ್, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ದಿಕ್ಕಿನಿಂದ ಬರುವ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಲಖನೌ: ಆಪರೇಷನ್ ಸಿಂಧೂರ್ ನಂತರ ಭಾರತ-ಪಾಕ್ ಮಿಲಿಟರಿ ಮುಖಾಮುಖಿಯಾದ ನಂತರ, ರಾಷ್ಟ್ರೀಯ ಸ್ಮಾರಕಗಳಿಗೆ ಸಂಭಾವ್ಯ ಬೆದರಿಕೆಯನ್ನು ಗುರುತಿಸಿದ ಭದ್ರತಾ ಸಂಸ್ಥೆಗಳು, ಯುದ್ಧದ ಸಮಯದಲ್ಲಿ ಸಂಭವನೀಯ ವೈಮಾನಿಕ ದಾಳಿಯಿಂದ ರಕ್ಷಿಸಲು ಯುನೆಸ್ಕೋ ವಿಶ್ವ ಪರಂಪರೆಯ ತಾಣ, ಆಗ್ರಾದ ತಾಜ್ ಮಹಲ್‌ನಲ್ಲಿ ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಸಿವೆ.

ಜಿಲ್ಲಾ ಪೊಲೀಸ್ ಮೂಲಗಳ ಪ್ರಕಾರ, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಐತಿಹಾಸಿಕ ಸ್ಮಾರಕದ ಮುಖ್ಯ ಗುಮ್ಮಟದಿಂದ 500 ಮೀಟರ್ ಒಳಗೆ ಬರುವ ಯಾವುದೇ ವೈಮಾನಿಕ ದಾಳಿಯನ್ನು ತಟಸ್ಥಗೊಳಿಸುವ 'ಸಾಫ್ಟ್ ಕಿಲ್' ಸಾಮರ್ಥ್ಯ ಹೊಂದಿದೆ.

ಈ ತಿಂಗಳ ಆರಂಭದಲ್ಲಿ ಭಾರತ, ಪಾಕಿಸ್ತಾನದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿ ನಾಶಪಡಿಸಿತ್ತು. ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಮಿಲಿಟರಿ ಉದ್ವಿಗ್ನತೆ ಹೆಚ್ಚಿದ ನಂತರ ಈ ಬೆಳವಣಿಗೆ ನಡೆದಿದೆ.

ಭದ್ರತಾ ಪ್ರಧಾನ ಕಚೇರಿಯಿಂದ ಪೂರೈಸಲಾದ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಪ್ರಾಯೋಗಿಕ ಪರೀಕ್ಷೆಯ ಸಮಯದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಮತ್ತು ಪರಿಣಾಮಕಾರಿ ಪತ್ತೆ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಸಹಾಯಕ ಪೊಲೀಸ್ ಆಯುಕ್ತ(ತಾಜ್ ಸೆಕ್ಯುರಿಟಿ) ಸಯೀದ್ ಅರೀಬ್ ಅಹ್ಮದ್, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ದಿಕ್ಕಿನಿಂದ ಬರುವ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

"ಇದು ಡ್ರೋನ್‌ ಇರುವ ಸ್ಥಳವನ್ನು ಪತ್ತೆಹಚ್ಚುವುದಲ್ಲದೆ, ಅದರ ಮೂಲ ಬಿಂದುವನ್ನು ಸಹ ಗುರುತಿಸುತ್ತದೆ. ಸ್ಮಾರಕದ ಸುತ್ತಲೂ 500 ಮೀಟರ್ ತ್ರಿಜ್ಯವನ್ನು ಪ್ರವೇಶಿಸುವ ಡ್ರೋನ್‌ಗಳು ಸ್ವಯಂಚಾಲಿತವಾಗಿ ತಟಸ್ಥಗೊಳ್ಳುತ್ತವೆ" ಎಂದು ಅವರು ತಿಳಿಸಿದ್ದಾರೆ.

ತಾಜ್ ಮಹಲ್‌ನಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಈ ವ್ಯವಸ್ಥೆಯನ್ನು ಅಳವಡಿಸುವ ಮೊದಲು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಒಂದು ವಾರ ತರಬೇತಿ ನೀಡಲಾಗಿದೆ. ಆಗ್ರಾ ಪೊಲೀಸರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CISF) ಸ್ಮಾರಕ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ರಕ್ಷಣೆಗೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತವೆ. ತಾಜ್ ಮಹಲ್‌ನ 500 ಮೀಟರ್ ವ್ಯಾಪ್ತಿಯೊಳಗೆ ಡ್ರೋನ್‌ಗಳನ್ನು ಹಾರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO ಶೃಂಗಸಭೆ 2025: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿಕ ರಷ್ಯಾ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ, ತೀವ್ರ ಕುತೂಹಲ..!

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ‘ಚಾಮುಂಡೇಶ್ವರಿ ಚಲೋ’ ಹೋರಾಟ: ಸರ್ಕಾರಕ್ಕೆ BJP ಎಚ್ಚರಿಕೆ

ಜಾತ್ಯತೀತ-ಧರ್ಮಾತೀತ ಕರ್ನಾಟಕ ನಿರ್ಮಿಸಿದ ಕೀರ್ತಿ ಅರಸು ಸಮುದಾಯಕ್ಕೆ ಸಲ್ಲುತ್ತದೆ: DCM ಡಿಕೆ ಶಿವಕುಮಾರ್

SCROLL FOR NEXT