ಅಸ್ಸಾಂ ಬಿಜೆಪಿ ಸಚಿವ ಅಶೋಕ್ ಸಿಂಘಾಲ್ online desk
ದೇಶ

ಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ್ದೇಕೆ ಅಸ್ಸಾಂ ಬಿಜೆಪಿ ಸಚಿವ?: ಇದು ಅಶ್ಲೀಲ, ನಾಚಿಕೆಗೇಡಿನ ಪೋಸ್ಟ್- ಕಾಂಗ್ರೆಸ್ ಕೆಂಡ!

ಈ ಫೋಟೋ ಹಾಗೂ ಗೂಢಾರ್ಥದ ಬರಹ ತಕ್ಷಣಕ್ಕೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಕ್ರಮೇಣ ಅದರ ಅರ್ಥ ಬಹಿರಂಗವಾಗಿದ್ದು ಕಾಂಗ್ರೆಸ್ ನ್ನು ಕೆರಳುವಂತೆ ಮಾಡಿದೆ.

ಗುವಾಹಟಿ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಅಸ್ಸಾಂ ನ ಬಿಜೆಪಿ ಸಚಿವರೊಬ್ಬರು ಗೂಢಾರ್ಥ ಹೊಂದಿದ ಪೋಸ್ಟ್ ಒಂದನ್ನು ಸಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅಸ್ಸಾಂ ನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್ ಬಿಹಾರ ಚುನಾವಣೆಯಲ್ಲಿ ಎನ್ ಡಿ ಗೆ ಸಿಕ್ಕಿದ ಅಭೂತಪೂರ್ವ ಗೆಲುವನ್ನು ಸಂಭ್ರಮಿಸಲು cauliflower (ಹೂಕೋಸು) ಬೆಳೆಯ ಫೋಟೊ ಹಾಕಿ, "ಬಿಹಾರ ಗೋಬಿ ಕೃಷಿಯನ್ನು ಅನುಮೋದಿಸಿದೆ" ಎಂದು ಬರೆದಿದ್ದರು. ಈ ಫೋಟೋ ಹಾಗೂ ಗೂಢಾರ್ಥದ ಬರಹ ತಕ್ಷಣಕ್ಕೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಕ್ರಮೇಣ ಅದರ ಅರ್ಥ ಬಹಿರಂಗವಾಗಿದ್ದು ಕಾಂಗ್ರೆಸ್ ನ್ನು ಕೆರಳುವಂತೆ ಮಾಡಿದೆ. ಇದಷ್ಟೇ ಅಲ್ಲದೇ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುವವರ ಕೆಂಗಣ್ಣಿಗೆ ಗುರಿಯಾಗಿದೆ.

ಹೂಕೋಸಿನ ಫೋಟೊ ಹಾಕಿದ್ದೇಕೆ ಸಚಿವ?

ಬಿಹಾರದ ಕರಾಳ ಅಧ್ಯಾಯಗಳಲ್ಲಿ 1989 ರಲ್ಲಿ ಸಂಭವಿಸಿದ ಭಾಗ್ಲಾಪುರ ನರಮೇಧ, ಹಿಂಸಾಚಾರವೂ ಒಂದು. ಆ ಸಂದರ್ಭದಲ್ಲಿ ಅಸಂಖ್ಯಾತ ಮುಸ್ಲಿಮರನ್ನು ಹತ್ಯೆ ಮಾಡಿ ಕೃಷಿ ಭೂಮಿಯಲ್ಲಿ ಹೂತು ಅದರ ಮೇಲೆ ಹೂಕೋಸು ಬೆಳೆಯನ್ನು ಹಾಕಲಾಗಿತ್ತು.

ಇದನ್ನೇ ಬಿಹಾರದಲ್ಲಿ ಎನ್ ಡಿಎ ಗೆಲುವಿಗೆ ತಳುಕು ಹಾಕಿರುವ ಅಸ್ಸಾಂ ಸಚಿವ ಬಿಹಾರ ಹೂಕೋಸು ಬೆಳೆಯನ್ನು ಅನುಮೋದಿಸಿದೆ ಎಂದು ತಮ್ಮ ಪೋಸ್ಟ್ ಮೂಲಕ ಹೇಳಿದ್ದರು.

"ಗೋಬಿ (ಹೂಕೋಸು) ಕೃಷಿ"ಯು 1989 ರ ಭಾಗಲ್ಪುರ ಹತ್ಯಾಕಾಂಡವನ್ನು ನೆನಪಿಸುತ್ತದೆ, ಇದರಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಕೆಲವು ತನಿಖೆಗಳು ಅಂದಿನ ನರಮೇಧದಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 2,000 ಮೀರಿರಬಹುದು ಎಂದು ಸೂಚಿಸುತ್ತವೆ. ಲೋಗೇನ್ ಗ್ರಾಮದಲ್ಲಿ ಈ ನರಮೇಧ ನಡೆದಿತ್ತು. 116 ಮುಸ್ಲಿಮರ ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿತ್ತು, ಅದರ ಮೇಲೆ ಹತ್ಯೆಗಳನ್ನು ಮರೆಮಾಡಲು ಹೂಕೋಸುಗಳನ್ನು ನೆಡಲಾಗಿತ್ತು. ಪೊಲೀಸರು ನಂತರ ಶವಗಳನ್ನು ಪತ್ತೆ ಮಾಡಿದ್ದರು. ಅಂದಿನಿಂದ ಈ ಚಿತ್ರಣವನ್ನು ಸಮಕಾಲೀನ ಬಲಪಂಥೀಯ ಡಿಜಿಟಲ್ ಸ್ಥಳಗಳಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನೆಯ ರೂಪವಾಗಿ ಅಳವಡಿಸಿಕೊಳ್ಳಲಾಗಿದೆ," ಎಂದು ಡಯಾಸ್ಪೊರಾ ಇನ್ ಆಕ್ಷನ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಡೆಮಾಕ್ರಸಿ X ನಲ್ಲಿ ಪೋಸ್ಟ್ ಮಾಡಿದೆ.

ಆರಂಭಿಕ ಪೋಸ್ಟ್ ಮಾಡಿದ ಕೆಲವು ಗಂಟೆಗಳ ನಂತರ, ಅಸ್ಸಾಂ ಸಚಿವರು ಬಿಹಾರದ ದೊಡ್ಡ ಗೆಲುವಿಗೆ ಅಮಿತ್ ಶಾ ಅವರನ್ನು ಶ್ಲಾಘಿಸಿದರು ಮತ್ತು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದರು. ಅವುಗಳಲ್ಲಿ ಒಂದು ಸಾಮಾಜಿಕ ಎಂಜಿನಿಯರಿಂಗ್ ಮತ್ತು ಸಾಂಸ್ಕೃತಿಕ ಸಂಪರ್ಕವಾಗಿದೆ.

"ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಅವರು ಸಮುದಾಯ ಸಂಪರ್ಕ, ನಾರಿ ಶಕ್ತಿ ಮತ್ತು ಯುವ ಶಕ್ತಿಯ ಸಬಲೀಕರಣ ಮತ್ತು ಬಲವಾದ ಸಾಂಸ್ಕೃತಿಕ ನಿರೂಪಣೆಯ ಮೂಲಕ ಎನ್‌ಡಿಎಯ ಸಾಮಾಜಿಕ ನೆಲೆಯನ್ನು ವಿಸ್ತರಿಸಿದ್ದಾರೆ" ಎಂದು ಅಸ್ಸಾಂ ಸಚಿವರು ಹೇಳಿದರು.

ಹೂಕೋಸು ಪೋಸ್ಟ್‌ಗಾಗಿ ಬಿಜೆಪಿ ನಾಯಕನನ್ನು ಜನರು ಟೀಕಿಸುತ್ತಿದ್ದಾರೆ ಮತ್ತು ಆಕ್ರೋಶದ ನಡುವೆಯೂ, ಅವರು ಅದನ್ನು ಅಳಿಸಿಲ್ಲ ಅಥವಾ ಬದಲಾಯಿಸಿಲ್ಲ.

ಬಿಜೆಪಿ ನಾಯಕನ ಮೇಲೆ ವಾಗ್ದಾಳಿ ಮಾಡಿದ ಲೋಕಸಭೆಯ ಉಪನಾಯಕ ಕಾಂಗ್ರೆಸ್‌ನ ಗೌರವ್ ಗೊಗೊಯ್, ಇದು "ಅಶ್ಲೀಲ ಮತ್ತು ನಾಚಿಕೆಗೇಡಿನ" ಪೋಸ್ಟ್ ಎಂದು ಹೇಳಿದ್ದಾರೆ.

"ಬಿಹಾರ ಚುನಾವಣಾ ಫಲಿತಾಂಶಗಳ ನಂತರ ಅಸ್ಸಾಂನ ಹಾಲಿ ಕ್ಯಾಬಿನೆಟ್ ಸಚಿವರೊಬ್ಬರು "ಗೋಬಿ ಕೃಷಿ" ಚಿತ್ರಣವನ್ನು ಬಳಸಿರುವುದು ರಾಜಕೀಯ ಚರ್ಚೆಯಲ್ಲಿ ಆಘಾತಕಾರಿ ಹೊಸ ಕೀಳು ಮಟ್ಟವನ್ನು ಸೂಚಿಸುತ್ತದೆ. ಇದು ಅಶ್ಲೀಲ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಈ ಚಿತ್ರವು 1989 ರ ಲೋಗೇನ್ ಹತ್ಯಾಕಾಂಡದೊಂದಿಗೆ ವ್ಯಾಪಕವಾಗಿ ಸಂಬಂಧಿಸಿದೆ, ಅಲ್ಲಿ ಭಾಗಲ್ಪುರ್ ಹಿಂಸಾಚಾರದ ಸಮಯದಲ್ಲಿ 116 ಮುಸ್ಲಿಮರು ಕೊಲ್ಲಲ್ಪಟ್ಟರು ಮತ್ತು ಅವರ ಶವಗಳನ್ನು ಹೂಕೋಸು ತೋಟಗಳ ಅಡಿಯಲ್ಲಿ ಮರೆಮಾಡಲಾಯಿತು" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

"ಈ ರೀತಿಯ ದುರಂತವನ್ನು ಪ್ರಚೋದಿಸುವುದು ಕೆಲವರು ಸಾರ್ವಜನಿಕ ಜೀವನದಲ್ಲಿ ಎಷ್ಟು ಕೆಳಮಟ್ಟಕ್ಕೆ ಇಳಿಯಲು ಸಿದ್ಧರಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಮನಸ್ಥಿತಿಯನ್ನು ಅವರ ಬಾಸ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಚಾರ ಮಾಡುತ್ತಾರೆ. ಈ ಮುಖ್ಯಮಂತ್ರಿಗೆ ಭಾರತೀಯ ಅಲ್ಪಸಂಖ್ಯಾತರ ಬಗ್ಗೆ ದ್ವೇಷವಿದೆ. ಅಸ್ಸಾಂ ಎಂದರೆ ಇದಲ್ಲ. ಅಸ್ಸಾಂ ಮಹಾಪುರುಷ ಶಂಕರದೇವ್, ಲಚಿತ್ ಬೋರ್ಫುಕನ್ ಮತ್ತು ಅಜಾನ್ ಪಿರ್ ಅವರ ನಾಡು. ಮತ್ತು ಮುಂದಿನ ವರ್ಷ ಅಸ್ಸಾಂನ ಜನರು ದ್ವೇಷ ಮತ್ತು ದುರಾಸೆಯ ಆಳ್ವಿಕೆಯನ್ನು ಕೊನೆಗೊಳಿಸುತ್ತಾರೆ" ಎಂದು ಸಂಸತ್ತಿನಲ್ಲಿ ಜೋರ್ಹತ್ ನ್ನು ಪ್ರತಿನಿಧಿಸುವ ಗೊಗೊಯ್ ಹೇಳಿದ್ದಾರೆ. ಬಿಹಾರದ ಕಿಷ್ಣಗಂಜ್‌ನ ಕಾಂಗ್ರೆಸ್ ಸಂಸದ ಡಾ. ಮೊಹಮ್ಮದ್ ಜಾವೇದ್ ಕೂಡ ಬಿಜೆಪಿಯನ್ನು ಟೀಕಿಸಿದರು.

"ಬಿಜೆಪಿ/ಆರ್‌ಎಸ್‌ಎಸ್ ಕಾರ್ಯಕರ್ತರು ತಮ್ಮ ಪ್ರಮುಖ ಮತದಾರರಿಗೆ ನೀಡಲು ಒಂದೇ ಒಂದು ವಿಷಯವನ್ನು ಹೊಂದಿದ್ದಾರೆ! ಅದು ಮುಸ್ಲಿಂ ದ್ವೇಷ," ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಸಂಜಯ್ ಹೆಗ್ಡೆ ಈ ಪೋಸ್ಟ್ "ಹಿಂಸೆಗೆ ಪ್ರಚೋದನೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Ballari banner row: ಯಾರ ಗನ್ ನಿಂದ ಗುಂಡು ಹಾರಿತ್ತು ಎಂದು ತನಿಖೆ ಮಾಡಲು ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

Bangladesh ವಿವಾದ: 'ಇತಿಹಾಸ ಮರೆತಿದ್ದಾರೆ.. ತಲೆ ತೆಗೆಯೋದ್ರಲ್ಲಿ ನಮ್ಮನ್ನು ಮೀರಿಸೋರಿಲ್ಲ'..: BJP ನಾಯಕ ಟೆಮ್ಜೆನ್

'ಮುಲ್ಲಾಗಳು ತೊಲಗಲಿ': 3 ವರ್ಷದ ಬಳಿಕ ಇರಾನ್‌ನಲ್ಲಿ ಮತ್ತೆ ಬೃಹತ್ ಪ್ರತಿಭಟನೆ; ಬೀದಿಗಿಳಿದ Gen Zಗಳು, ಗುಂಡೇಟಿಗೆ 7 ಮಂದಿ ಬಲಿ!

ಮಣಿಪುರ: 27 ಕಚ್ಚಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ ಪೊಲೀಸರು

SCROLL FOR NEXT