ಮೌಲಾನಾ ಮೊಹಮ್ಮದ್ ಅಸಿಮ್ ಖಾಸ್ಮಿ 
ದೇಶ

ದೆಹಲಿ ಸ್ಫೋಟ: ಉತ್ತರಾಖಂಡದ ಇಮಾಮ್‌ನನ್ನು ಬಂಧಿಸಿದ ದೆಹಲಿ ಪೊಲೀಸರು

ಶಂಕಿತ ಭಯೋತ್ಪಾದಕ ಉಮರ್ ಅವರ ಮೊಬೈಲ್ ಫೋನ್‌ನ ಕರೆಯ ವಿವರಗಳನ್ನು(ಸಿಡಿಆರ್) ಟ್ರ್ಯಾಕ್ ಮಾಡಿದ ಬಳಿಕ ಆರೋಪಿಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೌಲಾನಾ ಮೊಹಮ್ಮದ್ ಅವರನ್ನು ಬಂಧಿಸಿದೆ.

ಹಲ್ದ್ವಾನಿ: ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ತನಿಖೆ ಮಹತ್ವದ ತಿರುವು ಪಡೆದುಕೊಂಡಿದ್ದು, ಶನಿವಾರ ಬೆಳಗ್ಗೆ ಉತ್ತರಾಖಂಡದ ಧಾರ್ಮಿಕ ಮುಖಂಡ ಮೌಲಾನಾ ಮೊಹಮ್ಮದ್ ಅಸಿಮ್ ಖಾಸ್ಮಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ನಿರ್ಣಾಯಕ ಡೇಟಾವನ್ನು ಡೀಕ್ರಿಪ್ಟ್ ಮಾಡಿದ ನಂತರ ಶಂಕಿತ ಭಯೋತ್ಪಾದಕ ಉಮರ್ ಅವರ ಮೊಬೈಲ್ ಫೋನ್‌ನ ಕರೆಯ ವಿವರಗಳನ್ನು(ಸಿಡಿಆರ್) ಟ್ರ್ಯಾಕ್ ಮಾಡಿದ ಬಳಿಕ ಆರೋಪಿಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಮೌಲಾನಾ ಮೊಹಮ್ಮದ್ ಅವರನ್ನು ಬಂಧಿಸಿದೆ ಎಂದು ನಿಕಟ ಮೂಲಗಳು ತಿಳಿಸಿವೆ.

ಇಂದು ಬೆಳಗಿನ ಜಾವ 2:30 ರ ಸುಮಾರಿಗೆ, ವಿಶೇಷ ತಂಡವು ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾದ ಬನ್‌ಭೂಲ್‌ಪುರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಬಿಲಾಲಿ ಮಸೀದಿಯ ಇಮಾಮ್ ಮೌಲಾನಾ ಮೊಹಮ್ಮದ್ ಅಸಿಮ್ ಖಾಸ್ಮಿ ಅವರನ್ನು ಬಂಧಿಸಿ, ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ.

ಲೈನ್ ಸಂಖ್ಯೆ 8 ರಲ್ಲಿ ನಡೆಸಲಾದ ದಾಳಿಯು ತಕ್ಷಣವೇ ನಿವಾಸಿಗಳಲ್ಲಿ ಆತಂಕವನ್ನು ಉಂಟು ಮಾಡಿತು. ಧಾರ್ಮಿಕ ಮುಖಂಡನ ಬಂಧನದ ನಂತರ, ಬನ್‌ಭೂಲ್‌ಪುರ ಪ್ರದೇಶದಾದ್ಯಂತ ಭದ್ರತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಹಲವು ಪೊಲೀಸ್ ಠಾಣೆಗಳ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸ್ ಪಡೆಗಳು ಮಸೀದಿ ಮತ್ತು ಇಮಾಮ್ ಅವರ ನಿವಾಸದ ಸುತ್ತಲೂ ಭಾರೀ ಭದ್ರತೆ ಒದಗಿಸಿವೆ.

"ಶನಿವಾರ ಬೆಳಗ್ಗೆಯಿಂದ, ಬನ್‌ಭೂಲ್‌ಪುರದ ಪ್ರತಿಯೊಂದು ಮೂಲೆಯಲ್ಲೂ ಬಿಗಿ ಪೊಲೀಸ್ ಕಣ್ಗಾವಲು ಇಡಲಾಗಿದೆ" ಎಂದು ಸ್ಥಳೀಯ ಮೂಲಗಳು ವರದಿ ಮಾಡಿವೆ. ಅಧಿಕಾರಿಗಳು ಒಳಬರುವ ಮತ್ತು ಹೊರಹೋಗುವ ಎಲ್ಲಾ ವಾಹನಗಳ ಮೇಲೆ ಕಠಿಣ ತಪಾಸಣೆ ನಡೆಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ವಲಯದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಧಿಕಾರ ಹಂಚಿಕೆ ಬಿಕ್ಕಟ್ಟು: ಸಿದ್ದು ಜೊತೆಗಿನ ಬಜೆಟ್ ಪೂರ್ವ ಭಾವಿ ಸಭೆ ಕೈಬಿಟ್ಟು, ದೆಹಲಿಗೆ ಡಿಕೆಶಿ ದಿಢೀರ್ ಪ್ರಯಾಣ!

25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ-ಖಾತೆಗಳ ಹಂಚಿಕೆ: 15 ದಿನದಲ್ಲಿ ಬಿ ಖಾತೆಯಿಂದ 'ಎ'ಗೆ ವರ್ಗಾವಣೆ; ಡಿ.ಕೆ. ಶಿವಕುಮಾರ್‌

'JDS ಜೊತೆ ಮೈತ್ರಿ ನಂತರ ಕುಮಾರಸ್ವಾಮಿ ನನ್ನ ನಾಯಕನೆಂದು ಹೃದಯಪೂರ್ವಕವಾಗಿ ಒಪ್ಪಿಕೊಂಡೆ : ಆಶೀರ್ವಾದಕ್ಕಾಗಿ ಬಿಡದಿ ತೋಟದ ಮನೆಗೆ ಹೋಗಿದ್ದೆ'

ಪುಣೆ ಮೇಯರ್ ಆಗಿ ಬಿಜೆಪಿಯ ಮಂಜುಷಾ ನಾಗ್ಪುರ್ ಅವಿರೋಧವಾಗಿ ಆಯ್ಕೆ

ARAI ಸ್ಥಾವರಕ್ಕೆ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಲಭ್ಯ: ಎಚ್ ಡಿಕೆಗೆ ಎಂಬಿ ಪಾಟೀಲ್ ಪತ್ರ!

SCROLL FOR NEXT