ಕರೂರಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸುವ ಮೊದಲು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಮತ್ತು ನಟ ವಿಜಯ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ 
ದೇಶ

Karur stampede: ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ತಮಿಳುನಾಡಿನ ಜನರು ಈ ಘಟನೆಯಿಂದ ತೀವ್ರ ದುಃಖಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸುಳ್ಳು ಮಾಹಿತಿಯ ಹರಡುವಿಕೆ ಮತ್ತು ಸಾವಿನ ಸಂಖ್ಯೆ ಕಡಿಮೆ ತೋರಿಸಲು ಪ್ರಯತ್ನಿಸಿದ್ದರಿಂದ ಈ ಜಂಟಿ ಹೇಳಿಕೆಯಲ್ಲಿ ಆರೋಪಿಸಲಾಗಿದೆ.

ಚೆನ್ನೈ: ಕಳೆದ ಶನಿವಾರ ಕರೂರ್‌ನಲ್ಲಿ ನಡೆದ ರ್ಯಾಲಿಯಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ ಮತ್ತು ಟಿವಿಕೆ ಅಧ್ಯಕ್ಷ ವಿಜಯ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ 300 ಕ್ಕೂ ಹೆಚ್ಚು ಬರಹಗಾರರು, ಕವಿಗಳು, ಬುದ್ಧಿಜೀವಿಗಳು, ಕಾರ್ಯಕರ್ತರು ಮತ್ತು ಪತ್ರಕರ್ತರು ಜಂಟಿ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಹಿಂದಿನ ಘಟನೆಗಳು ಮತ್ತು ಅವುಗಳ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಕರೂರಿನಲ್ಲಿ ಭದ್ರತೆ ಮತ್ತು ಜಾರಿಯಲ್ಲಿನ ಸಂಭವನೀಯ ಲೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೂಡ ಹೇಳಿಕೆಯಲ್ಲಿ ಒತ್ತಾಯಿಸಲಾಗಿದೆ. ಇಂತಹ ದುರಂತಗಳನ್ನು ತಡೆಗಟ್ಟಲು ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂಬುದು ಹೇಳಿಕೆಯಲ್ಲಿನ ಒತ್ತಾಯವಾಗಿದೆ.

ತಮಿಳುನಾಡಿನ ಜನರು ಈ ಘಟನೆಯಿಂದ ತೀವ್ರ ದುಃಖಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸುಳ್ಳು ಮಾಹಿತಿಯ ಹರಡುವಿಕೆ ಮತ್ತು ಸಾವಿನ ಸಂಖ್ಯೆ ಕಡಿಮೆ ತೋರಿಸಲು ಪ್ರಯತ್ನಿಸಿದ್ದರಿಂದ ಈ ಜಂಟಿ ಹೇಳಿಕೆ ನೀಡಬೇಕಾಗಿ ಬಂದಿದೆ ಎಂದು ಸಹಿದಾರರು ಒಕ್ಕೊರಲಿನಿಂದ ಬರೆದು ಸಹಿ ಹಾಕಿದ್ದಾರೆ.

ವಿಜಯ್ ಅವರ ಕರೂರು ರ್ಯಾಲಿ ಕಾರ್ಯಕ್ರಮದ ವೀಡಿಯೊಗಳನ್ನು ನೋಡಿದಾಗ ಲಕ್ಷಾಂತರ ಜನರು ಸೇರಿದ್ದಲ್ಲಿ ಸಾಕಷ್ಟು ಆಹಾರ, ನೀರು ಅಥವಾ ಶೌಚಾಲಯ ಸೌಲಭ್ಯಗಳಿಲ್ಲದೆ ಜನರನ್ನು ಏಳು ಗಂಟೆಗಳಿಗಿಂತ ಹೆಚ್ಚು ಕಾಲ ಕಾಯುವಂತೆ ಮಾಡಲಾಗಿದೆ. ನಂತರ ವಿಜಯ್ ಅವರು ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಅವರ ಮುಖವನ್ನು ನೋಡಲು ಸಾಧ್ಯವಾಗದೆ ಅವರ ಪ್ರಚಾರ ವಾಹನವನ್ನು ಹಿಂಬಾಲಿಸಲು ಒತ್ತಾಯಿಸಲಾಗಿದೆ ಎಂದು ತೋರಿಸಲಾಗಿದೆ - ಇವು ಕಾಲ್ತುಳಿತ ಮತ್ತು ಸಾವುಗಳಿಗೆ ಕಾರಣವಾದ ಅಂಶಗಳು.

ಇಲ್ಲಿ ವಿಜಯ್ ಅವರದ್ದು ತಪ್ಪಿಲ್ಲ, ಅವರ ಬೆಂಬಲಿಗರು ಪಿತೂರಿ ಮಾಡಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮಣಿಪುರದಲ್ಲಿ ನಡೆದ ಗಲಭೆ ಅಥವಾ ಇತರ ಘಟನೆಗಳಿಗೆ ಸಂಸದರ ನಿಯೋಗವನ್ನು ಕಳುಹಿಸದೆ ಕರೂರಿಗೆ ಕಳುಹಿಸಿದ್ದಕ್ಕಾಗಿ ಟೀಕಿಸಿದ್ದಾರೆ. ನಿಯೋಗದ ಹೇಳಿಕೆಗಳು ಪಿತೂರಿ ಸಿದ್ಧಾಂತಗಳನ್ನು ಬಲಪಡಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯ್ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸಲು ಅಥವಾ ಅವರ ಬೆಂಬಲಿಗರನ್ನು ಭೇಟಿ ಮಾಡಲು ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಅವರು ಬಳಸಿದ ವಿಧಾನಗಳು ದೇಶದ ರಾಜಕೀಯ ಸಂಸ್ಕೃತಿ, ಸಾರ್ವಜನಿಕ ಜೀವನ ಮತ್ತು ವೈಯಕ್ತಿಕ ಘನತೆಗೆ ಸೂಕ್ತವಲ್ಲ.

ತಿರುಚಿ, ಅರಿಯಲೂರು, ನಾಗಪಟ್ಟಣಂ, ವಿಕ್ಕಿರವಂಡಿ ಮತ್ತು ಮಧುರೈನಲ್ಲಿ ವಿಜಯ್ ಅವರ ಹಿಂದಿನ ರ್ಯಾಲಿಗಳು ಕರೂರು ವಿಪತ್ತಿಗೆ ಮುನ್ಸೂಚನೆ ನೀಡಿದ್ದವು. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮೂಲಕ, ಸಾರ್ವಜನಿಕರನ್ನು ಬೆದರಿಸುವ ರೀತಿಯಲ್ಲಿ ಪ್ರಯಾಣಿಸುವ ಮೂಲಕ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಮೂಲಕ, ಮರಗಳು, ವಿದ್ಯುತ್ ಕಂಬಗಳು ಮತ್ತು ಹತ್ತಿರದ ಕಟ್ಟಡಗಳನ್ನು ಹತ್ತುವುದರ ಮೂಲಕ, ಪಕ್ಷದ ಕಾರ್ಯಕರ್ತರು ಜವಾಬ್ದಾರಿ, ನಿಯಂತ್ರಣ ಅಥವಾ ಸ್ವಯಂ ಶಿಸ್ತು ಇಲ್ಲದೆ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.

ವಿಜಯ್ ಅವರೇ ಆರಂಭದಲ್ಲಿ ತಮ್ಮ ಅಭಿಮಾನಿಗಳಿಗೆ ಬುದ್ದಿಮಾತು ಹೇಳಬೇಕಾಗಿತ್ತು. ಅವರನ್ನು ಸರಿಯಾದ ಮಾರ್ಗಕ್ಕೆ ತರುವಂತೆ ಸಲಹೆ ನೀಡಬೇಕಾಗಿತ್ತು. ವಿಜಯ್ ಅಂತಹ ಯಾವುದೇ ಉಪಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಅವರ ಕಣ್ಣ ಮುಂದೆಯೇ ವಿಪತ್ತು ತೆರೆದುಕೊಂಡರೂ, ವಿಜಯ್ ಪರಿಸ್ಥಿತಿಯನ್ನು ನಿಯಂತ್ರಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ ಮತ್ತು ಸ್ಥಳದಿಂದ ಹೊರಟುಹೋದರು. ಎರಡು ದಿನಗಳ ಮೌನದ ನಂತರ, ಅವರು ಪಿತೂರಿ ಸಿದ್ಧಾಂತಗಳಿಂದ ಬಲಪಡಿಸಲ್ಪಟ್ಟ ವೀಡಿಯೊವನ್ನು ಬಿಡುಗಡೆ ಮಾಡಿರುವುದು ಎಷ್ಟು ಸರಿ ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ವಿಡಿಯೋ ವಿವರಣೆಯಲ್ಲಿ ಅವರ ಕಾರಣದಿಂದಾಗಿ ಸಂಭವಿಸಿದ ಸಾವುಗಳಿಗೆ ಯಾವುದೇ ಪಶ್ಚಾತ್ತಾಪ ಅಥವಾ ನೈತಿಕ ಜವಾಬ್ದಾರಿ ಇಲ್ಲ. ಬದಲಿಗೆ ಸರ್ಕಾರವನ್ನು ದೂಷಿಸುವ ಮೂಲಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಅವರ ಗುಪ್ತ ಉದ್ದೇಶವನ್ನು ಬಹಿರಂಗಪಡಿಸುತ್ತಿದೆ.

ಕಲೆ ಮತ್ತು ಸಾಹಿತ್ಯವು ತುಳಿತಕ್ಕೊಳಗಾದ ಮನಸ್ಥಿತಿ, ಸ್ವಾತಂತ್ರ್ಯದ ವಿಚಾರಗಳ ವಿರುದ್ಧ ಸ್ವಾಭಿಮಾನವನ್ನು ಹುಟ್ಟುಹಾಕಬೇಕು ಮತ್ತು ಸಮಾಜವನ್ನು ಸುಧಾರಿಸಬೇಕು ಎಂದು ಅದು ಒತ್ತಿ ಹೇಳಿದೆ.

ಕೆಲವು ಪ್ರಮುಖ ಸಹಿ ಮಾಡಿದವರಲ್ಲಿ ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಚಂದ್ರು, ನಿವೃತ್ತ ಐಎಎಸ್ ಕಚೇರಿ ಎಂಜಿ ದೇವಸಹಾಯಂ, ಮಾನವ ಹಕ್ಕುಗಳ ಕಾರ್ಯಕರ್ತ ಹೆನ್ರಿ ತಿಫಗ್ನೆ, ಬರಹಗಾರರಾದ ವನ್ನದಾಸನ್, ಪೊನ್ನೀರನ್, ಕಲಾಪ್ರಿಯ, ಪೆರುಮಾಳ್ ಮುರುಗನ್, ಇಮಯಂ, ಬಾಮಾ, ಮತ್ತು ಕವಿಗಳಾದ ಯುಗಭಾರತಿ, ಸುಗೀರ್ತರಾಣಿ, ಕುಟ್ಟಿ ಇತರರು ಸೇರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಮೋದಿಯವರು ಅವಮಾನ ಸಹಿಸುವುದಿಲ್ಲ, ಅವರು ಬುದ್ಧಿವಂತ ನಾಯಕ, ತಲೆಬಾಗಿಕೊಂಡು ಹೋಗುವವರಲ್ಲ': US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು!

ರಾಜ್ಯಕ್ಕೆ 3,705 ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ..!

ಪೇಸ್‌ಮೇಕರ್‌ ಅಳವಡಿಕೆ ಯಶಸ್ವಿ: ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ, ಆಸ್ಪತ್ರೆಯಿಂದ ಡಿಸ್‌ಚಾರ್ಜ್

Karnataka Rains- ಬೆಂಗಳೂರು ಸೇರಿ ರಾಜ್ಯಾದ್ಯಂತ ಅ.9ರವರೆಗೆ ಮಳೆ

ರಾಹುಲ್ ಒಬ್ಬಂಟಿ ಅಲ್ಲ, ಅವರೊಂದಿಗೆ ಕೋಟ್ಯಾಂತರ ಕಾರ್ಯಕರ್ತರಿದ್ದಾರೆಂಬುದನ್ನು ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ: BJPಗೆ ಸಿಎಂ ಸಿದ್ದರಾಮಯ್ಯ

SCROLL FOR NEXT