ಸಾಂದರ್ಭಿಕ ಚಿತ್ರ 
ದೇಶ

ನಕ್ಸಲ್ ಪೀಡಿತ ಬಸ್ತಾರ್‌ನಲ್ಲಿ CRPF ನಿಂದ 10 ಸಾವಿರಕ್ಕೂ ಹೆಚ್ಚು ರೇಡಿಯೋ ಸೆಟ್‌ ವಿತರಣೆ; ಯಾಕೆ ಗೊತ್ತಾ?

ಈ ಪ್ರದೇಶದಲ್ಲಿ ಹಿಂಸಾತ್ಮಕ ಎಡಪಂಥೀಯ ಉಗ್ರವಾದ(ಎಲ್‌ಡಬ್ಲ್ಯೂಇ) ಕಡಿಮೆಯಾಗುತ್ತಿದೆ.

ನವದೆಹಲಿ/ಬಿಜಾಪುರ: ಛತ್ತೀಸ್‌ಗಢದ ಬಸ್ತಾರ್‌ನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಚಿಂತನೆಯನ್ನು ಹರಡಲು ಮತ್ತು ಸ್ಥಳೀಯರನ್ನು ಮಾವೋವಾದಿ ಸಿದ್ಧಾಂತದಿಂದ ದೂರವಿಡಲು ವಿಶೇಷ ಸಾರ್ವಜನಿಕ ಅಭಿಯಾನದ ಭಾಗವಾಗಿ ಸಿಆರ್‌ಪಿಎಫ್ 10,000 ಕ್ಕೂ ಹೆಚ್ಚು ರೇಡಿಯೋ ಸೆಟ್‌ಗಳನ್ನು ವಿತರಿಸಿದೆ. ಈ ಪ್ರದೇಶದಲ್ಲಿ ಹಿಂಸಾತ್ಮಕ ಎಡಪಂಥೀಯ ಉಗ್ರವಾದ(ಎಲ್‌ಡಬ್ಲ್ಯೂಇ) ಕಡಿಮೆಯಾಗುತ್ತಿದೆ.

ಗ್ರಾಮಗಳಲ್ಲಿ ನೂರಾರು ಸಣ್ಣ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ ನಂತರ ಅರೆಸೇನಾಪಡೆ ಇತ್ತೀಚೆಗೆ ಸುಮಾರು ನಾಲ್ಕು ತಿಂಗಳ ಕಾಲ ಈ ಅಭಿಯಾನ ನಡೆಸಿದೆ.

ಬಸ್ತಾರ್ ಪ್ರದೇಶದ ಏಳು ಜಿಲ್ಲೆಗಳಿಗೆ ವಿಶೇಷ ನಾಗರಿಕ ಕ್ರಿಯಾ ಕಾರ್ಯಕ್ರಮವನ್ನು ಈ ವರ್ಷದ ಆರಂಭದಲ್ಲಿ ಗೃಹ ಸಚಿವಾಲಯ(ಎಂಎಚ್‌ಎ) 1.62 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ ಪ್ರಾರಂಭಿಸಿತು ಎಂದು ಹಿರಿಯ ಅಧಿಕಾರಿಯೊಬ್ಬರು ದೆಹಲಿಯಲ್ಲಿ ಪಿಟಿಐಗೆ ತಿಳಿಸಿದ್ದಾರೆ.

ಬಿಜಾಪುರ ಜಿಲ್ಲೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಕಮಾಂಡರ್, ಈ ಪ್ರದೇಶದ ದೂರದ ಮತ್ತು ಒಳ ಪ್ರದೇಶಗಳಲ್ಲಿ ನಿಯೋಜಿಸಲಾದ ಅರೆಸೇನಾಪಡೆಯ 180 ತುಕಡಿಗಳು ಒಟ್ಟು 10,800 ರೇಡಿಯೋ ಸೆಟ್‌ಗಳನ್ನು ವಿತರಿಸಿವೆ ಎಂದು ಅವರು ಹೇಳಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಸುಮಾರು 54,000 ವ್ಯಕ್ತಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಪ್ರತಿ ಕುಟುಂಬವನ್ನು ಐದು ಸದಸ್ಯರ ಘಟಕವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

"ಸ್ಥಳೀಯರು, ಬುಡಕಟ್ಟು ಜನಾಂಗದವರು ಮತ್ತು ಗ್ರಾಮಸ್ಥರನ್ನು ದೇಶದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವುದು ಈ ಮೆಗಾ ರೇಡಿಯೋ ವಿತರಣಾ ಅಭಿಯಾನದ ಉದ್ದೇಶವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವ ಕ್ರಾಂತಿಯು ಇಲ್ಲ, ಕೇವಲ ''ಮಾಧ್ಯಮ ಸೃಷ್ಟಿ''; ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ

ಧರ್ಮಸ್ಥಳ ಬುರುಡೆ ಕೇಸ್; ಕೋರ್ಟ್ ಗೆ ತನಿಖಾ ವರದಿ ಸಲ್ಲಿಸಿದ SIT; 4 ಸಾವಿರ ಪುಟಗಳಲ್ಲಿ ಷಡ್ಯಂತ್ರ, ಸುಳ್ಳು ಸಾಕ್ಷ್ಯದ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗ!

ವಾಹನ ಸವಾರರಿಗೆ ಗುಡ್ ನ್ಯೂಸ್: ಮತ್ತೆ ಶೇ.50ರಷ್ಟು ಟ್ರಾಫಿಕ್ ದಂಡ ರಿಯಾಯಿತಿ ಘೋಷಣೆ, ಯಾವಾಗಿಂದ ಗೊತ್ತಾ?

ಬೆಂಗಳೂರು ಎಟಿಎಂ ದರೋಡೆ ಪ್ರಕರಣ: ತಿರುಪತಿಯಲ್ಲಿ ಇಬ್ಬರ ಬಂಧನ

ಜಪಾನ್ ಕುಸಿತ, ಜಾಗತಿಕ ಕುಸಿತಕ್ಕೂ ಕಾರಣವಾಗುತ್ತದೆ ಎಚ್ಚರ! (ಹಣಕ್ಲಾಸು)

SCROLL FOR NEXT