ಮಲ್ಲಿಕಾರ್ಜುನ್ ಖರ್ಗೆ 
ದೇಶ

ಸಿಜೆಐ ಮೇಲೆ ಶೂ ಎಸೆದ ವಕೀಲನ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ಖರ್ಗೆ ಒತ್ತಾಯ

ತನ್ನನ್ನು ತಾನು ವಕೀಲನೆಂದು ಕರೆದುಕೊಳ್ಳುವ ವ್ಯಕ್ತಿಗೆ ಅಂತಹ ಮನಸ್ಥಿತಿ ಇದ್ದರೆ ಅದು ಯಾವ ರೀತಿಯ ಸಿದ್ಧಾಂತ?

ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ (BR Gavai) ಮೇಲೆ ಶೂ ಎಸೆತ ಸಂವಿಧಾನದ ಮೇಲಿನ ದಾಳಿ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹೊಡೆತವಾಗಿದ್ದು ವಕೀಲ ರಾಕೇಶ್ ಕಿಶೋರ್ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳಂತೆ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನುಸ್ಮೃತಿ ಮತ್ತು ಸನಾತನ ಧರ್ಮದ ಹೆಸರಿನಲ್ಲಿ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸುವ ಮಟ್ಟಿಗೆ ವಕೀಲರು ಹೋಗಿದ್ದಕ್ಕೆ ಕಳವಳ ವ್ಯಕ್ತಪಡಿಸಿದರು. ಇದು ಅನಗತ್ಯ. ಭಾರತದ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಮಾಡಿದ ಅವಮಾನವನ್ನು ನಾನು ಖಂಡಿಸುತ್ತೇನೆ. ಸಿಜೆಐ ಮೇಲೆ ಶೂ ಎಸೆಯುವ ಮನಸ್ಥಿತಿಯನ್ನು ವಕೀಲರು ಹೊಂದಿದ್ದರೆ ಅದನ್ನು ಖಂಡಿಸುವುದಲ್ಲದೆ ಅವರನ್ನು ಅಮಾನತುಗೊಳಿಸಬೇಕು. ಮನುಸ್ಮೃತಿ ಮತ್ತು ಸನಾತನ ಧರ್ಮದ ಹೆಸರಿನಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಇನ್ನೂ ಉಲ್ಲಂಘಿಸುತ್ತಿರುವ ಮತ್ತು ಸಮಾಜದಲ್ಲಿ ಅನಗತ್ಯ ಉದ್ವಿಗ್ನತೆಯನ್ನು ಸೃಷ್ಟಿಸಲು ಮತ್ತು ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿರುವವರನ್ನು ಶಿಕ್ಷಿಸಬೇಕು ಎಂದು ಖರ್ಗೆ ಹೇಳಿದರು.

ತನ್ನನ್ನು ತಾನು ವಕೀಲನೆಂದು ಕರೆದುಕೊಳ್ಳುವ ವ್ಯಕ್ತಿಗೆ ಅಂತಹ ಮನಸ್ಥಿತಿ ಇದ್ದರೆ ಅದು ಯಾವ ರೀತಿಯ ಸಿದ್ಧಾಂತ? ಅದು ಎಲ್ಲಾ ಮನುಷ್ಯರನ್ನು ಮನುಷ್ಯರಂತೆ ಪರಿಗಣಿಸದ ಇಂದಿನ ಕಾಲದಲ್ಲಿ ಮಹಿಳೆಯರಿಗೆ ಅರ್ಹವಾದ ಸ್ಥಾನಮಾನವನ್ನು ವಂಚಿಸಲು ಪ್ರಯತ್ನಿಸುವ ಮತ್ತು ಸಾವಿರಾರು ವರ್ಷಗಳಿಂದ ದೇಶದ ಜನರನ್ನು ಗುಲಾಮಗಿರಿಯಲ್ಲಿಟ್ಟ ಧರ್ಮದಲ್ಲಿ ಬೇರೂರಿರುವ ಸಿದ್ಧಾಂತವಾಗಿದೆ. ಸ್ವಾತಂತ್ರ್ಯದ 78 ವರ್ಷಗಳ ನಂತರವೂ ಅಂತಹ ವಕೀಲರು ಈ ದೇಶವನ್ನು ಯಾವ ರೀತಿಯ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುತ್ತಾರೆ ಎಂಬುದನ್ನು ನೀವು ನೋಡಬಹುದು ಎಂದು ಖರ್ಗೆ ವಿಷಾದ ವ್ಯಕ್ತಪಡಿಸಿದರು.

ಮನುಸ್ಮೃತಿ ಮತ್ತು ಸನಾತನ ಧರ್ಮದ ಹೆಸರಿನಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದನ್ನು ಮುಂದುವರಿಸುವ ಮತ್ತು ಸಮಾಜದಲ್ಲಿ ಅನಗತ್ಯ ಉದ್ವಿಗ್ನತೆಯನ್ನು ಹರಡಲು ಮತ್ತು ಶಾಂತಿ ಕದಡಲು ಪ್ರಯತ್ನಿಸುವವರನ್ನು ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರಗತಿಪರ ಮನಸ್ಥಿತಿ ಹೊಂದಿರುವ ಜನರು ಹಳತಾದ ಸಿದ್ಧಾಂತಗಳನ್ನು ತಿರಸ್ಕರಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡು ದೇಶವನ್ನು ಮುನ್ನಡೆಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT