ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ ಭೇಟಿ online desk
ದೇಶ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ವ್ಯಾಪಾರ ಮತ್ತು ಸುಂಕ ವಿವಾದಗಳಿಂದ ಭಾರತ-ಅಮೆರಿಕ ಸಂಬಂಧವನ್ನು ಮರುಸಂಘಟಿಸುವ ಗುರಿಯನ್ನು ಹೊಂದಿರುವ ಭೇಟಿ ಇದಾಗಿದೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ಭಾರತಕ್ಕೆ ಅಮೆರಿಕದ ನಿಯೋಜಿಸಿರುವ ರಾಯಭಾರಿ ಸೆರ್ಗಿಯೊ ಗೋರ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ವ್ಯಾಪಾರ ಮತ್ತು ಸುಂಕ ವಿವಾದಗಳಿಂದ ಭಾರತ-ಅಮೆರಿಕ ಸಂಬಂಧವನ್ನು ಮರುಸಂಘಟಿಸುವ ಗುರಿಯನ್ನು ಹೊಂದಿರುವ ಭೇಟಿ ಇದಾಗಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ವರ್ಷದ ಆರಂಭದಲ್ಲಿ ಗೋರ್ ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಲಿದ್ದು, ಅದಕ್ಕೂ ಮುಂಚಿತವಾಗಿ ಪ್ರಧಾನಿ ಮೋದಿ ಅವರೊಂದಿಗಿನ ಈ ಸಭೆಯು ಒಂದು ಪ್ರಮುಖ ರಾಜತಾಂತ್ರಿಕ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

“ಭಾರತಕ್ಕೆ ಅಮೆರಿಕದ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಅವರನ್ನು ಭೇಟಿ ಮಾಡಿರುವುದು ಸಂತೋಷವಾಗಿದೆ. ಅವರ ಅಧಿಕಾರಾವಧಿಯು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಮೋದಿ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಾಂಕೇತಿಕ ಸೂಚಕವಾಗಿ, ಗೋರ್ ಈ ವರ್ಷದ ಆರಂಭದಲ್ಲಿ ಶ್ವೇತಭವನದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಿಂದ ಸಹಿ ಮಾಡಿದ ಛಾಯಾಚಿತ್ರವನ್ನು ಮೋದಿಗೆ ನೀಡಿದರು. ಇದರಲ್ಲಿ “ಶ್ರೀ ಪ್ರಧಾನಿ, ನೀವು ಉತ್ತಮರು.” ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೈಬರಹದ ಸಂದೇಶವಿದೆ

ನಿಯೋಜಿತ ರಾಯಭಾರಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಚರ್ಚೆಗಳು ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಹಂಚಿಕೆಯ ಆದ್ಯತೆಗಳನ್ನು ಬಲಪಡಿಸುವ ಮೇಲೆ ಕೇಂದ್ರೀಕೃತವಾಗಿವೆ ಎಂದು ಮೂಲಗಳು ವಿವರಿಸಿವೆ.

"ಭಾರತ-ಅಮೆರಿಕ ಸಂಬಂಧ ಮತ್ತು ಅದರ ಜಾಗತಿಕ ಮಹತ್ವವನ್ನು ಚರ್ಚಿಸಲಾಗಿದೆ. ಅವರ ಹೊಸ ಜವಾಬ್ದಾರಿಗೆ ಶುಭ ಹಾರೈಸುತ್ತೇನೆ" ಎಂದು ಜೈಶಂಕರ್ X ನಲ್ಲಿ ಬರೆದಿದ್ದಾರೆ.

ಗೋರ್ ಅವರ ಭೇಟಿ ದ್ವಿಪಕ್ಷೀಯ ಸಂಬಂಧಗಳಲ್ಲಿನ ಸೂಕ್ಷ್ಮ ಸಮಯದಲ್ಲಿ ಬಂದಿದೆ. ಟ್ರಂಪ್ ಆಡಳಿತದಲ್ಲಿ ಅಮೆರಿಕದ ಸುಂಕಗಳಿಂದ ಉಂಟಾದ ವ್ಯಾಪಾರ ಉದ್ವಿಗ್ನತೆಗಳು, ರಷ್ಯಾದ ತೈಲ ಖರೀದಿಗೆ ಪ್ರಮುಖ ಭಾರತೀಯ ಸರಕುಗಳ ಮೇಲಿನ ದಂಡನಾತ್ಮಕ ಸುಂಕಗಳು ಸೇರಿದಂತೆ ಇತ್ತೀಚಿನ ಹಲವು ಬೆಳವಣಿಗಗಳ ಪರಿಣಾಮ ಭಾರತ- ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ಸುಮಾರು ಎರಡು ದಶಕಗಳಲ್ಲಿ ಹೆಚ್ಚು ಹದಗೆಟ್ಟಿದೆ.

ಆದಾಗ್ಯೂ, ರಾಜತಾಂತ್ರಿಕ ಮಾರ್ಗಗಳು ಸಕ್ರಿಯವಾಗಿವೆ. ಮೋದಿ ಮತ್ತು ಟ್ರಂಪ್ ನಡುವಿನ ಇತ್ತೀಚಿನ ಫೋನ್ ಕರೆಯ ನಂತರ, ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸುವಲ್ಲಿ ಮತ್ತು ವ್ಯತ್ಯಾಸವನ್ನು ನಿವಾರಿಸಲು "ಹೆಚ್ಚು ಕಾರ್ಯತಂತ್ರದ ಸಂವಹನವನ್ನು ಹೊಂದುವಲ್ಲಿ" ಭಾರತೀಯ ಅಧಿಕಾರಿಗಳು "ಉತ್ತಮ ಪ್ರಗತಿ" ಸಾಧಿಸಿದ್ದಾರೆ ಎಂದು ಉಭಯ ದೇಶಗಳ ನಾಯಕರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo Crisis|ಒಂದೇ ದಿನ 400 ವಿಮಾನಗಳ ಹಾರಾಟ ರದ್ದು, ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ

3rd ODI: ಬರೊಬ್ಬರಿ 2 ವರ್ಷ, ಸತತ 20 ಪಂದ್ಯ.. ಕೊನೆಗೂ ಟಾಸ್ ಗೆದ್ದ ಭಾರತ, ಕುಖ್ಯಾತ ದಾಖಲೆಗೆ ಕೆಎಲ್ ರಾಹುಲ್ ಬ್ರೇಕ್..!

'360 ನ್ನೂ ಚೇಸ್ ಮಾಡಿದ್ದಾರೆ.. ತಪ್ಪುಗಳನ್ನು ಸರಿಪಡಿಸಿಕೊಂಡು ಆಡಬೇಕು': ತಂಡಕ್ಕೆ ಕೆಎಲ್ ರಾಹುಲ್ ಖಡಕ್ ಎಚ್ಚರಿಕೆ!

ಸಾರ್ವಜನಿಕವಾಗಿ ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ HDK: ಅಗೌರವ ಆಗಬಾರದೆಂಬ ದೃಷ್ಟಿಯಿಂದ ಹೇಳಿದ್ದೆ ಎಂದ ಕೇಂದ್ರ ಸಚಿವ

ಪುಟಿನ್ ಭೋಜನಕೂಟ ಭಾಗಿಯಾಗಿದ್ದಕ್ಕೆ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಕೆಂಗಣ್ಣು; ಪಕ್ಷ ತೊರೆಯುತ್ತಾರಾ ಮಾಜಿ ರಾಜತಂತ್ರಜ್ಞ?

SCROLL FOR NEXT