ಶಶಿ ತರೂರ್ ಮತ್ತು ಪ್ರಧಾನಿ ಮೋದಿ 
ದೇಶ

'ಕಾರ್ಯತಂತ್ರವೋ ಅಥವಾ ತಪ್ಪಿದ ಅವಕಾಶವೋ': ಗಾಜಾ ಶೃಂಗಸಭೆಗೆ ಕೆ.ವಿ ಸಿಂಗ್ ಪ್ರಾತಿನಿಧ್ಯ ಕುರಿತು ಶಶಿ ತರೂರ್ ಟೀಕೆ!

ಸೋಮವಾರ ಈಜಿಪ್ಟ್‌ನ ಕೆಂಪು ಸಮುದ್ರದ ರೆಸಾರ್ಟ್ ನಗರವಾದ ಶರ್ಮ್ ಎಲ್-ಶೇಖ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಪ್ರತಿನಿಧಿಸಿದ್ದಾರೆ.

ನವದೆಹಲಿ: ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ನಡೆಯುತ್ತಿರುವ ಗಾಜಾ ಶಾಂತಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಪರವಾಗಿ ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರನ್ನು ಕಳುಹಿಸಿರುವುದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಸಂಸದ ಶಶಿತರೂರ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು.. ಸೋಮವಾರ ಈಜಿಪ್ಟ್‌ನ ಕೆಂಪು ಸಮುದ್ರದ ರೆಸಾರ್ಟ್ ನಗರವಾದ ಶರ್ಮ್ ಎಲ್-ಶೇಖ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಪ್ರತಿನಿಧಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸುಮಾರು 20 ಇತರ ವಿಶ್ವ ನಾಯಕರು ಭಾಗವಹಿಸುವ ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಅವರ ವಿಶೇಷ ಪ್ರತಿನಿಧಿಯಾಗಿ ಸಿಂಗ್ ಅವರನ್ನು ನವದೆಹಲಿ ನಿಯೋಜಿಸಿದೆ.

ಇನ್ನು ಕೆವಿ ಸಿಂಗ್ ಅವರ ಪ್ರಾತಿನಿಧ್ಯವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದು, ಗಾಜಾ ಶಾಂತಿ ಶೃಂಗಸಭೆಯಲ್ಲಿ ಭಾರತದ ತುಲನಾತ್ಮಕವಾಗಿ ಕೆಳಮಟ್ಟದ ಪ್ರಾತಿನಿಧ್ಯವು ಹಲವಾರು ರಾಷ್ಟ್ರಗಳ ಮುಖ್ಯಸ್ಥರ ಉಪಸ್ಥಿತಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು ಟೀಕಿಸಿದ್ದಾರೆ. ಅಂತೆಯೇ ಈ ನಿರ್ಧಾರವು "ಕಾರ್ಯತಂತ್ರದ ಸಂಯಮ" ಅಥವಾ "ತಪ್ಪಿದ ಅವಕಾಶ"ವನ್ನು ಪ್ರತಿಬಿಂಬಿಸುತ್ತದೆಯೇ ಎಂದು ತರೂರ್ ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದ್ದರೂ, ನವದೆಹಲಿ ಅವರ ಬದಲಿಗೆ ಕೆ.ವಿ. ಸಿಂಗ್ ಅವರನ್ನು ನಿಯೋಜಿಸಲು ನಿರ್ಧರಿಸಿದೆ. ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸುಮಾರು ಇಪ್ಪತ್ತು ಇತರ ರಾಷ್ಟ್ರಗಳು ಮತ್ತು ಸರ್ಕಾರದ ಮುಖ್ಯಸ್ಥರು ಸೇರಿದಂತೆ ಹಲವಾರು ಉನ್ನತ ಶ್ರೇಣಿಯ ಜಾಗತಿಕ ಗಣ್ಯರು ಭಾಗವಹಿಸುತ್ತಿದ್ದಾರೆ.

ಭಾರತದ ಪ್ರಾತಿನಿಧ್ಯದ ಬಗ್ಗೆ ಪ್ರತಿಕ್ರಿಯಿಸಿದ ತರೂರ್, "ಶಾರ್ಮ್ ಎಲ್-ಶೇಖ್ ಗಾಜಾ ಶಾಂತಿ ಶೃಂಗಸಭೆಯಲ್ಲಿ ರಾಜ್ಯ ಸಚಿವರ ಮಟ್ಟದಲ್ಲಿ ಭಾರತದ ಉಪಸ್ಥಿತಿಯು ಅಲ್ಲಿ ನೆರೆದಿದ್ದ ರಾಷ್ಟ್ರಗಳ ಮುಖ್ಯಸ್ಥರಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಇದು ಕಾರ್ಯತಂತ್ರದ ಸಂಯಮ ಅಥವಾ ತಪ್ಪಿದ ಅವಕಾಶವೇ? ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ತಮ್ಮ ಹೇಳಿಕೆಗೆ ಸ್ಪಷ್ಟನೆಯನ್ನೂ ನೀಡಿರುವ ತರೂರ್, 'ತಮ್ಮ ಹೇಳಿಕೆಗಳು ಸಿಂಗ್ ಅವರ ಸಾಮರ್ಥ್ಯದ ಪ್ರತಿಬಿಂಬವಲ್ಲ, ಬದಲಾಗಿ ಭಾರತದ ಆಯ್ಕೆಯ ಸಂಭಾವ್ಯ ಪರಿಣಾಮಗಳ ಮೇಲೆ.. ಎಂದು ಹೇಳಿದ್ದಾರೆ.

"ಉಪಸ್ಥಿತರಾಗಿರುವ ಗಣ್ಯರ ಸಮೂಹವನ್ನು ಗಮನಿಸಿದರೆ, ಭಾರತದ ಆಯ್ಕೆಯು ಕಾರ್ಯತಂತ್ರದ ಅಂತರಕ್ಕೆ ಆದ್ಯತೆ ನೀಡುವ ಸಂಕೇತವೆಂದು ಕಾಣಬಹುದು, ಅದನ್ನು ನಮ್ಮ ಹೇಳಿಕೆಗಳು ತಿಳಿಸುವುದಿಲ್ಲ. ಉನ್ನತ ಮಟ್ಟದಲ್ಲಿ ಪ್ರತಿನಿಧಿಸದ ಕಾರಣ, ಭಾರತವು ಪ್ರದೇಶದ ಭವಿಷ್ಯಕ್ಕೆ ನಿರ್ಣಾಯಕ ವಿಷಯಗಳ ಕುರಿತು ಚರ್ಚೆಗಳನ್ನು ಪರಿಣಾಮಕಾರಿಯಾಗಿ ಪ್ರಭಾವಿಸುವ ಸಾಮರ್ಥ್ಯವನ್ನು ಸೀಮಿತಗೊಳಿಸಿರಬಹುದು.

ಕೇವಲ ಪ್ರೋಟೋಕಾಲ್ ಪ್ರವೇಶದ ಕಾರಣಗಳಿಗಾಗಿ, ಪುನರ್ನಿರ್ಮಾಣ ಮತ್ತು ಪ್ರಾದೇಶಿಕ ಸ್ಥಿರತೆಯ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಭಾರತದ ಧ್ವನಿಯು ಹೊಂದಿರಬಹುದಾದ ತೂಕಕ್ಕಿಂತ ಕಡಿಮೆ ಇರಬಹುದು. ತನ್ನನ್ನು ತಾನು ಮರುರೂಪಿಸಿಕೊಳ್ಳುತ್ತಿರುವ ಪ್ರದೇಶದಲ್ಲಿ, ನಮ್ಮ ಸಾಪೇಕ್ಷ ಅನುಪಸ್ಥಿತಿಯು ಗೊಂದಲಮಯವಾಗಿದೆ" ಎಂದು ತರೂರ್ ಹೇಳಿದರು.

ಅಂದಹಾಗೆ ಕೆಂಪು ಸಮುದ್ರದ ರೆಸಾರ್ಟ್ ನಗರದಲ್ಲಿ ಆಯೋಜಿಸಲಾಗುತ್ತಿರುವ ಈ ಶೃಂಗಸಭೆಯು ಗಾಜಾದಲ್ಲಿ ಇತ್ತೀಚೆಗೆ ನಡೆದ ಕದನ ವಿರಾಮದ ನಂತರ ಬಂದಿದೆ ಮತ್ತು ಪುನರ್ನಿರ್ಮಾಣ ಮತ್ತು ದೀರ್ಘಕಾಲೀನ ಪ್ರಾದೇಶಿಕ ಸ್ಥಿರತೆಗಾಗಿ ಮಾರ್ಗಸೂಚಿಯನ್ನು ರೂಪಿಸುವ ನಿರೀಕ್ಷೆಯಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನದ ನಂತರ ಈ ಶೃಂಗಸಭೆ ನಡೆಯುತ್ತಿದೆ. ಕಳೆದ ವಾರ ಮಧ್ಯಸ್ಥಿಕೆ ವಹಿಸಿದ ಕದನ ವಿರಾಮ ಶುಕ್ರವಾರ ಜಾರಿಗೆ ಬಂದಿದ್ದು, ಈ ಪ್ರದೇಶದಲ್ಲಿನ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT