ಸಾಂದರ್ಭಿಕ ಚಿತ್ರ 
ದೇಶ

ದೆಹಲಿಯಲ್ಲಿ ವಾಯು ಗುಣಮಟ್ಟ 'ತುಂಬಾ ಕಳಪೆ' ಮಟ್ಟಕ್ಕೆ ಇಳಿಕೆ

ಹಲವಾರು ದಿನಗಳಿಂದ "ಕಳಪೆ" ವರ್ಗದಲ್ಲಿದ್ದ ಗಾಳಿಯ ಗುಣಮಟ್ಟ, ಈಗ ತುಂಬಾ ಕಳಪೆ ಮಟ್ಟಕ್ಕೆ ಕುಸಿದಿದೆ.

ನವದೆಹಲಿ: ದೀಪಾವಳಿ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಬೆಳಗ್ಗೆ ಮತ್ತೊಮ್ಮೆ ದಟ್ಟವಾದ ಮಂಜು ಆವೃತವಾಗಿದ್ದು, ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ.

ಹಲವಾರು ದಿನಗಳಿಂದ "ಕಳಪೆ" ವರ್ಗದಲ್ಲಿದ್ದ ಗಾಳಿಯ ಗುಣಮಟ್ಟ, ಈಗ ತುಂಬಾ ಕಳಪೆ ಮಟ್ಟಕ್ಕೆ ಕುಸಿದಿದೆ. ಮಾಲಿನ್ಯಕಾರಕಗಳು ದಟ್ಟವಾದ ಮಂಜು ಮತ್ತು ಗಾಳಿಯಲ್ಲಿ ಸಿಲುಕಿಕೊಂಡಿದ್ದರಿಂದ ನಗರದ ಗಾಳಿಯ ಗುಣಮಟ್ಟ "ತುಂಬಾ ಕಳಪೆ"ಯಾಗಿದೆ.

ಇಂದು ಬೆಳಗ್ಗೆ 8 ಗಂಟೆಗೆ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ(AQI) 357ಕ್ಕೆ ತಲುಪಿದ್ದು, ಇದು ನಿನ್ನೆ 279 ರಷ್ಟಿತ್ತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಆನಂದ್ ವಿಹಾರ್ ನಲ್ಲಿ 408 AQI ಮತ್ತು ವಿವೇಕ್ ವಿಹಾರ್ ನಲ್ಲಿ 415 ದಾಖಲಾಗಿದ್ದು, "ಗಂಭೀರ" ಎಂದು ಪರಿಗಣಿಸಲಾಗಿದೆ.

ಇತರ ಪ್ರದೇಶಗಳು ಆತಂಕಕಾರಿ ಮಟ್ಟವನ್ನು ವರದಿ ಮಾಡಿದ್ದು, ಅಶೋಕ್ ವಿಹಾರ್(388), ಅಯಾ ನಗರ (331), ಬವಾನಾ (387), ಬುರಾರಿ ಕ್ರಾಸಿಂಗ್ (369), ದ್ವಾರಕಾ ಸೆಕ್ಟರ್ -8 (371), IGI ಏರ್‌ಪೋರ್ಟ್ T3 (320), ITO (370), ಲೋಧಿ ರಸ್ತೆ (334), ಮುಂಡ್ಕಾ (364), ನಜಾಫ್ (364), ನಜಾಫ್ (364), ನಜಾಫ್ (364), (368), ಪತ್ಪರ್‌ಗಂಜ್ (386), ಆರ್‌ಕೆ ಪುರಂ (374) ಮತ್ತು ಸಿರಿ ಫೋರ್ಟ್ (381) - ಇವೆಲ್ಲವೂ "ಅತ್ಯಂತ ಕಳಪೆ" ವರ್ಗಕ್ಕೆ ಸೇರಿವೆ.

ದೆಹಲಿಯಲ್ಲಿ ವಾಯು ಗುಣಮಟ್ಟ ಅತಂತ್ಯ ಕಳಪೆಗಿಳಿದಿದ್ದು, ಸರ್ಕಾರ ಹವಾಮಾನವನ್ನು ಹತೋಟಿಗೆ ತರಲು ದೆಹಲಿಯ ಕೆಲವು ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿದೆ. ವಾರ್ಷಿಕ ವಿಷಕಾರಿ ಹೊಗೆಯ ಹೊದಿಕೆಯಿಂದ ಉಸಿರುಗಟ್ಟಿಸುತ್ತಿರುವ ರಾಷ್ಟ್ರ ರಾಜಧಾನಿ, ಮಳೆಗಾಗಿ ಕಾಯುತ್ತಿದೆ.

ಮಳೆಯಾದರೆ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆಯಾಗಬಹುದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT