ನವದೆಹಲಿ: ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಜನ್ಮದಿನ. ಆರ್ಎಸ್ಎಸ್ ತನ್ನ ಶತಮಾನೋತ್ಸವ ಆಚರಿಸುತ್ತಿರುವ ಇದೇ ವರ್ಷ ಭಾಗವತ್ ಅವರ 75ನೇ ಜನ್ಮದಿನವೂ ಆಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ಪೂಜನೀಯ ಸರಸಂಘಚಾಲಕ್ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ ಬರೆದಿದ್ದಾರೆ. ಭಾಗವತ್ರ ವ್ಯಕ್ತಿತ್ವದ ವೈಶಿಷ್ಟ್ಯವನ್ನು ಮೋದಿ ವರ್ಣಿಸಿದ್ದಾರೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ ಇಂದು ಸೆಪ್ಟೆಂಬರ್ 11. ಈ ದಿನ ನನಗೆ ಎರಡು ವ್ಯತಿರಿಕ್ತ ನೆನಪುಗಳು ಮರುಕಳಿಸುತ್ತವೆ. ಮೊದಲನೆಯದು, 1893ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಶಿಕಾಗೋ ಭಾಷಣ ಮಾಡಿದ್ದು. ಅಮೆರಿಕದ ಸಹೋದರಿ ಮತ್ತು ಸಹೋದರರೇ ಎಂಬ ಕೆಲವೇ ಪದಗಳೊಂದಿಗೆ ಅವರು ಸಭಾಂಗಣದಲ್ಲಿದ್ದ ಸಾವಿರಾರು ಜನರ ಹೃದಯಗಳನ್ನು ಗೆದ್ದರು.
ಅವರು ಭಾರತದ ಅನಾದಿ ಆಧ್ಯಾತ್ಮಿಕ ಪರಂಪರೆಯನ್ನು ಮತ್ತು ಜಾಗತಿಕ ಭಾತೃತ್ವದ ಮಹತ್ವ ವನ್ನು ವಿಶ್ವವೇದಿಕೆಗೆ ಪರಿಚಯಿಸಿದರು. ಎರಡನೆಯ ನೆನಪು ಭಯಾನಕ 9/11 ದಾಳಿಯದ್ದು, ಭಯೋತ್ಪಾದನೆ ಮತ್ತು ಮೂಲಭೂತವಾದದ ಬೆದರಿಕೆಯಿಂದಾಗಿ ವಿವೇಕಾನಂದರ ತತ್ತ್ವವು ದಾಳಿಗೆ ಒಳಗಾಯಿತು.
ಈ ದಿನದ ಬಗ್ಗೆ ಇನ್ನೂ ಒಂದು ಗಮನಾರ್ಹ ವಿಷಯವಿದೆ. ವಸುಧೈವ ಕುಟುಂಬಕಂ ತತ್ತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆ, ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರು ಅವರನ್ನು ಗೌರವದಿಂದ ಪೂಜನೀಯ ಸರಸಂಘಚಾಲಕ್ ಎಂದು ಕರೆಯುತ್ತಾರೆ.
ಹೌದು, ನಾನು ಶ್ರೀ ಮೋಹನ್ ಭಾಗವತ್ಜೀ ಅವರ ಬಗ್ಗೆ ಮಾತನಾಡುತ್ತಿದ್ದೇನೆ. ಅವರ 75ನೇ ಹುಟ್ಟುಹಬ್ಬವು ಕಾಕತಾಳೀಯವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ಶತಮಾನೋ ತ್ಸವವನ್ನು ಆಚರಿಸುತ್ತಿರುವ ಇದೇ ವರ್ಷದಲ್ಲಿ ಬರುತ್ತದೆ. ನಾನು ಅವರಿಗೆ ನನ್ನ ಶುಭಾಶಯ ಗಳನ್ನು ಕೋರುತ್ತೇನೆ ಮತ್ತು ಅವರ ಸುದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸು ತ್ತೇನೆ.
ಮೋಹನ್ಜೀ ಅವರ ಕುಟುಂಬದೊಂದಿಗೆ ನನಗೆ ಗಾಢವಾದ ಬಾಂಧವ್ಯವಿದೆ. ಮೋಹನ್ಜೀ ಅವರ ತಂದೆ ದಿವಂಗತ ಮಧುಕರ್ ರಾವ್ ಭಾಗವತ್ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿತು. ನನ್ನ ಜ್ಯೋತಿಪುಂಜ್ ಪುಸ್ತಕದಲ್ಲಿ ಅವರ ಬಗ್ಗೆ ವಿವರವಾಗಿ ಬರೆದಿದ್ದೇನೆ. ಕಾನೂನು ಜಗತ್ತಿನೊಂದಿಗೆ ಒಡನಾಟದ ಜೊತೆಗೆ, ಅವರು ರಾಷ್ಟ್ರ ನಿರ್ಮಾಣಕ್ಕೂ ತಮ್ಮನ್ನು ಅರ್ಪಿಸಿಕೊಂಡರು.
ಗುಜರಾತಿನಾದ್ಯಂತ ಆರ್ಎಸ್ಎಸ್ ಅನ್ನು ಬಲಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ರಾಷ್ಟ್ರ ನಿರ್ಮಾಣದ ಬಗ್ಗೆ ಮಧುಕರ್ ರಾವ್ಜೀ ಅವರ ಉತ್ಸಾಹ ಎಷ್ಟು ಆಳವಾಗಿತ್ತೆಂದರೆ ಅವರ ಮಗ ಮೋಹನ್ಜೀ ಅವರನ್ನು ಭಾರತದ ಪುನರುತ್ಥಾನಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿತು. ಇದು ಸ್ಪರ್ಶಮಣಿ ಮಧುಕರ್ ರಾವ್ ಅವರು ಮೋಹನ್ ರಾವ್ ಅವರಲ್ಲಿ ಮತ್ತೊಂದು ಸ್ಪರ್ಶಮಣಿ ಯನ್ನು ಸೃಷ್ಟಿಸಿದಂತಿದೆ.
ಮೋಹನ್ಜೀ 1970ರ ದಶಕದ ಮಧ್ಯಭಾಗದಲ್ಲಿ ಪ್ರಚಾರಕರಾದರು. ‘ಪ್ರಚಾರಕ’ ಎಂಬ ಪದವನ್ನು ಕೇಳಿದ ತಕ್ಷಣ, ಅದು ಕೇವಲ ಪ್ರಚಾರ ಮಾಡುವ ಅಥವಾ ವಿಚಾರಗಳನ್ನು ಪ್ರಚುರಪಡಿಸುವ ವ್ಯಕ್ತಿ ಎಂದು ತಪ್ಪು ತಿಳಿಯಬಹುದು. ಆದರೆ, ಆರ್ಎಸ್ಎಸ್ ಕಾರ್ಯವೈಖರಿಯ ಬಗ್ಗೆ ತಿಳಿದಿರುವವರಿಗೆ ಪ್ರಚಾರಕ ಪರಂಪರೆಯು ಸಂಘಟನೆ ಕೆಲಸದ ಮೂಲವಾಗಿದೆ ಎಂದು ತಿಳಿದಿದೆ.
ಈ ವರ್ಷ, ಇನ್ನು ಕೆಲವೇ ದಿನಗಳಲ್ಲಿ, ಆರ್ ಎಸ್ ಎಸ್ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಲಿದೆ. ಈ ವರ್ಷ ವಿಜಯದಶಮಿ, ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಆರ್ ಎಸ್ ಎಸ್ ಶತಾಬ್ದಿ ಆಚರಣೆಗಳು ಒಂದೇ ದಿನ ಬರುತ್ತಿರುವುದು ಸಂತೋಷದ ವಿಷಯವಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಆರ್ ಎಸ್ ಎಸ್ ನೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಲಿದೆ ಮತ್ತು ಈ ಸಂದರ್ಭದಲ್ಲಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಮೋಹನ್ ಜೀ ಅವರಲ್ಲಿ ಅತ್ಯಂತ ತಿಳುವಳಿಕೆ ಮತ್ತು ಕಠಿಣ ಪರಿಶ್ರಮಿ ಸರಸಂಘಚಾಲಕ್ ಇದ್ದಾರೆ.
ನಾವು ಎಲ್ಲೆಗಳನ್ನು ಮೀರಿ ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿದಾಗ, ಅದು ಸಮಾಜದಲ್ಲಿ ನಂಬಿಕೆ, ಸಹೋದರತ್ವ ಮತ್ತು ಸಮಾನತೆಯನ್ನು ಬಲಪಡಿಸುತ್ತದೆ. ಇಂತಹ ವಸುಧೈವ ಕುಟುಂಬಕಂ ನ ಜ್ವಲಂತ ಉದಾಹರಣೆ ಮೋಹನ್ ಜೀ ಅವರು ಎಂದು ಹೇಳುವ ಮೂಲಕ ನಾನು ಈ ಬರಹವನ್ನು ಮುಕ್ತಾಯಗೊಳಿಸುತ್ತೇನೆ. ಭಾರತಮಾತೆಯ ಸೇವೆಯಲ್ಲಿ ಮೋಹನ್ ಜೀ ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಾನು ಮತ್ತೊಮ್ಮೆ ಹಾರೈಸುತ್ತೇನೆ.