ಪಾಟ್ನಾದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಹಾರ ಉಪಮುಖ್ಯಮಂತ್ರಿಗಳಾದ ವಿಜಯ್ ಕುಮಾರ್ ಸಿನ್ಹಾ ಮತ್ತು ಸಾಮ್ರಾಟ್ ಚೌಧರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ. 
ದೇಶ

ಬಿಹಾರ ಚುನಾವಣೆ: ಸೀಟು ಹಂಚಿಕೆ ಒಪ್ಪಂದಕ್ಕೆ ಮುನ್ನ ಮೋತಿಹಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ

ಇತ್ತೀಚೆಗೆ, ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಬಕ್ಸಾರ್ ಜಿಲ್ಲೆಯ ರಾಜ್‌ಪುರ (ಮೀಸಲು) ಕ್ಷೇತ್ರದಿಂದ ಸಂತೋಷ್ ಕುಮಾರ್ ನಿರಾಲಾ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು.

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿಲ್ಲವಾದರೂ, ಮೋತಿಹಾರಿ ವಿಧಾನಸಭಾ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪ್ರಮೋದ್ ಕುಮಾರ್ ಮತ್ತೊಮ್ಮೆ ಮೋತಿಹಾರಿ ಸ್ಥಾನದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಪೂರ್ವ ಚಂಪಾರಣ್‌ನ ಜಿಲ್ಲಾ ಕೇಂದ್ರವಾದ ಮೋತಿಹಾರಿಯಲ್ಲಿ ನಿನ್ನೆ ನಡೆದ ಎನ್‌ಡಿಎ ಕಾರ್ಯಕರ್ತರ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಕುಮಾರ್ ಅವರನ್ನು ಬೆಂಬಲಿಸುವಂತೆ ಈ ಸಂದರ್ಭದಲ್ಲಿ ಹಾಜರಿದ್ದ ನಾಯಕರು ಮತದಾರರಿಗೆ ಮನವಿ ಮಾಡಿದರು.

ಇತ್ತೀಚೆಗೆ, ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಬಕ್ಸಾರ್ ಜಿಲ್ಲೆಯ ರಾಜ್‌ಪುರ (ಮೀಸಲು) ಕ್ಷೇತ್ರದಿಂದ ಸಂತೋಷ್ ಕುಮಾರ್ ನಿರಾಲಾ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು. ಸಂತೋಷ್ ಕುಮಾರ್ ಈ ಹಿಂದೆ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಎನ್‌ಡಿಎ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ, ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SAR) ನ್ನು ಎತ್ತುವ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

ವಿರೋಧ ಪಕ್ಷವು ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಮತದಾರರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದಾಗ್ಯೂ, ಜನರಿಗೆ ವಿರೋಧ ಪಕ್ಷದ ಕಾರ್ಯಸೂಚಿ ತಿಳಿದಿದೆ. ಅವರಿಂದ ದಾರಿ ತಪ್ಪುವುದಿಲ್ಲ. ಜನರು ಎನ್‌ಡಿಎಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ನಂಬಿಕೆ ಇಟ್ಟಿದ್ದಾರೆ" ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಎನ್‌ಡಿಎಯನ್ನು ಬಲಪಡಿಸಲು ಪ್ರಮೋದ್ ಕುಮಾರ್ ಅವರ ಗೆಲುವನ್ನು ಖಚಿತಪಡಿಸಿಕೊಳ್ಳುವಂತೆ ಮತದಾರರನ್ನು ಒತ್ತಾಯಿಸಿದರು. ಪ್ರಮೋದ್ ಕುಮಾರ್ ಅವರ ಗೆಲುವು ಎನ್‌ಡಿಎಗೆ ನಿರ್ಣಾಯಕವಾಗಿದೆ. ಬಿಹಾರದ ಭವಿಷ್ಯ ಮತ್ತು ಅದರ ಅಭಿವೃದ್ಧಿಯನ್ನು ನಿರ್ಧರಿಸುವುದರಿಂದ ಪ್ರತಿಯೊಂದು ಸ್ಥಾನವೂ ಮುಖ್ಯವಾಗಿದೆ ಎಂದು ಅವರು ಹೇಳಿದರು.

63 ವರ್ಷದ ಪ್ರಮೋದ್ ಕುಮಾರ್ 2005 ರಿಂದ ಮೋತಿಹಾರಿಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಕಾನು (ಹಲ್ವಾಯಿ) ಸಮುದಾಯಕ್ಕೆ ಸೇರಿದವರು. ಶಾಸಕರಾಗಿದ್ದ ಅವಧಿಯಲ್ಲಿ, ಕಲ್ಯಾಣ ಉಪಕ್ರಮಗಳತ್ತ ಗಮನಹರಿಸಿದ್ದಾರೆ. ಅವರು ಎಲ್ಲರಿಗೂ ಸುಲಭವಾಗಿ ತಲುಪಬಹುದು ಎಂದರು.

ಬಿಜೆಪಿ, ಜೆಡಿ(ಯು), ಎಲ್‌ಜೆಪಿ(ಆರ್‌ವಿ) ಮತ್ತು ಎಚ್‌ಎಎಂ ಬಿಹಾರದಲ್ಲಿ ಎನ್‌ಡಿಎಯ ಪಾಲುದಾರ ಪಕ್ಷಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊನೆಗೂ ಪುಟಿದೆದ್ದ ಷೇರುಮಾರುಕಟ್ಟೆ: Sensex 1,186 ಅಂಕ ಏರಿಕೆ, 10 ಲಕ್ಷ ಕೋಟಿ ರೂ ಲಾಭ.. ಚೇತರಿಕೆಗೆ ಇದೇನಾ ಕಾರಣ?

ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff ಶಾಕ್: Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ, ಭಾರತಕ್ಕೂ ತಟ್ಟಿದ ಬಿಸಿ

Census 2027: ದೇಶದಲ್ಲಿ ರಾಷ್ಟ್ರೀಯ ಜನಗಣತಿ ಆರಂಭ: ಇದು ಯಾಕೆ ಮುಖ್ಯ ಗೊತ್ತಾ?

Hormuz ಜಲಸಂಧಿಗಾಗಿ ಯುದ್ಧಕ್ಕೆ ಸೌದಿ, ಯುಎಇ ಸಜ್ಜು; ಅಮೆರಿಕ ಜೊತೆ ಇರಾನ್ ವಿರುದ್ಧ ಗಲ್ಫ್ ರಾಷ್ಟ್ರಗಳ ಸಮರ; ಇಸ್ರೇಲ್ ಯೋಜನೆ ಏನು?

ಹಾವೇರಿಯಲ್ಲಿ ಭೀಕರ ಅಪಘಾತ: ಬಸ್ ಗಾಗಿ ಕಾದಿದ್ದವರ ಮೇಲೆ Bus ರೂಪದಲ್ಲೇ ಬಂದ ಜವರಾಯ! ಮಗು ಸಾವು! Video

SCROLL FOR NEXT